ಹರಿತಲೇಖನಿ ದಿನಕ್ಕೊಂದು ಕಥೆ; ಆನೆ ಮತ್ತು ದುಂಬಿ

Daily Story: ಒಂದು ದಿನ ಒಬ್ಬ ಶಿಷ್ಯ ತನ್ನ ಗುರುಗಳ ಜೊತೆ ಕಾಡಿನ ಮಾರ್ಗದಲ್ಲಿ ಹೆಜ್ಜೆ ಹಾಕುತ್ತಿದ್ದ. ಬಹಳ ದಿನಗಳಿಂದ ಅವನ ಮನಸ್ಸಿನಲ್ಲಿ ಪ್ರಶ್ನೆಯೊಂದು ಅಶಾಂತಿಯನ್ನುಂಟು ಮಾಡಿತ್ತು. ಗುರುಗಳಲ್ಲಿ ಆ ಪ್ರಶ್ನೆ ಕೇಳಲು ಸೂಕ್ತ ಸಮಯಾವಕಾಶ ದೊರೆಯದೇ ಅದರ ಬಗ್ಗೆಯೇ ಯೋಚಿಸುತ್ತಿದ್ದ. ಕಾಡಿನ ಈ ಪ್ರಶಾಂತ ವಾತಾವರಣದಲ್ಲಿ ಪ್ರಶ್ನೆ ಕೇಳಲು ಮನಸ್ಸು ಮಾಡಿದ. ‘ಗುರುವೇ, ಬಹಳ ಜನರ ಮನಸ್ಸು ಕಲಕಿದೆ, ಆದರೆ ಕೆಲವೇ ಕೆಲವು ಜನರ ಮನಸ್ಸು ಮಾತ್ರ ಶಾಂತವಾಗಿದೆ. ಮನಸ್ಸು ಸ್ಥಿರವಾಗಿರಬೇಕಾದರೆ ವ್ಯಕ್ತಿಯು ಏನು ಮಾಡಬೇಕು?’ ಎಂದು ಪ್ರಶ್ನಿಸಿದ.

ಗುರುಗಳು ಶಿಷ್ಯನತ್ತ ನೋಡಿ ನಗುತ್ತಾ, ‘ಮಗುವೇ, ಈ ಬಗ್ಗೆ ಒಂದು ಕಥೆ ಹೇಳುತ್ತೇನೆ ಕೇಳು. ನಿನ್ನ ಪ್ರಶ್ನೆಗೆ ಉತ್ತರ ಕಥೆಯಲ್ಲಿಯೇ ಇದೆ’ ಎಂದು ಕಥೆ ಹೇಳಲು ಪ್ರಾರಂಭಿಸಿದರು…

‘ಒಂದು ದಿನ ಸುಂದರ ಹಾಗೂ ರಮ್ಯವಾದ ಪ್ರಕೃತಿಯ ಮಡಿಲಲ್ಲಿ ಆನೆಯೊಂದು ಮರದ ಟೊಂಗೆಗಳಿಂದ ಎಲೆಗಳನ್ನು ತಿನ್ನುತ್ತಿತ್ತು. ಇದ್ದಕ್ಕಿದ್ದಂತೆ ದುಂಬಿ
ಯೊಂದು ಅಲ್ಲಿಗೆ ಹಾರಿಬಂದು ಆನೆಯ ಕಿವಿಯ ಮೇಲೆ ಕುಳಿತಿತು. ದುಂಬಿಯು ಸುಮ್ಮನೆ ಕೂಡಲಿಲ್ಲ, ಬದಲಾಗಿ ಗುಂಯ್‌ ಎಂದು ಶಬ್ದ ಮಾಡತೊಡಗಿತು. ಆನೆ ಶಾಂತವಾಗಿ ಎಲೆಗಳನ್ನು ತಿನ್ನುವುದರಲ್ಲೇ ನಿರತವಾಯಿತು.

ಆನೆಯು ತನ್ನ ಶಬ್ದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ದುಂಬಿಗೆ ಅಚ್ಚರಿಯನ್ನುಂಟು ಮಾಡಿತು. ದುಂಬಿ ಇನ್ನಷ್ಟು ಜೋರಾಗಿ ಶಬ್ದ ಮಾಡುತ್ತಾ ಆನೆಯ ಕಿವಿಯ ಸುತ್ತಲೂ ಹಾರಾಡತೊಡಗಿತು. ಆಗಲೂ ಆನೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.

