ಹರಿತಲೇಖನಿ ದಿನಕ್ಕೊಂದು ಕಥೆ: ಅದೃಷ್ಟದ ಕರೆ| daily story

Channel Gowda
Hukukudi trust

daily story: ಒಂದು ಕಾಡಿನಲ್ಲಿ ಪ್ರಾಣಿಗಳನ್ನು ಬೇಟೆಯಾಡಿಕೊಂಡು ಬದುಕುತ್ತಿದ್ದ ಬೇಟೆಗಾರನಿದ್ದ. ಅದೊಂದು ಬಾರಿ ಅವನು ಕಾಡಿನಲ್ಲಿ ಹೋಗುತ್ತಿದ್ದಾಗ ಒಬ್ಬ ಋಷಿ ಕಾಡ್ಲಿಚ್ಚಿನಲ್ಲಿ ಸಿಲುಕಿ ಹೊರ ಬರಲಾಗದೆ ಪರಿತಪಿಸುವುದನ್ನು ನೋಡಿದ. ಕೂಡಲೇ ಬೇಟೆಗಾರ ಬೆಂಕಿಯನ್ನು ಆರಿಸಿ ಋಷಿಯನ್ನು ಪಾರು ಮಾಡಿದ.

hulukudi maharathotsava
Aravind, BLN Swamy, Lingapura

ಋಷಿಗೆ ಸಂತೋಷವಾಯಿತು. “ನಿನ್ನಲ್ಲಿ ಒಳ್ಳೆಯ ಮನಸ್ಸಿಲ್ಲದೆ ಹೋಗಿದ್ದರೆ ಬೆಂಕಿಯಿಂದ ನಾನು ಪಾರಾಗುತ್ತಿರಲಿಲ್ಲ. ಎಲ್ಲ ಪ್ರಾಣಿಗಳಲ್ಲೂ ದಯೆ ತೋರಿ ಪ್ರೀತಿಯಿಂದ ವರ್ತಿಸು. ನಿನಗೆ ಒಳ್ಳೆಯದಾಗುತ್ತದೆ”ಎಂದು ಹೇಳಿದ.

ಬೇಟೆಗಾರನು ‘ಆದರೆ ನಾನು ಮೃಗಗಳನ್ನು ಬೇಟೆಯಾಡಿ ಬದುಕುವವನು. ಬೇರೆ ಯಾವ ಕೆಲಸವೂ ನನಗೆ ಗೊತ್ತಿಲ್ಲ. ನನಗೆ ಜೀವನದಲ್ಲಿ ಒಳ್ಳೆಯದಾಗುವುದು ಹೇಗೆ?’ ಎಂದು ಕೇಳಿದ.

Hulukudi mahajathre
Aravind, BLN Swamy, Lingapura

ಋಷಿಯು ‘ಚಿಂತಿಸಬೇಡ. ಇಲ್ಲೇ ಸನಿಹದ ಮರದ ಪೊಟರೆಯೊಂದರಲ್ಲಿ ಬಂಗಾರದ ಬಣ್ಣದ ಹಕ್ಕಿಯೊಂದಿದೆ. ಅದನ್ನು ಹಿಡಿದು ತಂದು ಮನೆಯಲ್ಲಿ ಸಾಕಿದರೆ ನಿನ್ನ ಅದೃಷ್ಟ ಖುಲಾಯಿಸಿ ದೇಶದ ರಾಜನಾಗುವ ಯೋಗ್ಯತೆ ನಿನ್ನದಾಗುತ್ತದೆ” ಎಂದನು.

ಬೇಟೆಗಾರನು ಸನಿಹದ ಮರಗಳಲ್ಲಿ ಹುಡುಕಿದಾಗ ಒಂದು ಮರದ ಪೊಟರೆಯಲ್ಲಿ ಬಂಗಾರದ ಬಣ್ಣದ ಹಕ್ಕಿ ಕಾಣಿಸಿತು. ಅದನ್ನು ಹಿಡಿದು ಮನೆಗೆ ತಂದ. ಪಂಜರದಲ್ಲಿಟ್ಟು ಪ್ರೀತಿಯಿಂದ ಕಾಳು, ನೀರು ಕೊಟ್ಟು ಸಾಕತೊಡಗಿದ. ಮುಂದೆ ತನ್ನ ಅದೃಷ್ಟದ ಬಾಗಿಲು ತೆರೆಯಲಿರುವ ಅದನ್ನು ಚೆನ್ನಾಗಿ ರಕ್ಷಿಸಿಕೊಂಡು ಬಂದ.

