![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ದೊಡ್ಡಬಳ್ಳಾಪುರ: ದೇವಾಲಯದ ಬಾಗಿಲಿನ ಬೀಗ ತೆರೆದಿರುವ ಐನಾತಿ ಕಳ್ಳರು ಹುಂಡಿಯಲ್ಲಿದ್ದ ಹಣವನ್ನು ದೋಚಿರುವ ಘಟನೆ Doddaballapura ತಾಲೂಕಿನ ತಾಲೂಕಿನ ಪ್ರಸಿದ್ಧ ಶ್ರೀ ಗುಟ್ಟೆ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದಿದೆ.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ಶನಿವಾರ ರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ದೇವಾಲಯದ ಬಾಗಿಲಿನ ಬೀಗ ತೆರೆದು, ದೇವಾಲಯದ ಪ್ರವೇಶಿಸಿರುವ ಕಳ್ಳರು ಹುಂಡಿಯ ಬೀಗ ತೆರೆದು ಹಣವನ್ನು ದೋಚಿದ್ದಾರೆ.
ಆದರೆ ಇತ್ತೀಚಿಗಷ್ಟೇ ಹುಂಡಿ ಹಣ ಎಣಿಕೆ ಕಾರ್ಯ ನಡೆಸಿದ್ದರಿಂದ ಹೆಚ್ಚಿನ ಮೊತ್ತ ಸಂಗ್ರಹವಾಗಿರಲಿಲ್ಲ ಎನ್ನಲಾಗಿದೆ.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ಉಳಿದಂತೆ ಯಾವುದೇ ಒಡವೆಗಳು ಕಳುವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಆದರೆ ಬೀಗ ಅಥವಾ ಬಾಗಿಲು ಮುರಿಯದೆ ಚಾಣಾಕ್ಷತನದಿಂದ ದೇವಾಲಯಕ್ಕೆ ಅಳವಡಿಸಿರುವ ಎರಡು ದೊಡ್ಡ ಬೀಗವನ್ನು ತೆರೆದಿರುವುದು ಕುಖ್ಯಾತ ಕಳ್ಳರ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಕಂದಾಯ ಇಲಾಖೆ ಉಪತಹಶೀಲ್ದಾರ್ ರಾಧ, ಮುಜರಾಯಿ ಇಲಾಖೆಯ ಪಾರುಪತ್ತೆಧಾರ್ ಪ್ರೇಮ್ ಕುಮಾರ್, ಗ್ರಾಮಸಹಾಯಕ ಸುರೇಶ್ ಇದ್ದರು.