ಆಗ ದುಂಬಿಯು ಆನೆಯ ಕಿವಿಯ ಮೇಲೆ ಕುಳಿತು ಜೋರಾಗಿ ಕೂಗಿ ‘ನೀನೇನು ಕಿವುಡನಾ’ ಎಂದು ಕೇಳಿತು.

‘ಇಲ್ಲ’ ಎಂದು ಆನೆ ಉತ್ತರಿಸಿತು.

‘ಹಾಗಾದರೆ ನನ್ನ ಶಬ್ದದಿಂದ ನಿನಗೆ ಯಾವುದೇ ತೊಂದರೆಯಾಗಲಿಲ್ಲವೇ’ ದುಂಬಿ ಕೇಳಿತು.

‘ಹೌದು ನೀನೇಕೆ ನಿರಂತರವಾಗಿ ಶಬ್ದ ಮಾಡುತ್ತಲೇ ಇರುವೆ? ಕ್ಷಣಕಾಲ ಏಕೆ ವಿಶ್ರಾಂತಿ ಪಡೆಯುತ್ತಿಲ್ಲ?’ ಬಾಯಲ್ಲಿದ್ದ ಎಲೆಗಳನ್ನು ಜಗಿಯುತ್ತಲೇ ಕೇಳಿತು ಆನೆ.

‘ನಾನು ನೋಡುವ, ಕೇಳುವ ಮತ್ತು ಅನುಭವಿಸುವ ಎಲ್ಲವೂ ನನ್ನ ಗಮನವನ್ನು ಸೆಳೆಯುತ್ತವೆ. ನನ್ನ ಸುತ್ತಲಿನ ಎಲ್ಲಾ ಶಬ್ದಗಳು ಮತ್ತು ಚಲನೆಗಳು ನನ್ನ ನಡವಳಿಕೆಗಳನ್ನು ಪ್ರಭಾವಿಸುತ್ತಿವೆ. ಹಾಗಾಗಿ ನನ್ನ ದೇಹ ವಿಶ್ರಾಂತಿ ಪಡೆಯುತ್ತಿದ್ದರೂ ಕೂಡಾ ಮನಸ್ಸಿನಲ್ಲಿ ಏನಾದರೂ ಯೋಚನಾ ಲಹರಿ ಏಳುತ್ತಲೇ ಇರುತ್ತದೆ’ ಎಂದು ತಳಮಳವನ್ನು ಹೊರಹಾಕಿತು ದುಂಬಿ.

ಆಗಲೂ ಆನೆ ತಿನ್ನುತ್ತಲೇ ತನ್ನ ಮೊರದಗಲ ಕಿವಿಗಳನ್ನು ಅಲುಗಾಡಿಸುತ್ತಲೇ ಇತ್ತು. ‘ಯಾವಾಗಲೂ ನೀನು ಇಷ್ಟೊಂದು ಶಾಂತ
ವಾಗಿರುತ್ತಿಯಲ್ಲಾ, ನಿನ್ನ ರಹಸ್ಯವೇನು’ ಎಂದು ಕೇಳಿತು ದುಂಬಿ.

ಆನೆ ತಿನ್ನುವುದನ್ನು ನಿಲ್ಲಿಸಿ, ‘ನನ್ನ ಐದು ಇಂದ್ರಿಯಗಳು ನನ್ನ ಶಾಂತಿಗೆ ಭಂಗ ತರುವುದಿಲ್ಲ. ಏಕೆಂದರೆ ಆ ಎಲ್ಲಾ ಇಂದ್ರಿಯಗಳು ನನ್ನ ಹಿಡಿತದಲ್ಲಿವೆ. ಅವು ನನ್ನ ಆಜ್ಞೆಯನ್ನು ಪಾಲಿಸುತ್ತವೆ. ನನ್ನ ನಿರ್ಧಾರಗಳನ್ನು, ಆಲೋಚನೆಗಳನ್ನು ಅವು ನಿಯಂತ್ರಿಸುವುದಿಲ್ಲ ಮತ್ತು ನಾನು ಅವು ಹೇಳಿದಂತೆ ಕೇಳುವುದಿಲ್ಲ. ಅವುಗಳನ್ನು ನನ್ನ ಹಿಡಿತದಲ್ಲಿ ಇಟ್ಟುಕೊಂಡಿರುವೆ. ಅವು ನನ್ನ ನಿರ್ದೇಶನ ಕೇಳುತ್ತವೆಯೇ ಹೊರತು ನಾನು ಅವುಗಳ ನಿರ್ದೇಶನ ಕೇಳುವುದಿಲ್ಲ…’ ಎಂದು ಹೇಳುತ್ತಲೇ ಇತ್ತು. ಆದರೆ ದುಂಬಿಗೆ ಏನೂ ಅರ್ಥವಾಗಲಿಲ್ಲ.