ಒಂದು ದಿನ ರಾತ್ರಿ ಬೇಟೆಗಾರನ ಮನೆಯಂಗಳದಲ್ಲಿ ಕಾಲು ಗೆಜ್ಜೆಯ ಸದ್ದು ಕೇಳಿಸಿತು. ಅವನು ದೀಪ ಉರಿಸಿಕೊಂಡು ಹೊರಗೆ ಬಂದು ನೋಡಿದಾಗ ಆಭರಣಗಳಿಂದ ಅಲಂಕೃತಳಾದ ಒಬ್ಬಳು ಹೆಣ್ಣು ಅಲ್ಲಿ ನಿಂತಿದ್ದಳು. ‘ನಾನು ಸಂಪತ್ತಿನ ಒಡತಿ ಲಕ್ಷ್ಮಿ, ನಿನ್ನ ಮನೆಯಲ್ಲಿರಲು ಬಂದಿದ್ದೇನೆ. ಒಳಗೆ ಕರೆದುಕೋ’ ಎಂದಳು.

‘ಛೇ, ನಿನಗೆ ನಾನೇಕೆ ಆಶ್ರಯ ಕೊಡಲಿ? ಅದೃಷ್ಟದ ಬಾಗಿಲು ತೆರೆಯಬಲ್ಲ ಬಂಗಾರದ ವರ್ಣದ ಹಕ್ಕಿ ನನ್ನ ಮನೆಯೊಳಗಿದೆ. ಮುಂದೆ ಅದರಿಂದಾಗಿ ನಾನು ಸಕಲ ಐಶ್ವರ್ಯಗಳನ್ನೂ ಪಡೆಯಬಲ್ಲೆ. ನೀನು ನನಗೆ ಬೇಕಾಗಿಲ್ಲ’ ಎಂದನು ಬೇಟೆಗಾರ.

ಮುಂದೊಂದು ದಿನ ಬೇಟೆಗಾರ ತನ್ನ ಹಕ್ಕಿಗೆ ಕಾಳು ತರಲು ಕಾಡಿಗೆ ಹೋಗಿದ್ದ. ಆಗ ಆ ದೇಶದ ರಾಜಕುಮಾರಿ ಪಲ್ಲಕಿಯಲ್ಲಿ ಕುಳಿತು ಯಾವುದೋ ಉತ್ಸವಕ್ಕೆ ಹೊರಟಿದ್ದಳು. ಆಗ ಕಳ್ಳರ ತಂಡವೊಂದು ಅವಳನ್ನು ಅಪಹರಿಸಲು ಸಿದ್ಧವಾಗಿ ಬಂತು. ರಾಜಕುಮಾರಿ ಆರ್ತಳಾಗಿ ಕೂಗಿಕೊಂಡಳು. ಬೇಟೆಗಾರ ಇದನ್ನು ಕಂಡು ವೀರಾವೇಶದಿಂದ ಹೋರಾಡಿ ಕಳ್ಳರನ್ನು ಓಡಿಸಿದ. ರಾಜಕುಮಾರಿ ಸಂತಸಗೊಂಡು, ‘ಅಯ್ಯಾ, ನಿನ್ನಿಂದಾಗಿ ನನ್ನ ಮಾನ- ಪ್ರಾಣ ಎರಡೂ ಉಳಿಯಿತು. ನೀನು ನನ್ನನ್ನು ಮದುವೆಯಾಗಬೇಕು’ ಎಂದಳು.

