ಹರಿತಲೇಖನಿ ದಿನಕ್ಕೊಂದು ಕಥೆ; ಉಪಕಾರ ಸ್ಮರಣೆ

ಒಂದೂರಿನಲ್ಲಿ ಆಕಾಶನೆಂಬ ಹುಡುಗನಿದ್ದ. ದಿನಾಲೂ ‘ಶಾಲೆಗೆ ಹೋಗುತ್ತಿದ್ದ. ಅವನು ಬರುವ ಹೊತ್ತಿಗೆ ತಾಯಿ ತಿಂಡಿ ತಯಾರಿಸಿ ಇಡುತ್ತಿದ್ದಳು. ಅದೊಂದು ದಿನ ಆಕಾಶ ಹೊಟ್ಟೆ ಹಸಿದುಕೊಂಡು ಮನೆಗೆ ಬಂದ. ಆದರೆ ತಾಯಿ ಮನೆಯಲ್ಲಿರಲಿಲ್ಲ. ಹಸಿವೆಯಿಂದ ಪಕ್ಕದ ಮನೆಗಳಲ್ಲಿ ತಿನ್ನಲು ಏನಾದರೂ ಕೊಡಿ ಎಂದು ಬೇಡಿಕೊಳ್ಳುತ್ತ ನಡೆದ. ಯಾರೂ ತಿನ್ನಲು ಕೊಡಲಿಲ್ಲ.

ಬೇಜಾರಾಗಿ, ಹಸಿವೆಯಿಂದ ಬಳಲಿ ಜಗಲಿಯೊಂದರ ಮೇಲೆ ಕುಳಿತ. ಆ ಮನೆಯಲ್ಲಿ ಲತಾ ಎಂಬ ಹುಡುಗಿ ಇದ್ದಳು. ಅವಳು ಅವನು ಹಸಿವೆಯಿಂದ ಬೇಡುತ್ತಿದ್ದುದನ್ನು ಗಮನಿಸಿದ್ದಳು. ತನ್ನ ಮನೆಯಿಂದ ಒಂದು ಲೋಟ ಹಾಲನ್ನು ತಂದು ಅವನಿಗೆ ಕೊಟ್ಟಳು. ಸಮಾಧಾನಗೊಂಡು ಆಕಾಶ ಮನೆಗೆ ಮರಳಿದ.

ವರ್ಷಗಳು ಉರುಳಿದವು. ಲತಾ ದೊಡ್ಡವಳಾದಳು. ಆದರೆ ಅವಳಿಗೊಂದು ರೋಗ ಅಂಟಿಕೊಂಡಿತು. ಯಾವ ವೈದ್ಯರಿಗೆ ತೋರಿಸಿದರೂ ಗುಣವಾಗಲಿಲ್ಲ. ಕೊನೆಗೆ ಅವಳ ತಂದೆ ತಾಯಿ ಪಟ್ಟಣದ ದೊಡ್ಡ ದವಾಖಾನೆಗೆ ಕರೆತಂದರು. ವೈದ್ಯರು ತಪಾಸಣೆ ಮಾಡಿ ಚಿಕಿತ್ಸೆ ಆರಂಭಿಸಿದರು.

ಲತಾಳ ತಂದೆಗೆ ಇಂಥ ದೊಡ್ಡ ದವಾಖಾನೆಯಲ್ಲಿ ಅದೆಷ್ಟು ವೆಚ್ಚವಾಗುವುದೋ ಎಂದು ಗಾಬರಿಯಾಗತೊಡಗಿತು. ಮೂರು ತಿಂಗಳಾದ ಮೇಲೆ ಲತಾ ಗುಣಮುಖಳಾದಳು. ಬಿಲ್ಲನ್ನು ಕಟ್ಟುವುದು ಹೇಗೆ ಎಂಬ ಚಿಂತೆಯಲ್ಲಿ ಕೌಂಟರಿಗೆ ಬಂದು ಬಿಲ್ಲು ಕೊಡಲು ಹೇಳಿದರು.

ಲತಾಳ ತಂದೆಗೆ ಓದಲು ಬರುತ್ತಿರಲಿಲ್ಲ. ಕಾರಣ ಲತಾಳೇ ಚೀಟಿ ತೆರೆದು ನೋಡಿದಳು. ಆಶ್ಚರ್ಯವಾಯಿತು! “ಎಲ್ಲ ಬಿಲ್ಲನ್ನು ಒಂದು ಲೋಟ ಹಾಲಿನಿಂದ ಪಾವತಿಸಲಾಗಿದೆ’ ಎಂದು ಬರೆದಿತ್ತು. ಲತಾಳ ತಂದೆಗೆ ಅಚ್ಚರಿಯಾಯಿತು. ಲತಾ ವಿವರವಾಗಿ ತಿಳಿಸಿದಳು. ಅವನೇ ಆಕಾಶನೆಂದು ತಿಳಿದು ಓಡಿಹೋಗಿ, ಧನ್ಯವಾದ ಅರ್ಪಿಸಿದರು.

