ಹರಿತಲೇಖನಿ ದಿನಕ್ಕೊಂದು ಕಥೆ; ಒಬ್ಬರ ಕೂಳು ಇನ್ನೊಬ್ಬರ ಕುತ್ತು

ಹಿಂದೆ ಕಳಿಂಗ ರಾಜ್ಯದಲ್ಲಿ ಯಾರೂ ಯೋಚನೆ ಮಾಡದಷ್ಟು ತೀವ್ರವಾದ ಬರಗಾಲ ಬಂದು, ಅಲ್ಲಿನ ಜನ ಊಟ ತಿಂಡಿಗೆ ಪರಿತಪಿಸುವಂತಾಗಿತ್ತು‌. ಎಲ್ಲರೂ ಆಹಾರ ಹುಡುಕುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆದಾಡಲು ಆರಂಭ ಮಾಡಿದರು. ಹೀಗಿರುವಾಗ ರಾಜನ ಒಂಟೆಯೊಂದು ತಪ್ಪಿಸಿಕೊಂಡು ಎತ್ತಲೋ ಮಾಯವಾಗಿ ಹೋಯಿತು. ಆ ಒಂಟೆಯನ್ನು ಹುಡುಕಲು ರಾಜ ತನ್ನ ಭಟರಿಗೆ ಆಜ್ಞೆ ಮಾಡಿದನು.

ರಾಜ ಭಟರು ಒಂಟೆಯನ್ನು ಹುಡುಕಿಕೊಂಡು ಆ ಊರಿನಲ್ಲಿ ವಾಸವಾಗಿದ್ದ ಒಬ್ಬಳು ಹೆಂಗಸಿನ ಮನೆ ಮುಂದೆ ಬಂದರು. ಆ ಹೆಂಗಸಿಗೆ ಮೂವರು ಗಂಡು ಮಕ್ಕಳು. ಅವರಲ್ಲಿ ಮೊದಲನೆಯವನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದ. ಎರಡನೆಯವನು ತನ್ನಲ್ಲಿರುವ ತೋಟ ನೋಡಿಕೊಳ್ಳುತ್ತಿದ್ದ. ಮೂರನೆಯ ಮಗ ಮನೆಯಲ್ಲಿ ಬಟ್ಟೆಗಳನ್ನು ನೇಯ್ಗೆ ಮಾಡುತ್ತಿದ್ದ.

ತಪ್ಪಿಸಿಕೊಂಡು ಬಂದ ಒಂಟೆ ಇವರಿರುವ ಮನೆಯ ಬಳಿ ಬಂದಿತ್ತು. ಅದನ್ನು ನೋಡಿದ ಮೂವರು ಸಹೋದರರು ಒಂಟೆಯನ್ನು ಕಟ್ಟಿಹಾಕಿ ಹೊಡೆದು ಕೊಂದು ಹಾಕಿದ್ದರು.

ಒಂಟೆಯ ಮಾಂಸವನ್ನು ಜಾಡಿನಲ್ಲಿ ಮುಚ್ಚಿಟ್ಟು ಅದರ ಮೂಳೆ–ಚರ್ಮವನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿ ಹಾಕಿದ್ದರು. ಮಕ್ಕಳ ಈ ಗುಣವನ್ನು ಅವರ ತಾಯಿ ಕಣ್ಣಾರೆ ನೋಡುತ್ತಿದ್ದಳು. ಇದನ್ನು ಗಮನಿಸಿದ ಮಕ್ಕಳು ‘ನಮ್ಮ ತಾಯಿ ನಾವು ಮಾಡಿರುವ ಕೆಟ್ಟ ಕೆಲಸವನ್ನು ಯಾರಲ್ಲಾದರೂ ಬಾಯಿಬಿಟ್ಟರೆ ನಮಗೇ ಕಷ್ಟ’ ಎಂದು ಮಾತನಾಡಿಕೊಂಡರು.

