ಹರಿತಲೇಖನಿ ದಿನಕ್ಕೊಂದು ಕಥೆ: ಹಾವು – ಮುಂಗುಸಿಯ ದ್ವೇಷದ ಮೂಲ

Channel Gowda
Hukukudi trust

ಬಹಳ ಹಿಂದಿನ ಕಾಲದಲ್ಲಿ ಒಬ್ಬ ರೈತ ಕಾಡಿನ ಪಕ್ಕದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ. ಮನೆಯಲ್ಲಿ ಹಲವಾರು ಹಸುಗಳ ಜೊತೆಗೆ ಒಂದು ಮುಂಗುಸಿಯನ್ನೂ ಸಾಕಿದ್ದ. ಪ್ರತಿ ದಿನವೂ ಹಸುಗಳನ್ನು ಪಕ್ಕದ ಕಾಡಿನಲ್ಲಿ ಮೇಯಿಸಿಕೊಂಡು ಬರಲು ಹೋದಾಗ ಮುಂಗುಸಿಯು ಅವನ ಜೊತೆ ಇದ್ದು, ಹಸುಗಳು ಆಚೀಚೆ ಹೋಗದಂತೆ ಸಹಾಯ ಮಾಡುತ್ತಿತ್ತು. ಅದಕ್ಕಾಗಿ ರೈತ, ಮುಂಗುಸಿಯನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ.

hulukudi maharathotsava
Aravind, BLN Swamy, Lingapura

ರೈತನ ಮನೆಯ ಹಿಂಭಾಗದ ಹುತ್ತದಲ್ಲಿ ಹಾವೊಂದು ವಾಸ ಮಾಡುತ್ತಿತ್ತು. ಇದು ನಿತ್ಯವೂ ರೈತ ಮತ್ತು ಮುಂಗುಸಿಯ ಪ್ರೀತಿಯ ನಡವಳಿಕೆ ಗಮನಿಸುತ್ತ ಹೊಟ್ಟೆಕಿಚ್ಚು ಪಡುತ್ತಾ, ತಾನಿರುವಲ್ಲಿಯೇ ತನ್ನ ದೇಹವನ್ನು ನೆಲಕ್ಕೆ ಉಜ್ಜಿಕೊಂಡು ಹೊರಳಾಡುತ್ತ ಸಂಕಟಪಡುತ್ತಿತ್ತು. ‘ಮುಂಗುಸಿಯಂತೆಯೇ ನಾನೂ ಒಂದು ಜೀವಿ. ಆದರೂ ರೈತನಿಗೆ ನನ್ನ ಮೇಲೆ ಇಲ್ಲದ ಅಕ್ಕರೆ ಮುಂಗುಸಿಯ ಮೇಲೇಕೆ’ ಎಂಬ ಮತ್ಸರ ಭಾವನೆ ಆ ಹಾವಿನಲ್ಲಿ ಇತ್ತು. ಹೇಗಾದರೂ ಮಾಡಿ ತಾನೂ ರೈತನಿಗೆ ಹತ್ತಿರವಾಗಿ ಅವನ ಪ್ರೀತಿ ಗಳಿಸಿಕೊಳ್ಳಬೇಕು, ಮುಂಗುಸಿಯ ಮೇಲೆ ರೈತನಿಗೆ ದ್ವೇಷ ಭಾವನೆ ಬರುವಂತೆ ಮಾಡಬೇಕೆಂದು ಹಾವು ನಿರ್ಧಾರ ಮಾಡಿತು.

ಒಂದು ದಿನ ರೈತನು ಮುಂಗುಸಿಯ ಜೊತೆ ದನಗಳನ್ನು ಪಕ್ಕದ ಕಾಡಿಗೆ ಮೇಯಿಸಲು ಕಳಿಸಿ, ತಾನು ಹೊಲದಲ್ಲಿ ಉಳುಮೆ ಮಾಡುವ ಕಾರ್ಯದಲ್ಲಿ ತೊಡಗಿದ್ದನು. ಆಗ ನೇಗಿಲು ಮಗುಚಿದ್ದ ಮಣ್ಣಿನ ಅಡಿಯಿಂದ ಹೊರಬರುತ್ತಿದ್ದ ಇಲಿಗಳನ್ನು ಹಾವು ಹೆಕ್ಕಿ ಕೊಲ್ಲತೊಡಗಿತು. ಇದನ್ನು ಗಮನಿಸಿದ ರೈತ, ಬಿತ್ತಿದ ಕಾಳುಗಳನ್ನು ತಿಂದು ಹಾಳು ಮಾಡುತ್ತಿದ್ದ ಇಲಿಗಳನ್ನು ಹಾವು ನಾಶಪಡಿಸುತ್ತಿರುವುದಕ್ಕೆ ಸಂತಸಪಟ್ಟನು. ಹಾಗೆಯೇ ಹಾವಿನ ಸಹಾಯಕ್ಕೆ ಕೃತಜ್ಞತೆ ಸಲ್ಲಿಸಿ, ನಿತ್ಯವೂ ತನ್ನ ಜೊತೆಗೆ ಇರು ಎಂದು ಹಾವನ್ನು ಕೇಳಿಕೊಂಡನು. ಈ ಅವಕಾಶಕ್ಕಾಗಿ ಕಾಯುತ್ತಿದ್ದ ಹಾವಿಗೆ ಪರಮಾನಂದವಾಯಿತು.

