ಹರಿತಲೇಖನಿ ದಿನಕ್ಕೊಂದು ಕಥೆ: ಬುದ್ಧಿವಂತ ಇಲಿ

Channel Gowda
Hukukudi trust

ಅದೊಂದು ದೊಡ್ಡ ಕಾಡಾಗಿರದಿದ್ದರೂ ದೊಡ್ಡದಾದ ಆಲದ ಮರ, ಸುತ್ತಲೂ ಬೆಳೆದು ನಿಂತ ಗಿಡ- ಮರಗಳಿಂದ ಕೂಡಿದ ಚಿಕ್ಕದಾದ ಕಾಡಾಗಿತ್ತು. ಆ ಕಾಡಿನಲ್ಲಿ ಚಿಗರೆ. ಮೊಲ, ಬೆಕ್ಕು, ಇಲಿ, ಮುಂಗಲಿ ಮುಂತಾದ ಪ್ರಾಣಿಗಳು, ಗಿಳಿ, ಗರುಡ, ಗೂಗೆ, ನವಿಲು, ಪಾರಿವಾಳ ಮುಂತಾದ ಪಕ್ಷಿಗಳು ವಾಸವಾಗಿದ್ದವು.

hulukudi maharathotsava
Aravind, BLN Swamy, Lingapura

ವಿಶಾಲವಾಗಿ ರೆಂಬೆ ಕೊಂಬೆಗಳನ್ನು ಹರಡಿಕೊಂಡು ನಿಂತ ಮರದಲ್ಲಿ ಎಲ್ಲ ಪಕ್ಷಿಗಳೂ ಗೂಡು ಕಟ್ಟಿಕೊಂಡು ತಮ್ಮ ಮರಿಗಳೊಂದಿಗೆ ಸಂತೋಷವಾಗಿದ್ದವು.

ಈ ಆಲದ ಮರದ ಸುತ್ತಲೂ ಅನೇಕ ಕಲ್ಲು ಬಂಡೆಗಳಿದ್ದವು. ಬಂಡೆಗಳ ಮಧ್ಯೆ ಅನೇಕ ಚಿಕ್ಕ ಚಿಕ್ಕ ಪ್ರಾಣಿಗಳು ಬಿಲ ಮಾಡಿಕೊಂಡು ವಾಸವಾಗಿದ್ದವು. ಅವುಗಳಲ್ಲಿ ಇಲಿಯೂ ಒಂದಾಗಿತ್ತು. ಅದು ತನ್ನ ಮರಿಯೊಂದಿಗೆ ಸುತ್ತಮುತ್ತ ದೊರೆಯಬಹುದಾದ ಹುಳು-ಹುಪ್ಪಡಿ, ಹಣ್ಣು, ಬೀಜಗಳನ್ನು ಹೆಕ್ಕಿ ತಿಂದು ಸುಖವಾಗಿತ್ತು.

Hulukudi mahajathre
Aravind, BLN Swamy, Lingapura

ಇದನ್ನು ಕಂಡ ಬೆಕ್ಕೊಂದು ಹೇಗಾದರೂ ಮಾಡಿ ಈ ಇಲಿಯನ್ನು ಹಿಡಿದು ತಿನ್ನಬೇಕು ಎಂದು ಯೋಚಿಸುತ್ತ ದಿನಾ ಒಂದಲ್ಲ ಒಂದು ರೀತಿ ಹೊಂಚು ಹಾಕುತ್ತಲೇ ಇತ್ತು.

ಇಲಿ ಬೆಕ್ಕಿನ ಹೊಂಚನ್ನು ಅರಿತು ತನ್ನ ಚಾಣಾಕ್ಷತನದಿಂದ ಬಿಲದೊಳಗೆ ಸೇರಿ ಬಿಡುತ್ತಿತ್ತು. ಹೀಗೆ ಸುಮಾರು ದಿನಗಳು ಕಳೆದವು.