ತಾಯಿಯ ಬಾಯಲ್ಲಿ ಯಾವ ಗುಟ್ಟೂ ನಿಲ್ಲುವುದಿಲ್ಲವೆಂಬುದು ಅವರಿಗೆ ಗೊತ್ತಿತ್ತು. ಅದಕ್ಕಾಗಿ ಅವರು ಒಂದು ಉಪಾಯ ಮಾಡಿದರು. ಮೂವರೂ ತಾಯಿ ಬಳಿ ಬಂದು, ‘ಅಮ್ಮ, ಈ ದಿನ ನಾವು ನಿನ್ನನ್ನು ಮದುಮಗಳನ್ನಾಗಿ ಮಾಡುತ್ತೇವೆ. ಅದಕ್ಕೆ ಒಂಟೆಯನ್ನು ಕೊಂದು ಅದರ ಮಾಂಸವನ್ನು ಜಾಡಿಗಳಲ್ಲಿ ಮುಚ್ಚಿಟ್ಟಿದ್ದೇವೆ. ಆ ಮಾಂಸದಿಂದ ನಿನಗೆ ಇಂದು ಔತಣ ಬಡಿಸುತ್ತೇವೆ’ ಎಂದರು. ಆ ತಾಯಿ ಬುದ್ಧಿಮಾಂದ್ಯಳಾಗಿದ್ದಳು. ಮಕ್ಕಳು ಹೇಳಿದ್ದು ಸರಿಯೆಂದು ನಂಬಿದಳು.

ರಾಜ ಭಟರು ಒಂಟೆ ಹುಡುಕಿಕೊಂಡು ಇವರಿರುವ ಮನೆಗೆ ಬಂದರು. ಕೃಷಿಯಲ್ಲಿ ತೊಡಗಿಕೊಂಡಿದ್ದ ಮೊದಲನೆಯವನಲ್ಲಿ, ‘ನಮ್ಮ ರಾಜರ ಒಂಟೆಯೊಂದು ತಪ್ಪಿಸಿಕೊಂಡು ಬಂದಿದೆ. ನಿಮ್ಮ ಹೊಲದ ಬಳಿ ಏನಾದರೂ ಬಂದಿದೆಯಾ’ ಎಂದು ಕೇಳಿದರು.

ಅದಕ್ಕೆ ಜೋರು ದನಿಯಲ್ಲಿ ಉತ್ತರಿಸಿದ ಮೊದಲನೆಯವ, ‘ನಿಮಗೆ ಕಾಣಿಸುತ್ತಿಲ್ಲವೇ? ನಾನು ಹೊಲ ಉಳುತ್ತಿದ್ದೇನೆ’ ಎಂದ. ಅವನಿಗೆ ತಮ್ಮ ಮಾತು ಅರ್ಥವಾಗಿಲ್ಲವೆಂದು ತಿಳಿದ ರಾಜ ಭಟರು ಮತ್ತೆ ಅವನಲ್ಲಿ, ‘ಹೌದು, ಕಾಣಿಸುತ್ತಿದೆ. ನಮ್ಮ ರಾಜರ ಒಂಟೆ ತಪ್ಪಿಸಿಕೊಂಡಿದೆ. ಇಲ್ಲಿ ಅದು ಬಂದಿದೆಯಾ’ ಎಂದು ಕೇಳಿದರು.

ಅದಕ್ಕೆ ಉತ್ತರವಾಗಿ ಆತ, ‘ಪ್ರತಿದಿನ ಎಷ್ಟು ಎಕರೆ ಹೊಲ ಉಳುತ್ತೇನೆಂದು ಹೇಳಲು ಖಂಡಿತ ಸಾಧ್ಯವಿಲ್ಲ. ಒಂದು ದಿನ ಒಂದು ಎಕರೆ ಉಳುವುದಕ್ಕೆ ಆಗುತ್ತದೆ. ಇನ್ನೊಂದು ದಿನ ಅಷ್ಟು ಆಗುವುದಿಲ್ಲ, ಕಡಿಮೆ ಉಳುತ್ತೇನೆ’ ಎಂದ. ರಾಜ ಭಟರು ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ಕೊಡದೆ ಅವರನ್ನು ಕಕ್ಕಾಬಿಕ್ಕಿ ಮಾಡಿದ. ಕೊನೆಯಲ್ಲಿ ರಾಜ ಭಟರು ಇವನ್ಯಾರೋ ತಲೆ ಸರಿಯಿಲ್ಲದವನೆಂದು ಭಾವಿಸಿ ಅಲ್ಲಿಂದ ಹೊರಟರು.

ಭಟರು ತೋಟದಲ್ಲಿ ಕೆಲಸ ಮಾಡುತ್ತಿದ್ದವನ ಬಳಿ ಬಂದು, ‘ನಮ್ಮ ರಾಜರ ಒಂಟೆ ಕಾಣೆಯಾಗಿದೆ. ನೀನು ಅದನ್ನು ನೋಡಿದ್ದೀಯಾ’ ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಅವನು, ‘ನಿಮಗೆ ಕಾಣಿಸುತ್ತಿಲ್ಲವೇ? ಮರದಿಂದ ಮಾವಿನ ಕಾಯಿ ಇಳಿಸುತ್ತಿದ್ದೇನೆ’ ಎಂದನು.