ಇದನ್ನು ಗಮನಿಸಿದ ಆನೆ, ‘ಈಗ ನಾನು ತಿನ್ನುತ್ತಿದ್ದೇನೆ. ತಿನ್ನುವ ಕ್ರಿಯೆಯಲ್ಲಿ ನಾನು ಸಂಪೂರ್ಣ ಮುಳುಗಿದ್ದೇನೆ. ಇದರಿಂದ ನಾನು ಆಹಾರವನ್ನು ಆನಂದಿಸುತ್ತೇನೆ ಮತ್ತು ಉತ್ತಮವಾಗಿ ಜಗಿದು ತಿನ್ನುತ್ತೇನೆ. ಇದರಿಂದ ಆಹಾರವೂ ಸುಲಭವಾಗಿ ಜೀರ್ಣವಾಗುತ್ತದೆ. ನನ್ನ ಗಮನವನ್ನು
ಆಹಾರ ಸೇವಿಸುವುದರಲ್ಲಿ ಕೇಂದ್ರೀಕರಿಸಿದ್ದರಿಂದ ಶಾಂತವಾಗಿರಲು ಸಾಧ್ಯವಾಯಿತು’ ಎಂದಿತು.

ಗುರುಗಳು ಕತೆ ಹೇಳುವುದನ್ನು ನಿಲ್ಲಿಸಿ ತನ್ನ ಶಿಷ್ಯನೆಡೆಗೆ ನೋಡಿದರು. ಕತೆ ಕೇಳುವುದರಲ್ಲೇ ಮುಳುಗಿದ್ದ ಶಿಷ್ಯನಿಗೆ ಕತೆ ನಿಲ್ಲಿಸಿದುದು ತಿಳಿಯಲೇ ಇಲ್ಲ.

‘ಮಗುವೇ, ನಮ್ಮ ಇಂದ್ರಿಯಗಳ ಕೆಲಸ ಸುತ್ತಲ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದನ್ನು ನಮಗೆ ತಿಳಿಸುವುದಷ್ಟೇ. ಅವುಗಳ ಆಧಾರದ ಮೇಲೆ ನಿರ್ಧಾರಗಳು ನಮ್ಮದಾಗಬೇಕೇ ವಿನಾ ಇಂದ್ರಿಯಗಳ ಆಮಿಷಗಳಿಗೆ ಬಲಿಯಾಗಬಾರದು. ಅವುಗಳ ಹಿಂದೆ ಹೋಗದಿದ್ದರೆ ಮನಸ್ಸು ಖಂಡಿತವಾಗಿ ಶಾಂತವಾಗುತ್ತದೆ ಮತ್ತು ಜೀವನದಲ್ಲಿ ಉತ್ಸಾಹವನ್ನು ಹೊಂದುತ್ತೇವೆ’ ಎಂದು ಗುರುಗಳು ಮಾತು ಮುಗಿಸಿದರು.

‘ಹೌದು ಗುರುಗಳೆ, ನಿಮ್ಮ ಮಾತಿನಲ್ಲಿ ಅರ್ಥವಿದೆ. ಹೆಚ್ಚಿನ ಜನರು ಇಂದ್ರಿಯಗಳ ಮಾತುಗಳನ್ನು ಕೇಳುತ್ತಾರೆಯೇ ವಿನಾ ಮನದ ಮಾತನ್ನು ಕೇಳುವುದಿಲ್ಲ. ಹಾಗಾಗಿ ಯಾವಾಗಲೂ ಯೋಚನಾಮಗ್ನರಾಗಿರುತ್ತಾರೆ. ದುಂಬಿಯಂತೆ ಅನಗತ್ಯ ಶಬ್ದ ಮಾಡುತ್ತಲೇ ಇರುತ್ತಾರೆ. ನಾವು ದುಂಬಿಯಂತಾಗದೇ ಆನೆಯಂತಾಗಬೇಕು. ಯಾವ ಕೆಲಸ ಮಾಡುವುದಿದ್ದರೂ ಅದನ್ನು ಆಸ್ವಾದಿಸಬೇಕು. ಓದುವುದಿರಲಿ, ಬರೆಯುವುದಿರಲಿ ಅಥವಾ ಮನೆಯವರು ಹೇಳಿದ ಚಿಕ್ಕಪುಟ್ಟ ಕೆಲಸಗಳಿರಲಿ. ನಾವು ಅದನ್ನು ಪ್ರೀತಿಯಿಂದ ಮಾಡಿದಾಗ ಕೆಲಸದ ಅನುಭವ ನಮಗಾಗುತ್ತದೆ ಮತ್ತು ಅನುಭವದ ಮೂಲಕ ಜ್ಞಾನ ದೊರೆಯುತ್ತದೆ. ಇದರಿಂದ ತುಂಬಾ ಸರಳವಾಗಿ ಮನಸ್ಸನ್ನು ಶಾಂತಗೊಳಿಸಿಕೊಳ್ಳಬಹುದು. ನನ್ನ ಮನದಲ್ಲಿ ಬಹುದಿನಗಳಿಂದ ಉತ್ತರ ಸಿಗದಿದ್ದ ಪ್ರಶ್ನೆಗೆ ಇಂದು ಉತ್ತರ ದೊರೆತು ಮನಸ್ಸು ನಿರಾಳವಾಯಿತು’ ಎಂದ ಶಿಷ್ಯ.