Hulukudi mahajathre
Aravind, BLN Swamy, Lingapura

ಅಂದಿನಿಂದ ರೈತನ ಮನೆಯ ಕೊಟ್ಟಿಗೆಯ ಮೂಲೆಯಲ್ಲಿ ಅದು ವಾಸಿಸತೊಡಗಿತು. ದಿನಗಳು ಕಳೆದಂತೆಲ್ಲ ಹಾವು ಮತ್ತು ರೈತನ ಸ್ನೇಹ ಗಾಢವಾದುದನ್ನು ಗಮನಿಸಿದ ಮುಂಗುಸಿ ತಾನೇನೂ ಬೇಸರ ಮಾಡಿಕೊಳ್ಳದೆ ದನ ಮೇಯಿಸುವ ಕಾಯಕದಲ್ಲಿ ತನ್ನ ಪಾಡಿಗೆ ತಾನು ಇತ್ತು. ಹಾವು ಕೂಡ ರೈತನೊಟ್ಟಿಗೆ ಇದ್ದುಕೊಂಡೇ ಮುಂಗುಸಿಯನ್ನು ಓಡಿಸಲು ಹೊಂಚು ಹಾಕುತ್ತಿತ್ತು.

ಒಂದು ದಿನ ದನಗಳನ್ನು ಮೇಯಿಸಲು ಹೋದಾಗ ಚಿರತೆಯೊಂದು ಎರಡು ಹಸುಗಳನ್ನು ಕೊಂದು ತಿಂದುಬಿಟ್ಟಿತು. ಈ ವಿಷಯವನ್ನು ಮುಂಗುಸಿಯು ರೈತನಿಗೆ ಹೇಳಿದಾಗ ಆತ ಬೇಸರಪಡದೆ ‘ಹೋಗಲಿ ಬಿಡು, ಪಾಪ! ನೀನೇನು ಮಾಡೋಕಾಗುತ್ತೆ’ ಎಂದು ಸಮಾಧಾನ ಹೇಳಿದನು. ಮುಂಗುಸಿಗೆ ಶಿಕ್ಷೆ ಆಗುತ್ತದೆ ಎಂದು ಕಾದಿದ್ದ ಹಾವಿಗೆ ನಿರಾಸೆಯಾಯಿತು.

ಹಸು ಸಾವು

ಇನ್ನೊಂದು ದಿನ ಒಂದು ಹಸು ಕಾಡಿನಲ್ಲಿ ಪ್ರಾಣಬಿಟ್ಟಿತು. ಆಗಲೂ ರೈತ, ಆ ಹಸುವಿಗೆ ಏನೋ ಅನಾರೋಗ್ಯ ಆಗಿದ್ದಿರಬಹುದೆಂದು ಸುಮ್ಮನಾದನು. ಆದರೆ, ನಂತರ ಹಲವು ದಿನಗಳವರೆಗೆ ಒಂದೊಂದು ಹಸು ಕಾಡಿನಲ್ಲಿ ಸಾಯುತ್ತಿದ್ದುದನ್ನು ಕಂಡು ರೈತ ಅನುಮಾನಗೊಂಡು ಮುಂಗುಸಿಗೆ ಎಚ್ಚರಿಕೆ ನೀಡಿದ. ಚಿರತೆಗಳು ಕೊಂದಿದ್ದರೆ, ಮೂಳೆ ಮಾಂಸಗಳಾದರೂ ಉಳಿಯಬೇಕಿತ್ತು. ಆದರೆ ಹಸುಗಳು ಸುಮ್ಮನೆ ಸಾಯುತ್ತಿರುವುದೇಕೆ ಎಂಬುದನ್ನು ಕಂಡು ಹಿಡಿಯಬೇಕೆಂದು ಗುಟ್ಟಾಗಿ ಮುಂಗುಸಿಗೆ ತಿಳಿಸಿದ.

ಒಮ್ಮೆ ಮುಂಗುಸಿಯು ಎಲ್ಲಾ ಹಸುಗಳ ಮೇಲೆ ಕಣ್ಣಿಟ್ಟು ಕಾಯುತ್ತಿರುವಾಗ, ರೈತ ಸಾಕಿದ ಹಾವೇ ದೊಡ್ಡ ಪೊದೆಯ ಹಿಂದೆ ಹಸುವನ್ನು ಕಚ್ಚುವುದನ್ನು ನೋಡಿತು. ಮುಂಗುಸಿಯು ಓಡೋಡಿ ಬಂದು ರೈತನಿಗೆ ಈ ವಿಷಯ ಹೇಳಿತು.