ರಾಜ ಭಟರು, ‘ನೋಡು, ನಾವು ಮಾವಿನ ಕಾಯಿ ಕೇಳಿಲ್ಲ. ತಪ್ಪಿಸಿಕೊಂಡು ಬಂದ ಒಂಟೆ ಇಲ್ಲಿಗೆ ಬಂದಿದೆಯಾ ಎಂದು ಕೇಳಿದೆವು’ ಎಂದರು. ಅದಕ್ಕೆ ಉತ್ತರವಾಗಿ ಈತ ‘ಈ ಮರದಲ್ಲಿ ಫಸಲು ಕಡಿಮೆ. ಪಕ್ಕದ ಮರದಲ್ಲಿ ದೊಡ್ಡ ದೊಡ್ಡ ಮಾವಿನ ಕಾಯಿಗಳಿವೆ. ಬೇಕೆಂದರೆ ಮರದಿಂದ ಇಳಿಸಿ ಕೊಡುವೆ’ ಎಂದನು. ರಾಜ ಭಟರು ಇವನ ಉತ್ತರ ಕೇಳಿ ಇವನು ಸಹ ಮೊದಲಿನವನಂತೆಯೇ ಮೂರ್ಖನಿರಬೇಕು ಎಂದು ಭಾವಿಸಿ ಅಲ್ಲಿಂದ ಹೊರಟರು.

ಬಟ್ಟೆ ನೇಯುತ್ತಿದ್ದ ಮೂರನೆಯವನ ಬಳಿ ಬಂದ ರಾಜ ಭಟರು, ‘ರಾಜರ ಒಂಟೆ ತಪ್ಪಿಸಿಕೊಂಡು ಹೋಗಿದೆ. ನೀನು ನೋಡಿದಿಯಾ’ ಎಂದು ಪ್ರಶ್ನಿಸಿದರು. ಮೂರನೆಯವ ಸಹ ವಿರುದ್ಧ ಉತ್ತರ ಕೊಡಲು ಪ್ರಾರಂಭ ಮಾಡಿದ. ‘ಕೆಲವೊಮ್ಮೆ ನೇಯ್ಗೆ ಚೆನ್ನಾಗಿರುತ್ತದೆ. ಒಂದೊಂದು ದಿನ ಮಾತು ಮಾತಿಗೂ ತುಂಡಾಗಿ ಹೋಗುತ್ತದೆ’ ಎಂದನು! ರಾಜ ಭಟರು ಅವನ ಮಾತಿಗೆ ಸಿಟ್ಟಾಗಿ ‘ನೀನು ರಾಜನ ಒಂಟೆ ನೋಡಿದಿಯಾ ತಿಳಿಸು. ಇದೇನು ನಿನ್ನ ಉತ್ತರ’ ಎಂದು ಗುಡುಗಿದರು. ಮೂರನೆಯವನು ಆ ಮಾತಿಗೆ, ‘ನನಗೆ ಮದುವೆ ಸಮಯದಲ್ಲಿ ನೇಯ್ಗೆ ಕೆಲಸ ಜಾಸ್ತಿಯಿರುತ್ತದೆ. ಆಗ ಕೈಯಲ್ಲಿ ಸ್ವಲ್ಪ ಹಣವಿರುತ್ತದೆ. ಬೇರೆ ದಿನಗಳಲ್ಲಿ ಜೀವನ ನೆಡೆಸುವುದು ತುಂಬಾ ಕಷ್ಟ. ವರ್ತಕರು ನಮ್ಮನ್ನು ತುಳಿದು ಹಾಕುತ್ತಾರೆ’ ಎಂದನು.

ಇವನು ಸಹ ಉಳಿದಿಬ್ಬರಂತೆಯೇ ತಲೆಕೆಟ್ಟವ ಎಂದು ಭಾವಿಸಿ ಅಲ್ಲಿಯೇ ಇದ್ದ ಈ ಮೂವರ ತಾಯಿಯ ಬಳಿ ಬಂದರು. ‘ಅಮ್ಮಾ, ನಮ್ಮ ಮಹಾರಾಜರ ಒಂಟೆಯನ್ನು ನೋಡಿದ್ದೀರಾ’ ಎಂದು ವಿಚಾರಿಸಿದರು. ಆ ತಾಯಿಯು ‘ಹೌದು, ನೋಡಿದ್ದೇನೆ. ನನ್ನ ಮಕ್ಕಳು ಆ ಒಂಟೆಯನ್ನು ಹೊಡೆದು ಕೊಂದು, ಬಚ್ಚಿಟ್ಟಿದ್ದಾರೆ’ ಎಂದಳು. ರಾಜ ಭಟರಿಗೆ ಅವಳ ಉತ್ತರ ಕೇಳಿ ತವಕ ಹೆಚ್ಚಾಯಿತು. ಮಹಾರಾಜರ ಒಂಟೆ ಬಗ್ಗೆ ಕೊನೆಗೂ ತಿಳಿಯಿತು ಎಂದುಕೊಂಡರು.

