ಹರಿತಲೇಖನಿ ದಿನಕ್ಕೊಂದು ಕಥೆ: ಯಾರು ಹೆಚ್ಚು..?

ಗುರಪುರದಲ್ಲಿ ಅಂದು ಹಬ್ಬದ ದಿನ. ಮಳೆ-ಬೆಳೆ ಉತ್ತಮವಾಗಿ ಆಗಿದುದ್ದರಿಂದ ಎಲ್ಲಾರ ಮೊಗದಲ್ಲಿ ಸಂತೃಪ್ತಿ ತುಂಬಿತ್ತು. ಊರಿನ ಜನರೆಲ್ಲರೂ ತಮ್ಮ ತಮ್ಮ ಮನೆಗಳನ್ನು ತಳಿರು-ತೋರಣಗಳಿಂದ ಶೃಂಗಾರ ಮಾಡಿದ್ದರು. ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಹಾಕಿದ್ದರು. ಬಗೆಬಗೆಯ ವಿಶೇಷ ಅಡುಗೆ ಎಲ್ಲರ ಮನೆಗಳಲ್ಲಿ ತಯಾರಾಗುತ್ತಿತ್ತು. ಘಮಘಮ ಪರಿಮಳ ಎಲ್ಲೆಡೆ ಹರಡಿತ್ತು.

ಇದನ್ನೇಲ್ಲ “ನೀರು ಗಮನಿಸುತ್ತಿತ್ತು. “ಊರಿನ ಸಂಭ್ರಮಕ್ಕೆ ನಾನೇ ಕಾರಣ. ಇದನ್ನು ನನ್ನ ಸ್ನೇಹಿತರಿಗೆ ಈಗಲೇ ಹೇಳಬೇಕು” ಎಂದು ಜಂಬದಿಂದ ಬೀಗಿತು. ಗೆಳೆಯರಾದ ಗಾಳಿ, ಆಹಾರ, ಉಡುಪು ಮತ್ತು ಮನೆಗಳನ್ನು ಕರೆಯಿತು. ಎಲ್ಲವೂ ಊರಿನ ಚಾವಡಿಯಲ್ಲಿ ಸಭೆ ಸೇರಿದವು. “ನೀರು” ಸ್ನೇಹಿತರಿಗೆ ಸ್ವಾಗತ ಕೋರಿ ಮಾತು ಪ್ರಾರಂಭಿಸಿತು.

ನೀರು: ಗೆಳೆಯರೇ, ಇಂದು ನಮ್ಮ ಊರಿನಲ್ಲಿ ಎಲ್ಲೆಡೆ ನೋಡಿದರೂ ಹಬ್ಬದ ಸಡಗರ. ಇದಕ್ಕೆ ಕಾರಣ ಯಾರು ಗೋತ್ತೇ? ಅದು ನಾನೇ!

ಮನೆ: ನೀನಾ! ಹೇಗೆ ಕಾರಣವಾಗುತ್ತಿಯಾ ಮಿತ್ರ?

ನೀರು: ಜೀವಿಗಳು ನೀರು ಕುಡಿಯದಿದ್ದರೆ ಬದುಕಲು ಸಾಧ್ಯವೇ ಇಲ್ಲ. ಮನೆಗಳನ್ನು ಸ್ವಚ್ಛಗೊಳಿಸಲು ನಾನು ಬೇಕು. ಸ್ನಾನ ಮಾಡಲು, ಬಟ್ಟೆ ಹೊಗಿಯಲು, ನಾನಿರಲೇಬೇಕು. ಬಗೆಬಗೆಯ ಅಡುಗೆ ತಯಾರಿಸಲು, ದವಸಧಾನ್ಯ ಬೆಳೆಯಲು ಬೇಕು. ವಿಧ್ಯುತ್ ಉತ್ಪಾದಿಸಲು ನಾನೇ ಬೇಕು. ಈ ಎಲ್ಲಾ ಕಾರಣಗಳಿಂದ ನಾನೇ ಹೆಚ್ಚು. ಇದನ್ನು ನೀವೆಲ್ಲರೂ ಒಪ್ಪಿವಿರಿ ತಾನೇ?

ಆಹಾರ: ನಾನು ಒಪ್ಪುವುದಿಲ್ಲ ಗೆಳೆಯ. ಜೀವಿಗಳು ಒಂದು ಹೊತ್ತು ಆಹಾರ ಸೇವಿಸದಿದ್ದರೆ ಸುಸ್ತಾಗಿ ಬಿದ್ದು ಹೋಗುತ್ತವೆ. ಜೀವಿಗಳ ಬೆಳವಣಿಗೆಗೆ ನಾನು ಬೇಕು. ಅವುಗಳಿಗೆ ಶಕ್ತಿ ಬೇಕಾದರೆ, ರೋಗರುಜಿನಗಳಿಂದ ರಕ್ಷಣೆ ಪಡೆಯಬೇಕಾದರೆ ಪೌಷ್ಠಿಕ ಆಹಾರ ಬೇಕು. ನಾನಿಲ್ಲದಿದ್ದರೇ ಇಂದಿನ ಹಬ್ಬವೇ ನಡೆಯುವುದಿಲ್ಲ; ಗೋತ್ತಾ?

