daily story| ಹರಿತಲೇಖನಿ ದಿನಕ್ಕೊಂದು ಕಥೆ: ಮರದ ಬೆಲೆ

daily story: ಒಂದು ಹಳ್ಳಿಯಲ್ಲಿ ಮುತ್ತು ಶೆಟ್ಟಿ ಎಂಬುವವನು ವ್ಯಾಪಾರಿಗಳ ‘ವಂಶದಲ್ಲಿ ಜನಿಸಿದ್ದ, ಬಾಲ್ಕದಲ್ಲೇ ತಂದೆಯನ್ನು ಕಳೆದುಕೊಂಡು ಕಷ್ಟದಿಂದ ಬೆಳೆದಿದ್ದ ಅವನಿಗೆ ಮನೆಯಲ್ಲಿ ಸಂಪತ್ತು ರಾಶಿ ಬಿದ್ದರೆ ಮಾತ್ರ ಸುಖವಾಗಿ ಬದುಕಬಹುದೆಂಬ ಭಾವನೆ ಬೆಳೆದಿತ್ತು.

ಸಂಪತ್ತು ಪ್ರಾಮಾಣಿಕನ ಬಳಿಗೆ ಬರುವುದು ನಿಧಾನ, ಧಾರಾವಾಗಿ ಬರಬೇಕೆಂದರೆ ಏನಾದ್ರೂ ಅಡ್ಡ ದಾರಿ ಹಿಡಿಯಬೇಕೆಂಬ ಕೆಟ್ಟ ಯೋಚನೆ ಅವನ ಮನಸ್ಸನ್ನು ಆವರಿಸಿತ್ತು.

ಮುತ್ತು ಶೆಟ್ಟಿಯ ಮನೆಯ ಬಳಿ ಸುಗಂಧ ಬೀರುವ ರತ್ನಗಂಧ ಎಂಬ ಮರಗಳಿದ್ದವು. ಅವನ ತಂದೆ ಅದರ ಗಿಡ ನೆಟ್ಟು ನೀರೆರೆದು ಆ ಮರವಾಗುವ ತನಕ ಬೆಳೆಸಿದ್ದ. ‘ಯಾವ ಕಾಲಕ್ಕೂ ಈ ಮರಗಳನ್ನು ಕಡಿದು ಮಾರಾಟ ಮಾಡಬಾರದು. ಇದರ ಹವೆ ಬಲು ದೂರದವರೆಗೂ ಗಾಳಿಯನ್ನು ಶುದ್ದೀಕರಿಸಿ ಒಳ್ಳೆಯ ಆರೋಗ್ಯ ನೀಡುತ್ತದೆ. ಈ ಅಮೂಲ್ಯ ವೃಕ್ಷ ಸಂತತಿ ಬೇಕೆಂದರೆ ಸುಲಭವಾಗಿ ಸಿಗುವುದಿಲ್ಲ’ ಎಂದು ಮಗನಿಗೆ ಕಿವಿಮಾತು ಹೇಳಿದ್ದ. ಹೀಗಾಗಿ ಮರಗಳು ವಿಶಾಲವಾಗಿ ಬೆಳೆದು ನೆರಳು ಕೊಡುತ್ತಿದ್ದವು.

ಹಗಲಿರುಳೂ ಕುಬೇರನಾಗುವ ಕನಸು ಕಾಣುತ್ತಿದ್ದ ಮುತ್ತು ಶೆಟ್ಟಿಯನ್ನು ಅವನ ಗೆಳೆಯರು ತಪ್ಪು ದಾರಿಗೆಳೆದರು. ‘ಅಂಗೈಯಲ್ಲಿ ಬೆಣ್ಣೆ ಇಡ್ಕೊಂಡು ಯಾರಾದರೂ ತುಪ್ಪ ಹುಡುಕುತ್ತಾರಾ? ದೊರೆಗಳ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ. ಅಂದು ಉಡುಗೊರೆ ನೀಡಿದವರಿಗೆಲ್ಲ ದೊರೆ ಬಂಗಾರದ ನಾಣ್ಯಗಳನ್ನು ಬಾಚಿ ಬಾಚಿ ಕೊಡುತ್ತಾರೆ. ರತ್ನಗಂಧ ವೃಕ್ಷಗಳನ್ನು ಸುಮ್ಮನೆ ಇಟ್ಟುಕೊಂಡರೆ ದುಡ್ಡು ಬರುವುದಿಲ್ಲ. ಮರಗಳನ್ನು ಕಡಿದು ಪೀಠೋಪಕರಣಗಳನ್ನು ಮಾಡಿಸಿ ದೊರೆಗೆ ಉಡುಗೊರೆ ನೀಡು, ಘಮಘಮ ಸುಗಂಧ ಬೀರುವ ಸಾಮಗ್ರಿಗಳನ್ನು ಕಂಡರೆ ದೊರೆಗೆ ಹರ್ಷವಾಗುತ್ತದೆ. ಮೂಟೆಗಟ್ಟಲೆ ಬಂಗಾರ ಕೊಡುತ್ತಾರೆ. ಅಪೂರ್ವವಾದ ಈ ವೃಕ್ಷಗಳ ಬೆಲೆ ದೊರೆಗಳಿಗೆ ಗೊತ್ತಿದೆ ಎಂದು ಕಿವಿಯೂದಿದರು.

