ಬೆಂಗಳೂರು: ಉಪಚುನಾವಣೆಗೆ ಈಗಾಗಲೇ ಶಿಗ್ಗಾಂವಿ ಮತ್ತು ಸಂಡೂರು ಟಿಕೆಟ್ ಘೋಷಣೆ ಆಗಿದೆ..ಆದರೆ ಚನ್ನಪಟ್ಟಣ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆಯುತ್ತಿದೆ..ಕೊನೆ ಹಂತದಲ್ಲಿ ಏನ್ ಆಗುತ್ತೆ ಅನ್ನೋ ಕುತೂಹಲ ಎಲ್ಲಿರಿಗೂ ಇದೆ ಎಂದು ತಿಳಿಸಿದರು.
ಚನ್ನಪಟ್ಟಣದಲ್ಲಿ ನಮ್ಮದೇ ಮತಗಳಿವೆ: ಇಂದು ಕುಮಾರಣ್ಣ ದೆಹಲಿಗೆ ಹೋಗಬೇಕಾದ ಒತ್ತಡ ಇದ್ರೂ ಕೂಡ ಇವತ್ತು ಕೆಲವು ನಿರ್ಧಾರಕ್ಕಾಗಿ ಇಲ್ಲೇ ಇದ್ದಾರೆ. ಕುಮಾರಸ್ವಾಮಿ ಅವರು ಈ ರೀತಿ ಗೊಂದಲಕ್ಕೆ ಆಗಿಲ್ಲ ಅನಿಸುತ್ತೆ.
ದೇವೇಗೌಡರು ಮತ್ತು ಕುಮಾರಣ್ಣನ ಜನರ ನಂಟು ಕೇವಲ ರಾಜಕೀಯ ನಂಟು ಅಲ್ಲ. 30-40 ವರ್ಷದಿಂದ ರಾಮನಗರದ ಜೊತೆ ನಂಟು ಇದೆ..ಚನ್ನಪಟ್ಟಣ ತಾಲ್ಲೂಕಿನಲ್ಲಿ ನಮ್ಮದೇ ಆದ ಮತಗಳು ಇದ್ದಾವೆ.. ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಲ್ಲಿ ರಾಜಕೀಯ ಅಸ್ತಿತ್ವ ಕಂಡಿದ್ದಾರೆ ಎಂದರು.
ಸ್ವಾತಂತ್ರ್ಯವಾಗಿ ತೀರ್ಮಾನ
ಚನ್ನಪಟ್ಟಣ ಟಿಕೆಟ್ ತೀರ್ಮಾನ ಏನೇ ಆಗಬಹುದು.. ರಾಷ್ಟ್ರೀಯ ಮಟ್ಟದ ನಾಯಕರು ದೂರವಾಣಿ ಮೂಲಕ ಕುಮಾರಸ್ವಾಮಿ ಅವರ ಬಳಿ ಮಾತನಾಡಿದ್ದಾರೆ. ನೀವು ಸ್ವಾತಂತ್ರ್ಯವಾಗಿ ತೀರ್ಮಾನ ತೆಗೆದುಕೊಳ್ಳಿ ಅಂತ ಹೇಳಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರು ಗೌರವದಿಂದ ಕುಮಾರಸ್ವಾಮಿ ಅವರನ್ನ ನಡೆಸಿಕೊಂಡಿದ್ದಾರೆ. ರಾಷ್ಟ್ರೀಯ ನಾಯಕರಿಗೆ ನಮ್ಮಿಂದ ಸಣ್ಣ ತಪ್ಪು ಕೂಡ ಆಗಬಾರದು ಎಂದು ತಿಳಿಸಿದರು.