![Channel Gowda](https://www.harithalekhani.com/wp-content/uploads/2025/02/IMG-20250204-WA0002.jpg)
ರಾಮನಗರ: ಸಾವಿರಾರು ಹೃದಯ ಶಸ್ತ್ರಚಿಕಿತ್ಸೆ ನಡೆಸಿ ಹೃದಯಗೆದ್ದು ಸಂಸದರಾಗಿರುವ, ಡಾ.ಸಿ.ಎನ್.ಮಂಜುನಾಥ್ ಅವರು ಅಪಘಾತಕ್ಕೀಡಾದ ಇಬ್ಬರು ಬೈಕ್ ಸವಾರರ ನೆರವಾಗಿ ಮತ್ತೊಮ್ಮೆ ಹೃದಯಗೆದ್ದಿರುವ ಘಟನೆ ನಡೆದಿದೆ.
![hulukudi maharathotsava](https://www.harithalekhani.com/wp-content/uploads/2025/02/IMG-20250205-WA0002.jpg)
ಸಂಸದ ಮಂಜುನಾಥ್ ಅವರು ರಾಮನಗರ ಜಿಲ್ಲೆಯಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ವೇಳೆ, ನೆಟ್ಟಿಗೆರೆ ಗೇಟ್ ಬಳಿ ಬೈಕ್ ಸವಾರರಿಗೆ ಅಪಘಾತವಾಗಿರುವುದನ್ನು ಗಮನಿಸಿದ್ದಾರೆ. ತಕ್ಷಣ ತಮ್ಮ ಕಾರನ್ನು ನಿಲ್ಲಿಸಿ ಬೈಕ್ ಸವಾರರಿಗೆ ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಮತ್ತೆ ಹೃದಯ ಗೆದ್ದ ಹೃದಯವಂತ..!#LatestUpdates #latestnewstoday #latetnewstoday pic.twitter.com/od7QuQi5a9
— Harithalekhani (@harithalekhani) October 18, 2024
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
![Hulukudi mahajathre](https://www.harithalekhani.com/wp-content/uploads/2025/02/IMG-20250205-WA0001.jpg)
ವಿಡಿಯೋದಲ್ಲಿ ಡಾ.ಮಂಜುನಾಥ್ ಅವರು ಗಾಯಗೊಂಡವರಲ್ಲಿ ಒಬ್ಬರನ್ನು ಪರೀಕ್ಷಿಸುತ್ತಿರುವುದನ್ನು ನೋಡಬಹುದಾಗಿದೆ.
ಸವಾರನನ್ನು ಪರೀಕ್ಷಿಸಿ ಗಂಭೀರ ಅಪಾಯದಲ್ಲಿಲ್ಲ ಎಂದು ಖಚಿತಪಡಿಸಿದ ನಂತರ ಸಂಸದ ಡಾ.ಮಂಜುನಾಥ್ ಅಲ್ಲಿಂದ ತಮ್ಮ ಪ್ರಯಾಣವನ್ನು ಮುಂದುವರಿಸಿದರು.