ಒಂದು ದಿನ ಬೇಟೆಗಾರ ಆಲದ ಮರದ ಹತ್ತಿರ ತನ್ನ ಬಲೆಯನ್ನು ಬೀಸಿ ಹೋದ. ಅದನ್ನರಿಯದೇ ಚಿಗರೆಯೊಂದು ಅದರಲ್ಲಿ ಸಿಕ್ಕು ಬೇಟೆಗಾರನಿಗೆ ಬಲಿಯಾಯಿತು. ಇಲಿ ತನ್ನ ಬಳಗದವರಿಗೆ ‘ಇಲ್ಲಿ ಅಪಾಯ ತಪ್ಪಿದ್ದಲ್ಲ. ನಾವೆಲ್ಲರೂ ಎಚ್ಚರದಿಂದಿರಬೇಕು’ ಎಂದು ಎಚ್ಚರಿಸಿತು. ಹೀಗೆ ಕೆಲವು ದಿನಗಳು ಉರುಳಿದವು.

ಕೆಲವು ದಿನಗಳ ನಂತರ ಬೇಟೆಗಾರ ಅದೇ ಆಲದ ಮರದ ಕೆಳಗೆ ಮತ್ತೆ ಬಲೆ ಬೀಸಿ ಹೊರಟು ಹೋದ. ಇದನ್ನು ತನ್ನ ಬಿಲದಿಂದಲೇ ನೋಡಿದ ಇಲಿ ಬಿಲದೊಳಗೆ ಅಡಗಿಕೊಂಡಿತು.

ಬೆಳಕು ಹರಿಯುತ್ತಲೇ ಬಿಲದಿಂದಲೇ ಇಣುಕಿ ನೋಡಿತು. ಈ ಸಲ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದು ಬೇರೆ ಯಾರೂ ಅಲ್ಲ, ಅದು ಬೆಕ್ಕಾಗಿತ್ತು.

ಇಲಿಗೆ ಎಲ್ಲಿಲ್ಲದ ಆನಂದ. ತನ್ನನ್ನು ಹಿಡಿದು ತಿನ್ನುವ ಆಸೆಯಲ್ಲಿ ಬಂದು ಬಲೆಗೆ ಬಿದ್ದಿದೆ ಎಂದು ಅರಿತ ಇಲಿ ತನ್ನ ಬಳಗವನ್ನೆಲ್ಲ ಕರೆದು ಸಂತೋಷವನ್ನು ಹಂಚಿಕೊಂಡಿತು. ಹೀಗೆ ಸಂತೋಷದಲ್ಲಿ ಕಲ್ಲು ಬಂಡೆಗಳ ಮೇಲೆ ಅತ್ತ ಇತ್ತ ಓಡಾಡುತ್ತಿರುವಾಗ ಅಲ್ಲೊಂದು ಮುಂಗಲಿ ಕಾಣಿಸಿಕೊಂಡಿತು.

ಇದೇನಪ್ಪ ಒಂದರ ಕಾಟ ತಪ್ಪಿತು ಎನ್ನುವಷ್ಟರಲ್ಲಿ ಇನ್ನೊಂದು ಬಂತಲ್ಲ, ಏನು ಮಾಡುವುದು? ಎಂದು ಯೋಚಿಸುತ್ತಿದ್ದಂತೆ ಅದಕ್ಕೊಂದು ವಿಚಾರ ಹೊಳೆಯಿತು. ಇನ್ನು ಮುಂದೆ ಆಲದ ಮರದ ಮೇಲೆ ವಾಸ ಮಾಡಿದರಾಯಿತು ಎಂದು ಮರದ ಕಡೆ ನೋಡಿತು. ಅಲ್ಲಿ ಕುಳಿತ ಒಂದು ಗೂಗೆ ಇಲಿಯನ್ನೆ ಗುರಿಯಾಗಿಟ್ಟು ನೋಡುತ್ತಿತ್ತು. ಇದನ್ನು ಕಂಡ ಇಲಿ ಗಾಬರಿಯಾಯಿತು. ಕೆಳಗೆ ಮುಂಗಲಿ, ಮೇಲೆ ಗೂಗೆ, ಏನು ಮಾಡಲಿ ದೇವರೆ? ಎಂದು ಚಡಪಡಿಸತೊಡಗಿತು.

