ಹುಬ್ಬಳ್ಳಿ: ಉಪ ಚುನಾವಣೆಯಲ್ಲಿಯೇ ಹೈವೋಲ್ವೇಜ್ ಕ್ಷೇತ್ರವಾಗಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಉಪಚುನಾವಣೆಗೆ ಎನ್ಡಿಎಯಿಂದ ಬಹುತೇಕ ಟಿಕೆಟ್ ಕೈತಪ್ಪಿರುವ ಕಾರಣ ಸಿಡಿದೆದ್ದಿರುವ ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರ ನಿವಾಸಕ್ಕೆ ಇಂದು ಭೇಟಿ ನೀಡಿರುವ ಯೋಗೇಶ್ವರ್ ಅವರು ಎಂಎಲ್ಸಿ ಸ್ಥಾನಕ್ಕೆ ಇದೀಗ ರಾಜೀನಾಮೆ ಪತ್ರ ಸಲ್ಲಿಸಿದರು.
ಬಿಜೆಪಿ-ಜೆಡಿಎಸ್ ದೋಸ್ತಿ ನಾಯಕರ ನಡುವೆ ಇದ್ದ ಟಿಕೆಟ್ ಗೊಂದಲ ಅಂತ್ಯಗೊಂಡು, ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಬಹುತೇಕ ಜೆಡಿಎಸ್ ಪಾಲಾಗಿದೆ.
ಬಿಜೆಪಿಯಿಂದ ತಮಗೇ ಟಿಕೆಟ್ ಬೇಕು. ಇಲ್ಲವಾದಲ್ಲಿ ತಾವು ಪಕ್ಷೇತರವಾಗಿ ಸ್ಪರ್ಧಿಸುವುದು ಖಚಿತ ಎಂದು ಯೋಗೇಶ್ವರ್ ಚುನಾವಣೆ ಘೋಷಣೆಗೂ ಮುನ್ನ ಹೇಳಿಕೆ ನೀಡುತ್ತಲೇ ಬಂದಿದ್ದರು.
ಅಲ್ಲದೇ ಅವರು ಕಾಂಗ್ರೆಸ್ಗೂ ಸದ್ಯದಲ್ಲೇ ಸೇರ್ಪಡೆಗೊಂಡು ಚುನಾವಣೆಗೆ ಸ್ಪರ್ಧಿಸುವುದು ನಿಶ್ಚಿತ ಎಂದೂ ಹೇಳಲಾಗುತ್ತಿದೆ.
ಟಿಕೆಟ್ ಸಿಗದಿದ್ದರೆ ಎಂಎಲ್ಸಿ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿದ್ದಾರೆ ಎಂಬುವುದನ್ನು ಈಗಾಗಲೇ ನಿರೀಕ್ಷಿಸಲಾಗಿತ್ತು.