ನಿಮಗೂ ಹಾಗೆ ಅನಿಸಿತೇ? ನೀವು ಆನೆಯಾಗುವಿರೋ? ದುಂಬಿಯಾಗುವಿರೋ? ನಿರ್ಧಾರ ನಿಮ್ಮದು.

ಕೃಪೆ: ಪ್ರಜಾವಾಣಿ ದಿನಪತ್ರಿಕೆ (ಸಾಮಾಜಿಕ ಜಾಲತಾಣ)

ರಾಜಕೀಯ

ಕಾಂಗ್ರೆಸ್ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು

ಕಾಂಗ್ರೆಸ್ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು

ಕರ್ನಾಟಕವನ್ನು ಕಾಂಗ್ರೆಸ್ ಸರಕಾರ ಹಾಳು ಮಾಡುತ್ತಿದೆ. ಅದು ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದರೆ ಪರಿಶಿಷ್ಟ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಹಣವನ್ನು ಚುನಾವಣೆಗೆ ಬಳಸಿಕೊಂಡಿದೆ. HD Deve Gowda

[ccc_my_favorite_select_button post_id="102362"]
ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆಸಿದರು. ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪಕ್ಷ. ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, nikhil kumaraswamy

[ccc_my_favorite_select_button post_id="102348"]
Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ ಆಕ್ರೋಶ

Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ

ವೈರಲ್ ವಿಡಿಯೋದಲ್ಲಿ ಅಕ್ರಮ ವಲಸಿಗರ ಕಾಲನ್ನು ಸಂಕೋಲೆಗಳಲ್ಲಿ ಕಟ್ಟಿರುವುದು ಹಾಗೂ ಕೈಗಳನ್ನು ಕೋಳಗಳಿಂದ ಬಂಧಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. Video

[ccc_my_favorite_select_button post_id="102365"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ಮನೆ ಮಾರಿ ಪ್ರೇಮಿಯೊಂದಿಗೆ ಪತ್ನಿ ಪರಾರಿ.. ಗಂಡ ಆತ್ಮಹತ್ಯೆ..!

ಮನೆ ಮಾರಿ ಪ್ರೇಮಿಯೊಂದಿಗೆ ಪತ್ನಿ ಪರಾರಿ.. ಗಂಡ ಆತ್ಮಹತ್ಯೆ..!

ಪ್ರಿಯಕರೊಂದಿಗೆ ಓಡಿ ಹೋಗಿರುವ ವಿವಾಹಿತ ಮಹಿಳೆ ವಿದೇಶದಲ್ಲಿದ್ದ ತನ್ನ ಗಂಡನನ್ನು ಬಿಟ್ಟಿರುವುದಲ್ಲದೆ, ಗಂಡ ತನಗಾಗಿ ಕಟ್ಟಿದ್ದ ಮನೆಯನ್ನು ಮಾರಿದ್ದಾಳೆ. Suicide

[ccc_my_favorite_select_button post_id="102360"]
ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ

ಹುಲಿಗೆಮ್ಮ ದೇವಿಯ ದೇವರ ಕಾರ್ಯಕ್ರಮಕ್ಕಾಗಿ ಗುರುಗುಂಟಾಗೆ ತೆರಳುತ್ತಿದ್ದಾಗ ತಿಂಥಣಿ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ

[ccc_my_favorite_select_button post_id="102325"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!