ಹರಿತಲೇಖನಿ ದಿನಕ್ಕೊಂದು ಕಥೆ: ನಿಜವಾದ ಗೆಳೆಯರು| Daily story

Daily story ಹಿಂದೆ ಒಬ್ಬ ವ್ಯಾಪಾರಿ ಇದ್ದನು, ಅವನ ಹತ್ತಿರ ಅವನುಗಳಿಸಿದ್ದಲ್ಲದೆ ಅವನ ಹಿರಿಯರು ಗಳಿಸಿದ ಅಪಾರ ಸಂಪತ್ತು ಇತ್ತು.

ತುಂಬಾ ಉದಾರಿಯಾಗಿದ್ದ ಆ ವ್ಯಾಪಾರಿ ಯಾವಾಗಲೂ ಅಸಹಾಯಕರಿಗೆ ಸಹಾಯ ಮಾಡುತ್ತಿದ್ದ. ಆದರೆ ಆತನ ಔದಾರ್ಯದ ದುರುಪಯೋಗ ಮಾಡಿಕೊಳ್ಳುವವರೇ ಹೆಚ್ಚಾಗಿದ್ದರು. ಪ್ರತಿದಿನ ಅನೇಕ ಮಿತ್ರರು ಅವನ ಮನೆಗೆ ಬಂದು ಉಂಡು ತಿಂದು ಹೋಗುತ್ತಿದ್ದರು. ಹೋಗುವಾಗ ಅವನನ್ನು ಕೊಂಡಾಡಲು ಮರೆಯುತ್ತಿರಲಿಲ್ಲ, ಅವನನ್ನು ಸಂತೋಷಪಡಿಸಿ, ತಮ್ಮ ಕೆಲಸವನ್ನು ಸಾಧಿಸಿಕೊಳ್ಳುತ್ತಿದ್ದರು. ಅವರಲ್ಲಿ ಅನೇಕರು ಸ್ವಾರ್ಥಿ ಹಾಗೂ ಆಶೆಬುರುಕರು ಇದ್ದರು.

ಆ ವ್ಯಾಪಾರಿಯು ಬಹಳ ಬುದ್ಧಿವಂತನೂ ಆಗಿದ್ದ. ಅವನು ತನ್ನ ಮಿತ್ರರ ನಿಜವಾದ ಸ್ವರೂಪ ತಿಳಿಯಲು ಕಾತರನಾಗಿದ್ದ. ಅಂತೆಯೇ ಒಂದು ದಿನ ಅವರನ್ನು ಪರೀಕ್ಷಿಸುವ ನಿಶ್ಚಯ ಮಾಡಿದೆ.

ದಿನವೂ ತನ್ನ ಬಳಿ ಬರುವ ಆ ಎಲ್ಲ ಮಿತ್ರರನ್ನೂ ಭೋಜನಕೂಟಕ್ಕೆ ಆಮಂತ್ರಿಸಿದನು. ನಿತ್ಯದಂತೆ ಈ ದಿನವೂ ತೃಪ್ತಿಯಾಗುವಂತೆ ಉಂಡು ಅವನ ಗುಣಗಾನ ಮಾಡತೊಡಗಿದರು. ಸಮಯ ಸಾಧಿಸಿ ವ್ಯಾಪಾರಿ ಕೇಳಿದ ಮಿತ್ರರೆ ನಿಮಗೊಂದು ಮಾತು ಕೇಳಬೇಕಿದೆ ದರೋಡೆಕೋರರು ನನ್ನ ಮನೆಯ ಮೇಲೆ ದಾಳಿ ಮಾಡಿ ನನ್ನನ್ನು ಕೊಂಡು ನನ್ನ ಸಂಪತ್ತನ್ನು ಅಪಹರಿಸಬೇಕೆಂದು ಹೊಂಚು ಹಾಕಿದ್ದಾರೇದು ನನಗೆ ತಿಳಿದು ಬಂದಿದೆ.

ವ್ಯಾಪಾರಿಯ ಮಾತುಗಳನ್ನು ಕೇಳುತ್ತಿದ್ದಂತೆ ಎಲ್ಲ ಮಿತ್ರರಿಗೆ ಆಶ್ಚರ್ಯವೂ. ಭಯವೂ ಆಯಿತು. ಬೆದರಿದ ಜಿಂಕೆಯಂತೆ ಅವರು ಪರಸ್ಪರ ಮುಖ ನೋಡತೊಡಗಿದರು. ಎಲ್ಲರ ಮುಖದ ಮೇಲೆ ಪ್ರಶ್ನೆಯ ಚಿಹ್ನೆ ಮೂಡಿತು.