ಬಂಗಾರ ಎನ್ನುವಾಗ ಶೆಟ್ಟಿಗೆ ನಾಲಗೆ ನೀರೂರಿತು. ‘ಆದರೆ ಈ ಮರಗಳನ್ನು ಕಡಿಯಬಾರದೆಂದು ಅಪ್ಪ ಹೇಳಿದ್ದಾರಲ್ಲ?’ ಎಂದು ಆತಂಕಗೊಂಡ, ಗೆಳೆಯರು ನಕ್ಕು ಬಿಟ್ಟರು. ‘ಬರುತ್ತಿರುವುದು ಬಂಗಾರದ ನಾಣ್ಯಗಳು ಅಪ್ಪ ಹೇಳಿದ್ದಾರೆಂದು ಸುಮ್ಮನೆ ಕುಳಿತರೆ ಬಡವನಾಗಿಯೇ ಉಳಿಯುತ್ತಿ’ ಎಂದು ಮೂದಲಿಸಿದರು.

ಶೆಟ್ಟಿ ಮರ ಕಡಿಯಲು ಮುಂದಾದಾಗ ಅವನ ತಾಯಿ ಅಡ್ಡ ಬಂದಳು.
ಅಮೂಲ್ಯವಾದ ವೃಕ್ಷ ಸಂತತಿಯನ್ನು ಅಳಿಸಬಾರದೆಂದು ಯಾಚಿಸಿದಳು. ಆದರೆ ಯಾರ ಮಾತಿಗೂ ಕಿವಿಗೊಡದ ಮುತ್ತು ಶೆಟ್ಟಿ ಮರಗಳನ್ನು ಕಡಿದುರುಳಿಸಿ ಪೀಠೋಪಕರಣಗಳನ್ನು ಸಿದ್ಧಗೊಳಿಸಿದ.
ಆ ಹೊತ್ತಿಗೆ ಶೆಟ್ಟಿಯ ಒಬ್ಬನೇ ಮಗನಿಗೆ ವಿಷದ ಹಾವು ಕಡಿಯಿತು.

ಸಾವು ಬದುಕಿನೊಂದಿಗೆ ಹೋರಾಡುತ್ತಿದ್ದ ಅವನನ್ನು ಪರೀಕ್ಷಿಸಿದ ವೈದ್ಯರು. ‘ರತ್ನಗಂಧ ಎಂಬ ಅಪರೂಪದ ಮರದ ತೊಗಟೆಯನ್ನು ತಂದರೆ ಅದರಿಂದ ಔಷಧ ತಯಾರಿಸಿ ಇವನನ್ನು ಬದುಕಿಸಬಹುದು. ಆದರೆ ಇಂತಹ ಅಮೂಲ್ಯ ಮದ್ದು ಸಿಗುವುದು ತೀರ ಅನುಮಾನ ಎಂದರು.
‘ಹೀಗೆಂದರೆ ಹೇಗೆ? ನನ್ನ ಮಗನನ್ನು ಏನಾದರೂ ಮಾಡಿ ಬದುಕಿಸಿ ಕೈತುಂಬ ಹೊನ್ನು ಕೊಡುತ್ತೇನೆ’ ಎಂದ ಶೆಟ್ಟಿ. ವೈದ್ಯರಿಗೆ ನಗು ಬಂತು.

ಗಿಡಗಳು ಮಾಡುವ ಕೆಲಸವನ್ನು ಹಣ ಮಾಡುವುದಿಲ್ಲಪ್ಪ ನನ್ನ ತೂಕದ ಬಂಗಾರ ಕೊಟ್ಟರೂ ಮೂಲಿಕೆಯಿಲ್ಲದೆ ವಿಷ ಇಳಿಯದು. ಹಣದಿಂದ ಪ್ರಾಣವನ್ನು ಕೊಂಡುಕೊಳ್ಳಲಾಗದು’ ಎಂದರು.
ಮುತ್ತು ಶೆಟ್ಟಿ ತಲೆ ಮೇಲೆ ಕೈಹೊತ್ತು ಕುಳಿತ. ಧನದಾಹದಿಂದ ತಾನು ಕಡಿದು ಹಾಕಿದ ಮರವಿರುತ್ತಿದ್ದರೆ ತನ್ನ ಮಗ ಬದುಕಬಹುದಿತ್ತು. ತಾನೆಂತಹ ತಪ್ಪು ಮಾಡಿದೆ! ಎಂದು ಅಳತೊಡಗಿದ.