ಇಲಿಗೆ ಒಂದು ವಿಚಾರ ಹೊಳೆಯಿತು. ಅದು ನೇರವಾಗಿ ಬಲೆಯಲ್ಲಿ ಸಿಕ್ಕುಬಿದ್ದ ಬೆಕ್ಕಿನ ಸನಿಹಕ್ಕೆ ಹೋಗಿ ವಿನಯದಿಂದ ಕೇಳಿಕೊಂಡಿತು. ‘ನೋಡು ಬೆಕ್ಕಪ್ಪ, ನಾನು ನಿನ್ನನ್ನು ಈ ಬಲೆಯಿಂದ ಬಿಡಿಸಬಲ್ಲೆ. ಆದರೆ ಒಂದು ಷರತ್ತಿನ ಮೇಲೆ’ ಎನ್ನುತ್ತಿದ್ದಂತೆ ಬೆಕ್ಕು ‘ಏನದು ಷರತ್ತು?’ ಎಂದಿತು.

“ನಾನು ನಿನ್ನನ್ನು ಈ ಬಲೆಯಿಂದ ಬಿಡಿಸಿ ಬೇಟೆಗಾರನಿಂದ ಪಾರು ಮಾಡುತ್ತೇನೆ. ಇದರ ಬದಲಾಗಿ ನೀನು ನನ್ನನ್ನು ಈ ಮುಂಗಲಿ ಹಾಗೂ ಮರದ ಮೇಲಿರುವ ಗೂಬೆಯಿಂದ ರಕ್ಷಿಸುವುದಾಗಿ ಮಾತುಕೊಡು’ ಎಂದಿತು.

ಬಲೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದ ಬೆಕ್ಕಿಗೆ ಪ್ರಾಣ ಉಳಿಸಿಕೊಳ್ಳಲು ಇದು ಒಳ್ಳೆಯ ವಿಚಾರ ಎಂದೆನೆಸಿತು. ‘ಇಲಿರಾಯ, ನಾನು ನಿನ್ನ ಷರತ್ತಿಗೆ ಬದ್ಧನಾಗಿದ್ದೇನೆ’ ಎಂದು ಮಾತು ಕೊಟ್ಟಿತು. ‘ನೀನು ಹೇಳಿದಂತೆ ನಡೆದುಕೊಳ್ಳುತ್ತೇನೆ. ನನ್ನನ್ನು ಪ್ರಾಣಾಪಾಯದಿಂದ ಪಾರು ಮಾಡು’ ಎಂದು ಅಂಗಲಾಚಿತು.

ಇಲಿ ಅಂಜುತ್ತಲೇ ತನ್ನ ಹಲ್ಲುಗಳಿಂದ ಬಲೆಯನ್ನು ಕಡಿದು ಬೆಕ್ಕನ್ನು ಬಿಡಗಡೆಗೊಳಿಸಿತು. ಬೆಕ್ಕು ಇಲಿಯನ್ನು ಮುಂಗಲಿ ಹಾಗೂ ಗೂಗೆಯಿಂದ ರಕ್ಷಿಸಿತು. ಬೆಕ್ಕು ಮತ್ತು ಇಲಿ ಪರಸ್ಪರ ಆನಂದದಿಂದ ತಮ್ಮ ತಮ್ಮ ಮನೆಗಳಲ್ಲಿ ತಮ್ಮ ಬಳಗದ ಜೊತೆ ಸುಖವಾಗಿ ಬಾಳತೊಡಗಿದವು.

ಕೃಪೆ: ಸುದರ್ಶಿನಿ ಅನ್ನಪೂರ್ಣಾ ಕನೋಜ, ಬೈಲಹೊಂಗಲ (ಸಾಮಾಜಿಕ ಜಾಲತಾಣ)

ರಾಜಕೀಯ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. R Ashoka

[ccc_my_favorite_select_button post_id="102295"]
ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ದಿವ್ಯಸಾನಿಧ್ಯವನ್ನು ರಂಭಾಪುರಿ ಶಾಖಾ ಹಿರೇಮಠದ ಷ.ಬ್ರ.ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. Doddaballapura

[ccc_my_favorite_select_button post_id="102267"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. Murder

[ccc_my_favorite_select_button post_id="102299"]
Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ಅಪಘಾತ ತಡೆಗೆ ಟೋಲ್ ಸಿಬ್ಬಂದಿಗಳು, ತಾಲೂಕು ಆಡಳಿತ, ಜನಪ್ರತಿನಿದಿಗಳು ಯಾವುದೇ ಕ್ರಮಕೈಗೊಳ್ಳದೆ ಉಳಿದಿದ್ದಾರೆ. ಇದರಿಂದಾಗಿ ಪದೇ ಪದೇ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. Doddaballapura

[ccc_my_favorite_select_button post_id="102061"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!