ಕನಕಪುರ; ಹಣಕಾಸಿನ ವೈಷಮ್ಯದ ಹಿನ್ನಲೆಯಲ್ಲಿ ಯುವಕನೊಬ್ಬನನ್ನು ಕೊಲೆಗೈದು ಮರಳವಾಡಿ ಅನ್ನಪೂರ್ಣೇಶ್ವರಿ ಆಶ್ರಮದ ಸಮೀಪದ ರಾವತ್ತಿನಹಳ್ಳ ಏರಿಯ ಮೇಲೆ ಶವ ತಂದು ಹಾಕಿ ಹೋಗಿರುವ ಘಟನೆ ನಡೆದಿದೆ.
ಕೊಲೆಯಾದ ಯುವಕನನ್ನು ಬೆಂಗಳೂರು ರಸ್ತೆ ಊದಿಪಾಳ್ಯ ಸಮೀಪದ ಲಕ್ಷ್ಮೀಪುರ ನಿವಾಸಿ 30 ವರ್ಷದ ಜಿ.ಲಿಖಿತ್ ಕೋಲೆಯಾದ ಯುವಕ.
ಲಿಖಿತ್ ಬಿಸ್ಸೆರಿ ವಾಟರ್ ವ್ಯಾಪರ ನಡೆಸುತ್ತಿದ್ದನು, ಶನಿವಾರ ಈತನ ಸ್ನೇಹಿತರಾದ ಹರೀಶ್, ವೆಂಕಟೇಶ್, ಕಿರಣ, ಹಾಗೂ ಮತ್ತೊಬ್ಬ ಹರೀಶ ಎನ್ನುವ ನಾಲ್ವರು ಶಂಕಿತ ಆರೋಪಿಗಳು ಆಗಿದ್ದಾರೆ ಎಂದು ಮೃತನ ಪೋಷಕರು ಹಾರೋಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಈ ನಾಲ್ವರು ಆರೋಪಿಗಳು ಪಾರಾರಿಯಾಗಿದ್ದಾರೆ ಎನ್ನಲಾಗಿದೆ.
ಮರಳವಾಡಿ ಆಶ್ರಮದ ರಾವತ್ತನಹಳ್ಳ ಏರಿಯ ಮೇಲೆ ಶವವನ್ನು ಕಂಡು ಗ್ರಾಮಸ್ಥರು ಹಾರೋಹಳ್ಳಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಶವದ ಕತ್ತು, ತಲೆ ಹಾಗೂ ಹಲವೆಡೆ ತೀವ್ರ ತರದ ಪೆಟ್ಟು ಬಿದ್ದಿರುವುದು ಕಂಡು ಬಂದಿದೆ, ಸ್ಥಳಕ್ಕೆ ಹಾರೋಹಳ್ಳಿ, ಕಗ್ಗಲಿಪುರ ಪೋಲೀಸರು ಭೇಟಿ ನೀಡಿ ಪರಿಶೀಲಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ರಾಮನಗರ ಡಿವೈಎಸ್ಪಿ ದಿನಕರ್ಶೆಟ್ಟಿ, ಹಾರೋಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ಅರ್ಜುನ್, ಪೋಲಿಸ್ ಸಿಬ್ಬಂದಿಗಳು ಭೇಟಿ ನೀಡಿದರು.
ಪ್ರಕರಣ ದಾಖಲಿಸಿಕೊಂಡಿರುವ ಹಾರೋಹಳ್ಳಿ ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.