ಆಗ ಅದೇ ಮರದಿಂದ ತಯಾರಿಸಿದ ಒಂದು ಮಂಚವು ಮನುಷ್ಯ ಭಾಷೆಯಲ್ಲಿ ಅವನನ್ನು ಕರೆಯಿತು. ‘ಅಯ್ಯಾ, ನಿನ್ನ ತಂದೆ ನಮ್ಮನ್ನು ನೆಟ್ಟು ನೀರೆರೆದು ಗೊಬ್ಬರ ಹಾಕಿ ಬೆಳೆಸಿದರು. ನಾವು ಮರಗಳು ನೆಟ್ಟವನ ಋಣ ತೀರಿಸದೆ ಬಿಡುವುದಿಲ್ಲ. ಅದಕ್ಕಾಗಿ ನಿನಗೊಂದು ಉಪಕಾರ ಮಾಡುತ್ತೇವೆ.

ನಮ್ಮ ತೊಗಟೆಯೂ ಸಿಗದಂತೆ ನೀನು ನಾಶ ಮಾಡಿರುವೆ. ಇದರ ಬದಲು ನಮ್ಮನ್ನು ಬೆಂಕಿಯಲ್ಲಿ ಸುಟ್ಟು ಅದರಿಂದ ಸಿಗುವ ಬೂದಿಯನ್ನು ನಿನ್ನ ಮಗನ ಮೈಗೆ ಲೇಪಿಸು ನೀರಿನಲ್ಲಿ ಕದಡಿ ಕುಡಿಸು. ಅವನು ವಿಷದ ಪ್ರಭಾವದಿಂದ ಮುಕ್ತನಾಗಿ ಬದುಕುತ್ತಾನೆ’ ಎಂದಿತು.

ಮುತ್ತು ಶೆಟ್ಟಿ ಹಾಗೆಯೇ ಮಾಡಿ ಮಗನ ಜೀವವುಳಿಸಿಕೊಂಡ. ಹಣದ ಆಶೆಗೆ ಸಸ್ಯಗಳ ಕುಲನಾಶ ಮಾಡಬಾರದು ಎಂಬ ನೀತಿಯನ್ನು ತಿಳಿದುಕೊಂಡು ತಾನೂ ತನ್ನ ತಂದೆಯಂತೆ ಆಮೂಲ್ಯ ಗಿಡಗಳನ್ನು ನೆಟ್ಟು ಬೆಳೆಸಿದ.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಿಲ್ಲ)

ರಾಜಕೀಯ

ಮೈಕ್ರೋ ಫೈನಾನ್ಸ್‌ಗಳಿಂದ ಸತ್ತವರಿಗೆ ನ್ಯಾಯ ನೀಡಿ: ಆರ್‌.ಅಶೋಕ ಆಗ್ರಹ

ಮೈಕ್ರೋ ಫೈನಾನ್ಸ್‌ಗಳಿಂದ ಸತ್ತವರಿಗೆ ನ್ಯಾಯ ನೀಡಿ: ಆರ್‌.ಅಶೋಕ ಆಗ್ರಹ

ಮೈಕ್ರೋ ಫೈನಾನ್ಸ್‌ನ ಕಿರುಕುಳದಿಂದ ಆತ್ಮಹತ್ಯೆಗೆ ಶರಣಾದ ತಾಯಿ ಮತ್ತು ಮಗನ ಕುಟುಂಬಕ್ಕೆ ಆರ್‌.ಅಶೋಕ (R Ashoka) ಭೇಟಿ ನೀಡಿ ಸಾಂತ್ವನ ಹೇಳಿದರು.

[ccc_my_favorite_select_button post_id="102357"]
ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆಸಿದರು. ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪಕ್ಷ. ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, nikhil kumaraswamy

[ccc_my_favorite_select_button post_id="102348"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಮೊದಲ ವರ್ಷದ ಬಿಎಸ್ಪಿ ನರ್ಸಿಂಗ್ ವ್ಯಾಸಂಗ ಮಾಡ್ತಿದ್ದರು. ಮಂಗಳವಾರ ರಾತ್ರಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.suicide

[ccc_my_favorite_select_button post_id="102335"]
ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ

ಹುಲಿಗೆಮ್ಮ ದೇವಿಯ ದೇವರ ಕಾರ್ಯಕ್ರಮಕ್ಕಾಗಿ ಗುರುಗುಂಟಾಗೆ ತೆರಳುತ್ತಿದ್ದಾಗ ತಿಂಥಣಿ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ

[ccc_my_favorite_select_button post_id="102325"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!