‘ಹೌದಾ?! ಎಲ್ಲಿ? ಯಾವಾಗ? ತಿಳಿಸು’ ಎಂದರು. ರಾಜ ಭಟರಿಗೆ ಆ ತಾಯಿಯು ‘ಮೂವರು ಮಕ್ಕಳು ಸೇರಿ ನನ್ನನ್ನು ಮದುಮಗಳಾಗಿ ಮಾಡಿದ ದಿನ!’ ಎಂದಳು. ರಾಜ ಭಟರು ಇಲ್ಲಿರುವ ಜನರೆಲ್ಲಾ ಮೂರ್ಖರಿರಬೇಕೆಂದು, ಅವಳನ್ನು ವಿಚಾರಿಸಿ ಪ್ರಯೋಜನವಿಲ್ಲವೆಂದು ಅಲ್ಲಿಂದ ಮುಂದೆ ಹೊರಟರು. ಎಲ್ಲಿಯೂ ಒಂಟೆಯ ಸುಳಿವು ಸಿಗದೆ ಅರಮನೆ ಕಡೆಗೆ ಪಯಣ ಹೊರಟರು.

ಕೃಪೆ: ವೇದಾವತಿ ( ಸಾಮಾಜಿಕ ಜಾಲತಾಣ)

ರಾಜಕೀಯ

ಕಾಂಗ್ರೆಸ್ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು

ಕಾಂಗ್ರೆಸ್ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು

ಕರ್ನಾಟಕವನ್ನು ಕಾಂಗ್ರೆಸ್ ಸರಕಾರ ಹಾಳು ಮಾಡುತ್ತಿದೆ. ಅದು ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದರೆ ಪರಿಶಿಷ್ಟ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಹಣವನ್ನು ಚುನಾವಣೆಗೆ ಬಳಸಿಕೊಂಡಿದೆ. HD Deve Gowda

[ccc_my_favorite_select_button post_id="102362"]
ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆಸಿದರು. ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪಕ್ಷ. ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, nikhil kumaraswamy

[ccc_my_favorite_select_button post_id="102348"]
Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ ಆಕ್ರೋಶ

Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ

ವೈರಲ್ ವಿಡಿಯೋದಲ್ಲಿ ಅಕ್ರಮ ವಲಸಿಗರ ಕಾಲನ್ನು ಸಂಕೋಲೆಗಳಲ್ಲಿ ಕಟ್ಟಿರುವುದು ಹಾಗೂ ಕೈಗಳನ್ನು ಕೋಳಗಳಿಂದ ಬಂಧಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. Video

[ccc_my_favorite_select_button post_id="102365"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ಮನೆ ಮಾರಿ ಪ್ರೇಮಿಯೊಂದಿಗೆ ಪತ್ನಿ ಪರಾರಿ.. ಗಂಡ ಆತ್ಮಹತ್ಯೆ..!

ಮನೆ ಮಾರಿ ಪ್ರೇಮಿಯೊಂದಿಗೆ ಪತ್ನಿ ಪರಾರಿ.. ಗಂಡ ಆತ್ಮಹತ್ಯೆ..!

ಪ್ರಿಯಕರೊಂದಿಗೆ ಓಡಿ ಹೋಗಿರುವ ವಿವಾಹಿತ ಮಹಿಳೆ ವಿದೇಶದಲ್ಲಿದ್ದ ತನ್ನ ಗಂಡನನ್ನು ಬಿಟ್ಟಿರುವುದಲ್ಲದೆ, ಗಂಡ ತನಗಾಗಿ ಕಟ್ಟಿದ್ದ ಮನೆಯನ್ನು ಮಾರಿದ್ದಾಳೆ. Suicide

[ccc_my_favorite_select_button post_id="102360"]
ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ

ಹುಲಿಗೆಮ್ಮ ದೇವಿಯ ದೇವರ ಕಾರ್ಯಕ್ರಮಕ್ಕಾಗಿ ಗುರುಗುಂಟಾಗೆ ತೆರಳುತ್ತಿದ್ದಾಗ ತಿಂಥಣಿ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ

[ccc_my_favorite_select_button post_id="102325"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!