ಮನೆ: ಸ್ನೇಹಿತರೇ, ಜೀವಿಗಳು ಕತ್ತಲಾಗುತ್ತಲೇ ತಮ್ಮ ವಾಸಸ್ಥಾನವಾದ ಮನೆ, ಗೂಡು, ಗುಹೆ, ಪೊಟರೆ, ಬಿಲಗಳಿಗೆ, ಓಡೋಡಿ ಬರುತ್ತವೆ. ನಾನು ಅವುಗಳಿಗೆ ಆಶ್ರಯ ನೀಡುತ್ತೇನೆ. ಮಳೆ, ಗಾಳಿ, ಕಳ್ಳರು, ಶತ್ರುಗಳಿಂದ ರಕ್ಷಣೆ ನೀಡುತ್ತೇನೆ. ಅವುಗಳ ವಂಶಾಭಿವೃದ್ಧಿಗೆ ಬೇಕಾದ ಮೊಟ್ಟೆ ಮತ್ತು ಮರಿಗಳನ್ನು ಜೋಪಾನ ಮಾಡುತ್ತೇನೆ. ಈ ಗುರುಪುರದ ಮನೆಗಳನ್ನೇ ನೋಡಿ! ಇವೆಲ್ಲವನ್ನು ನೋಡಿದರೆ ನಿಮಗೆ ನಾನೇ ಹೆಚ್ಚು ಅನಿಸುವುದಿಲ್ಲವೇ?

ಉಡುಪು: ಅಯ್ಯಾ ಮಿತ್ರರೇ ನಿಮ್ಮ ಮಾತುಗಳನ್ನು ಕೇಳಿ ನನಗೆ ನಗು ಬರುತ್ತದೆ. ಅಂಗಳದಲ್ಲಿ ಆಡುತ್ತಿರುವ ಪುಟ್ಟ ಪುಟ್ಟ ಮಕ್ಕಳನ್ನು ನೋಡಿ, ರೇಷ್ಮೆ ಲಂಗ ರವಿಕೆ ತೊಟ್ಟು ಮೊಗ್ಗಿನ ಜಡೆ, ಕೈತುಂಬಾ ಬಳೆ, ಕಾಲಿಗೆ ಗೆಜ್ಜೆ, ಹಣೆಯಲ್ಲಿ ಬೊಟ್ಟು ಇಟ್ಟುಕೊಂಡು ಮುದ್ದಾಗಿ ಕಾಣುತ್ತಿವೆ. ಊರಿನ ಮನೆ ಮಂದಿಯೆಲ್ಲಾ ತಮಗೊಪ್ಪವ ಉಡುಪುಗಳನ್ನು ಧರಿಸಿ ಹಬ್ಬ ಆಚರಿಸುತ್ತಿದ್ದಾರೆ. ಒಂದು ವೇಳೆ ಇವರಿಗೆ ಉಡುಪು ಇಲ್ಲದೇ ಇರುತ್ತಿದ್ದರೇ? – ಈಗ ಅರ್ಥವಾಯಿತೇ ಇವರೆಲ್ಲರ ಸಂತೋಷಕ್ಕೆ ನಾನೇ ಕಾರಣ?

ಇವರ ಮಾತುಗಳನ್ನು ಕೇಳಿಸಿಕೊಂಡ ಗಾಳಿಯು ಹುಸಿನಗೆ ಬೀರುತ್ತಾ,

ಅಣ್ಣಂದಿರೇ, ನಿಮ್ಮ ಮಾತು ಸತ್ಯ. ಜೀವಿಗಳು ಈ ಭೂಮಿಯ ಮೇಲೆ ಬದುಕಲು ಸುಖ ಸಂತೋಷದಿಂದಿರಲು ನೀವೆಲ್ಲರೂ ಬೇಕೆ ಬೇಕು. ಆದರೆ, ಜೀವಿಗಳು ಉಸಿರಾಡಲು ಗಾಳಿ ಇಲ್ಲದಿದ್ದರೇ ಏನು ಗತಿ ಹೇಳಿ? ಗಿಡಮರಗಳು ಬದುಕುತ್ತವೆಯೇ? ಜೀವಿಗಳ ಉಸಿರಾಟ ಅರೆಕ್ಷಣ ನಿಂತರೆ ಏನಾಗುತ್ತದೆ..? ನಾವೆಲ್ಲರೂ ನಮ್ಮ ನಮ್ಮ ಪಾಲಿನ ಕರ್ತವ್ಯ ಮಾಡುತ್ತಿದ್ದೇವೆ. ಈ ಜಗತ್ತಿನ ಪ್ರತಿಯೊಂದು ವಸ್ತು, ಜೀವಿಗಳಲ್ಲಿ ಪರಸ್ಪರ ವ್ಯತ್ಯಾಸವಿದೆ. ಆದರೆ, ಅದರ ಎಲ್ಲವೂ ಸಮಾನ.