ತಾನು ಸಾಕಿದ ಹಾವೇ ತನಗೆ ಮೋಸ ಮಾಡುತ್ತಿದೆಯಲ್ಲ ಎಂಬ ಕೋಪದಿಂದ ಸಂಜೆ ಹೊತ್ತಿಗೆ ಮನೆಯ ಕಡೆ ಮರಳಿ ಬಂದ ಹಾವನ್ನು ಕಲ್ಲಿನಿಂದ ಚಚ್ಚಿ ರೈತನು ಕೊಂದು ಹಾಕಿದನು. ಇದನ್ನು ಗಮನಿಸಿದ ಹಾವಿನ ಮರಿಗಳು ಪ್ರತೀಕಾರವಾಗಿ ರೈತನನ್ನು, ಮುಂಗುಸಿಯನ್ನು ಮತ್ತು ಉಳಿದ ಎಲ್ಲಾ ಹಸುಗಳನ್ನು ತಮ್ಮ ವಿಷದ ಹಲ್ಲುಗಳಿಂದ ಕಚ್ಚಿ ಸಾಯಿಸುವುದಾಗಿ ಪ್ರತಿಜ್ಞೆ ಮಾಡಿದವು.

ಮುಂಗುಸಿ ವಿಷ ನಿರೋಧಕ ಗಿಡ–ಮೂಲಿಕೆ ಬಳಸಿ, ಮಾಲೀಕನನ್ನು ಹಾಗೂ ಆತನ ಹಸುಗಳನ್ನು ಕಾಪಾಡುವುದಾಗಿ ಪ್ರಮಾಣ ಮಾಡಿತು. ಇದನ್ನು ಕೇಳಿ ರೈತ ಸಂತೋಷಪಟ್ಟ. ಇದೇ ಕಾರಣದಿಂದಾಗಿ ಹಾವು– ಮುಂಗುಸಿ ದ್ವೇಷ ಬೆಳೆಸಿಕೊಂಡಿವೆ. ಇಂದಿಗೂ ಅವುಗಳ ಹಗೆತನ ಹಾಗೇ ಮುಂದುವರೆದಿದೆ.

ಕೃಪೆ: ಹೊ.ರಾ.ಪರಮೇಶ್, ಹೊಡೇನೂರು (ಸಾಮಾಜಿಕ ಜಾಲತಾಣ)

ರಾಜಕೀಯ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

BJP ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣು..‌?; ಆರ್ ಅಶೋಕ್ ಹೇಳಿದ್ ಏನು ನೋಡಿ

ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ತಂಡದ ಕುರಿತು ಬಿಜೆಪಿ ಹಿರಿಯ ನಾಯಕರೊಂದಿಗೆ ಚರ್ಚಿಸಿದ್ದೇನೆ. ಪಕ್ಷದಲ್ಲಿ ಎಲ್ಲ ಸಮಸ್ಯೆ ನಿವಾರಣೆಯಾಗಲಿ ಎಂದೇ ನಾನು ಬಯಸುತ್ತೇನೆ. R Ashoka

[ccc_my_favorite_select_button post_id="102295"]
ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ಇಂದು ಹುಲುಕುಡಿ ಕ್ಷೇತ್ರದಲ್ಲಿ ಬ್ರಹ್ಮ ರಥೋತ್ಸವ.. ವಿಶೇಷ ಬಸ್ ವ್ಯವಸ್ಥೆ

ದಿವ್ಯಸಾನಿಧ್ಯವನ್ನು ರಂಭಾಪುರಿ ಶಾಖಾ ಹಿರೇಮಠದ ಷ.ಬ್ರ.ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದಾರೆ. Doddaballapura

[ccc_my_favorite_select_button post_id="102267"]
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಭೇಟಿಯಾದ ನಾ.ರಾ.ಲೋಕೇಶ್

ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಉಕ್ಕು ಖಾತೆ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ಸಂಸದ ಭರತ್ ಅವರೊಂದಿಗೆ ಉಕ್ಕು ಸಚಿವರನ್ನು ಭೇಟಿಯಾದ ಲೋಕೇಶ್ HD Kumaraswamy

[ccc_my_favorite_select_button post_id="102307"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ದೂರಾದ ಪತ್ನಿಯ ನಡು ರಸ್ತೆಯಲ್ಲಿಯೇ ಬರ್ಬರವಾಗಿ ಹತ್ಯೆಗೈದ ಪತಿ..!

ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. Murder

[ccc_my_favorite_select_button post_id="102299"]
Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

Doddaballapura: ಬಸ್ ಅಪಘಾತ News update.. ಚಿಕಿತ್ಸೆ ಫಲಕಾರಿಯಾಗದೆ ಓರ್ವ ಸಾವು

ಅಪಘಾತ ತಡೆಗೆ ಟೋಲ್ ಸಿಬ್ಬಂದಿಗಳು, ತಾಲೂಕು ಆಡಳಿತ, ಜನಪ್ರತಿನಿದಿಗಳು ಯಾವುದೇ ಕ್ರಮಕೈಗೊಳ್ಳದೆ ಉಳಿದಿದ್ದಾರೆ. ಇದರಿಂದಾಗಿ ಪದೇ ಪದೇ ಸಾವು ನೋವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ. Doddaballapura

[ccc_my_favorite_select_button post_id="102061"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!