ಒಂದು ಲೋಟ ಹಾಲು ನೀಡಿದ್ದನ್ನು ನೆನಪಿನಲ್ಲಿಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಉಪಕಾರ ಮಾಡಿದ್ದು ಎಂದಿಗೂ ನಮ್ಮನ್ನು ಕಾಪಾಡುತ್ತದೆ ಅಲ್ಲವೇ?

ಕೃಪೆ: ಸಾಮಾಜಿಕ ಜಾಲತಾಣ ( ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಗ್ರಾಪಂ ಚುನಾವಣೆಗೆ ವೇಳಾಪಟ್ಟಿ ಪ್ರಕಟ

ಗ್ರಾಪಂ ಚುನಾವಣೆಗೆ ವೇಳಾಪಟ್ಟಿ ಪ್ರಕಟ

ಈ ಕುರಿತು ಆದೇಶ ಹೊರಡಿಸಿರುವ ಚುನಾವಣಾ ಆಯೋಗ, ವಿವಿಧ ಕಾರಣಗಳಿಂದ ತೆರವಾಗಿದ್ದ ರಾಜ್ಯದ 223 ಗ್ರಾಮ ಪಂಚಾಯಿತಿಗಳ 265 ಸದಸ್ಯ ಸ್ಥಾನಗಳ ಚುನಾವಣೆಗೆ election

[ccc_my_favorite_select_button post_id="105817"]
ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ: ಏ. 27 ಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಿಎಂ, ಡಿಸಿಎಂ ಆಗಮನ

ಕಾಂಗ್ರೆಸ್ ಸರ್ಕಾರದ 2 ವರ್ಷಗಳ ಸಾಧನೆ: ಏ. 27 ಕ್ಕೆ ಬೆಂಗಳೂರು ಗ್ರಾಮಾಂತರ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನ ಕುಂದಾಣ ಹೋಬಳಿಯ ಭೈರದೇನಹಳ್ಳಿ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆ ಸಮಾವೇಶ

[ccc_my_favorite_select_button post_id="105775"]
ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಇನ್ನಿಲ್ಲ..!

ಇಸ್ರೋದ ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಇನ್ನಿಲ್ಲ..!

ಇಸ್ರೋ ಮಾಜಿ ಅಧ್ಯಕ್ಷರಾಗಿದ್ದ ಡಾ.ಕೆ.ಕಸ್ತೂರಿ ರಂಗನ್ (Dr.K.Kasturirangan) ಅವರು ಶುಕ್ರವಾರ ನಿಧನರಾಗಿದ್ದಾರೆ.

[ccc_my_favorite_select_button post_id="105768"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಡೆಲ್ಲಿ ವಿರುದ್ಧ ಗೆಲುವು.. ಟೇಬಲ್ ಟಾಪಲ್ಲಿ RCB

ಡೆಲ್ಲಿ ವಿರುದ್ಧ ಗೆಲುವು.. ಟೇಬಲ್ ಟಾಪಲ್ಲಿ RCB

ಕೃಣಾಲ್ ಪಾಂಡ್ಯ ಹಾಗೂ ವಿರಾಟ್ ಕೊಹ್ಲಿ ಅವರ ಬಹು ಮುಖ್ಯ ಜತೆಯಾಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭಾನುವಾರ ಎದುರಾಳಿ

[ccc_my_favorite_select_button post_id="105823"]
ಮಲಗಿದ್ದ ಪತಿಯ ಕತ್ತಿಗೆ ಚಾಕು ಹಾಕಿದ ಪತ್ನಿ..!

ಮಲಗಿದ್ದ ಪತಿಯ ಕತ್ತಿಗೆ ಚಾಕು ಹಾಕಿದ ಪತ್ನಿ..!

ಕ್ಷುಲ್ಲಕ ಕಾರಣಕ್ಕೆ ತನ್ನ ಪತಿಯನ್ನೇ ಕೊಲೆ (Murder) ಮಾಡಲು ಯತ್ನಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.

[ccc_my_favorite_select_button post_id="105815"]
ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ಸಂಭವಿಸಿದ ಸರಣಿ ಅಪಘಾತಗಳು ಆತಂಕಕ್ಕೆ ಕಾರಣವಾಗಿದೆ. harithalekhani

[ccc_my_favorite_select_button post_id="105576"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!