ವ್ಯಾಪಾರಿ ಮುಂದೆ ಹೇಳತೊಡಗಿದ, ‘ಬಂಧುಗಳೇ, ನೀವೆಲ್ಲ ನನ್ನವರು. ಈ ಸನ್ನಿವೇಶದಲ್ಲಿ ನನ್ನ ಹಾಗೂ ನನ್ನ ಸಂಪತ್ತಿನ ರಕ್ಷಣೆಯ ಭಾರ ನಿಮ್ಮದು. ನೀವೆಲ್ಲರೂ ಜವಾಬ್ದಾರಿಯನ್ನು ನಿರ್ವಹಿಸುವಿರೆಂದು ನಾನು ನಂಬಿದ್ದೇನೆ. ಇಂದು ರಾತ್ರಿ ನೀವೆಲ್ಲ ಇಲ್ಲಿಗೆ ಬನ್ನಿ. ನಾವೆಲ್ಲರೂ ಒಟ್ಟಿಗೆ ಸೇರಿ ಆ ದರೋಡೆಕೋರರನ್ನು ಹಿಡಿಯೋಣೆ.

ಈ ಮಾತನ್ನು ಕೇಳಿ ‘ಅವಶ್ಯವಾಗಿ ಬರುತ್ತೇವೆ. ನಿಮ್ಮ ಹಾಗೂ ನಿಮ್ಮ ಸಂಪತ್ತಿನ ರಕ್ಷಣೆ ಮಾಡಲು ಅವಶ್ಯಕವಾಗಿ ಬರುತ್ತೇವೆ ಎಂದರು.

ರಾತ್ರಿಯಾಯಿತು. ಆದರೆ ನೂರಾರು ಮಿತ್ರರಲ್ಲಿ ಕೇವಲ ಇಬ್ಬರು ವ್ಯಾಪಾರಿಯ ರಕ್ಷಣೆಗೆ ಬಂದಿದ್ದರು. ಇದರಿಂದ ಈ ವ್ಯಾಪಾರಿ ಒಂದು ನಿರ್ಣಯಕ್ಕೆ ಬಂದ. ಇಷ್ಟು ಮಿತ್ರರಲ್ಲಿ ಇವರಿಬ್ಬರೇ ನಿಜವಾದ ಮಿತ್ರರು. ಉಳಿದವರು ಸ್ವಾರ್ಥಿಗಳು, ಸಮಯ ಸಾಧಕರು ಎಂದು ವ್ಯಾಪಾರಿಗೆ ಮನದಟ್ಟಾಯಿತು.

ಗೆಳೆತನದ ಪರೀಕ್ಷೆ ನಿಜವಾಗಿ ಸಂಕಟ ಸಮಯದಲ್ಲಿ ಆಗುತ್ತದೆ ಎಂದು ತಿಳಿದುಕೊಂಡಿದ್ದ ಆ ಜಾಣ ವ್ಯಾಪಾರಿ.

ಕೃಪೆ: ಸಾಮಾಜಿಕ ಜಾಲತಾಣ. (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

ತಮಿಳುನಾಡು BJP ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ನಾನಿಲ್ಲ; ಅಣ್ಣಾಮಲೈ

ತಮಿಳುನಾಡು BJP ಅಧ್ಯಕ್ಷ ಸ್ಥಾನದ ರೇಸ್ ನಲ್ಲಿ ನಾನಿಲ್ಲ; ಅಣ್ಣಾಮಲೈ

ಕೊಯಮತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧ್ಯಕ್ಷ ಹುದ್ದೆಗೆ ನಾನು ಸ್ಪರ್ಧೆ ಮಾಡುವುದಿಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷಕ್ಕೆ Annamalai

[ccc_my_favorite_select_button post_id="104958"]
ಮೈ ಫ್ರೆಂಡ್ ಮೋದಿ ಎನ್ನುತ್ತಲೇ ಭಾರತಕ್ಕೆ ಬರೆ ಎಳೆದ ಟ್ರಂಪ್

ಮೈ ಫ್ರೆಂಡ್ ಮೋದಿ ಎನ್ನುತ್ತಲೇ ಭಾರತಕ್ಕೆ ಬರೆ ಎಳೆದ ಟ್ರಂಪ್

ಇಷ್ಟು ದಿನ ಬಾಯಿ ಮಾತಲ್ಲೇ ಸುಂಕ ಸಂಘರ್ಷದ ಮಾತುಗಳನ್ನು ಆಡುತ್ತಾ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಂಗಳವಾರ ಮಧ್ಯರಾತ್ರಿ 2.20 (ಭಾರತೀಯ ಕಾಲಮಾನ) trump

[ccc_my_favorite_select_button post_id="104924"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
Doddaballapura: ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಳವು..! Video

Doddaballapura: ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಕಳವು..! Video

ದೇವಾಲಯದ ಬಾಗಿಲು ಮೀಟಿ ಒಳಬಂದಿರುವ ಅಪರಿಚಿತ ದುಷ್ಕರ್ಮಿ, ಹುಂಡಿಯನ್ನು ಹೊಡೆದು ಕಳ್ಳವು ನಡೆಸಿದ್ದಾನೆ ಎನ್ನಲಾಗಿದೆ. Doddaballapura

[ccc_my_favorite_select_button post_id="104979"]
ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಕಾರು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು 15 ಬಾರಿ ನಿರಂತರವಾಗಿ ಉರುಳಿ ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. Video

[ccc_my_favorite_select_button post_id="104851"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!