ನೀರು, ಆಹಾರ, ಮನೆ, ಉಡುಪು ಮತ್ತು ಗಾಳಿಯ ಮಾತುಗಳನ್ನು ಸನಿಹದಲ್ಲೇ ಕುಳಿತಿದ್ದ “ವಿದ್ಯೆ” ಒಪ್ಪಿಕೊಂಡು ತಲೆದೂಗಿತು. ಸ್ನೇಹಿತರ ಮಾತುಗಳನ್ನು ತನ್ನ ಒಂದು ಮಾತನ್ನು ಸೇರಿಸಿತು.

ವಿದ್ಯೆ: ಗೆಳೆಯರೇ, “ತುಂಬಿದ ಕೂಡ ತುಳುಕುವುದಿಲ್ಲ” ಎಂಬ ಮಾತನ್ನು ನೀವೆಲ್ಲ ಕೇಳಿದ್ದೀರಲ್ಲ. ಅಂತೆಯೇ ಎಲ್ಲರೂ ವಿದ್ಯಾವಂತರಾಗಬೇಕು. ಆಗ ನಮ್ಮ ಬಾಯಿಂದ ಯಾವುದೇ ಅಹಂಕಾರದ ಮಾತುಗಳು ತುಳುಕಲಾರವು. ಆದ್ದರಿಂದ ನಾನು ಹೇಳುವುದು ಒಂದೆ: ಎಲ್ಲರೂ ವಿದ್ಯಾವಂತರಾಗೋಣ. ಸಮಾನತೆಯಿಂದ ಬದುಕೋಣ.

ಎಲ್ಲರೂ “ಹೌದು, ಹೌದು” ಎಂದು ಹೇಳುತ್ತಾ ಕೈಕೈ ಹಿಡಿದುಕೊಂಡು ಹಬ್ಬದ ಸಡಗರದಲ್ಲಿ ಪಾಲುಗೊಂಡವು.

ಸಂಗ್ರಹ: 3ನೇ ತರಗತಿ ಪುಸ್ತಕ

ರಾಜಕೀಯ

ಬಿಜೆಪಿ ಎಂದರೆ ಬುರುಡೆ‌ ಜನರ ಪಕ್ಷ; ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು

ಬಿಜೆಪಿ ಎಂದರೆ ಬುರುಡೆ‌ ಜನರ ಪಕ್ಷ; ಸಚಿವ ರಾಮಲಿಂಗಾ ರೆಡ್ಡಿ ತಿರುಗೇಟು

BJP ಬುರುಡೆಯಲ್ಲಿ ಮೆದುಳು ಇದೆಯೋ ಇಲ್ಲವೋ ಗೊತ್ತಿಲ್ಲ.. ಬುರುಡೆ ಜನರೆಲ್ಲ ಕೂಡಿಕೊಂಡು ಪುಖಾಂನುಪುಂಖವಾಗಿ ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಬುರುಡೆ‌ ಪಕ್ಷ ದವರೇ..; Ramalinga Reddy

[ccc_my_favorite_select_button post_id="102354"]
ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆಸಿದರು. ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪಕ್ಷ. ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, nikhil kumaraswamy

[ccc_my_favorite_select_button post_id="102348"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಮೊದಲ ವರ್ಷದ ಬಿಎಸ್ಪಿ ನರ್ಸಿಂಗ್ ವ್ಯಾಸಂಗ ಮಾಡ್ತಿದ್ದರು. ಮಂಗಳವಾರ ರಾತ್ರಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.suicide

[ccc_my_favorite_select_button post_id="102335"]
ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ

ಹುಲಿಗೆಮ್ಮ ದೇವಿಯ ದೇವರ ಕಾರ್ಯಕ್ರಮಕ್ಕಾಗಿ ಗುರುಗುಂಟಾಗೆ ತೆರಳುತ್ತಿದ್ದಾಗ ತಿಂಥಣಿ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ

[ccc_my_favorite_select_button post_id="102325"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!