ಆ ಮಾತಿಗೆ ಬೇಟೆಗಾರನು ನಿರಾಕರಿಸಿದ. ‘ಮುಂದೆ ನಾನು ದೊಡ್ಡ ಅದೃಷ್ಟವನ್ನು ಗಳಿಸಲಿದ್ದೇನೆ’ ಎಂದು ಹೇಳಿದ. ಹಕ್ಕಿಯ ಅಕ್ಕರೆಯಲ್ಲೇ ಬೇಟೆಗಾರ ತನ್ನ ಬದುಕಿನ ಬಹುಭಾಗವನ್ನು ಕಳೆದ. ಅವನ ಮೈ ಸುಕ್ಕು ಬಿದ್ದು ತಲೆಗೂದಲು ಹಣ್ಣಾಗಿ ಮುದುಕನಾದ. ಆಗ ಒಂದು ದಿನ ಹೊಂಬಣ್ಣದ ಹಕ್ಕಿ ಸಾವಿನ ಅಂಚು ತಲಪಿತು. ಅಯ್ಯೋ, ಋಷಿಯ ಮಾತು ಸುಳ್ಳಾಯಿತೇ? ಈ ಹಕ್ಕಿಯಿಂದಾಗಿ ನನ್ನ ಅದೃಷ್ಟದ ಬಾಗಿಲು ತೆರೆಯುತ್ತದೆ, ದೇಶದ ರಾಜನಾಗುತ್ತೇನೆಂದು ಅವನೆಂದಿದ್ದ. ಆದರೆ ಹಕ್ಕಿಯೇ ಸತ್ತು ಹೋಗುತ್ತಿದೆಯಲ್ಲ! ಎಂದು ಪರಿತಪಿಸಿದ.

ಆಗ ಆ ಹಕ್ಕಿ ಹೇಳಿತು, ‘ಅಯ್ಯಾ, ಅದೃಷ್ಟ ಎರಡು ಸಲ ನಿನ್ನ ಮನೆ ಬಾಗಿಲು ತಟ್ಟಲು ಬಂದರೂ ನೀನು ತಿರಸ್ಕರಿಸಿದೆ. ಅದೃಷ್ಟಲಕ್ಷ್ಮಿ ಬಂದಾಗ ಮನೆಯೊಳಗೆ ಸೇರಿಸಿಕೊಳ್ಳಲಿಲ್ಲ. ರಾಜಕುಮಾರಿಯ ಕೈ ಹಿಡಿದರೆ ದೇಶದ ರಾಜ ನೀನೇ ಆಗುತ್ತಿದ್ದೆ. ಮುಂದೆ ದೊಡ್ಡ ಅದೃಷ್ಟ ಕಾದಿದೆಯೆಂದು ಸಿಕ್ಕಿದ ಅವಕಾಶವನ್ನು ಕೈಬಿಟ್ಟರೆ ಇನ್ನಾವ ಸ್ವರ್ಗದ ಜೀವನ ನಿನಗೆ ಸಿಗುತ್ತದೆ?’ ಎಂದು ಹೇಳಿ ಕಣ್ಣು ಮುಚ್ಚಿತು.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. R Ashoka

[ccc_my_favorite_select_button post_id="102295"]
ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ದಿವ್ಯಸಾನಿಧ್ಯವನ್ನು ರಂಭಾಪುರಿ ಶಾಖಾ ಹಿರೇಮಠದ ಷ.ಬ್ರ.ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. Doddaballapura

[ccc_my_favorite_select_button post_id="102267"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. Murder

[ccc_my_favorite_select_button post_id="102299"]
Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ಅಪಘಾತ ತಡೆಗೆ ಟೋಲ್ ಸಿಬ್ಬಂದಿಗಳು, ತಾಲೂಕು ಆಡಳಿತ, ಜನಪ್ರತಿನಿದಿಗಳು ಯಾವುದೇ ಕ್ರಮಕೈಗೊಳ್ಳದೆ ಉಳಿದಿದ್ದಾರೆ. ಇದರಿಂದಾಗಿ ಪದೇ ಪದೇ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. Doddaballapura

[ccc_my_favorite_select_button post_id="102061"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!