ಹರಿತಲೇಖನಿ ದಿನಕ್ಕೊಂದು ಕಥೆ: ಬದುಕಿಗೆ ಪಾಠ ಮಹಾಭಾರತದಲ್ಲಿ.!

ಮಾನವನೆಂಬ ಜೀವಿಯೊಳಗೆ ಯಾವೆಲ್ಲ ಭಾವನೆಗಳು, ಸಂಘರ್ಷಗಳು, ರಾಗ ದ್ವೇಷವೇ ಮೊದಲಾದ ದ್ವಂದ್ವಗಳು ಮನೆ ಮಾಡಿಕೊಂಡಿರುವುದೋ ಅದೆಲ್ಲದರ ಅನಾವರಣವೇ ಮಹಾಭಾರತ. ಇಲ್ಲಿ ಮನಶ್ಶಾಸ್ತ್ರವಿದೆ, ರಾಜಕಾರಣವಿದೆ, ಪ್ರೀತಿ ವಿಶ್ವಾಸವಿದೆ, ಕ್ರೌರ್ಯವಿದೆ, ದ್ರೋಹ ಚಿಂತನವಿದೆ, ಮುಗ್ಧತೆಯಿದೆ ಅಂದರೆ ಸರ್ವಾಂಗ ಸುಂದರವಾದ, ಸಾರ್ವಕಾಲಿಕವಾದ, ಸರ್ವತ್ರವಾದ, ಸರ್ವರಿಗೂ ಅನ್ವಯವಾದ ವಿಶಿಷ್ಟವಾದ ಕಥಾನಕದ ಹೂರಣವೇ ಇದೆ… ಇದು ಮಹಾಭಾರತ.

ಇಲ್ಲಿ ದುರ್ಯೋಧನಾದಿಗಳು ಕೆಟ್ಟವರೆಂದು ಯುಧಿಷ್ಟಿರಾದಿಗಳು ಸಜ್ಜನರೆಂದು ಸ್ಥೂಲವಾಗಿ ಹೇಳಬಹುದಾದರೂ ಅವರವರ ಭಾವಕ್ಕೆ ತರ್ಕಕ್ಕೆ ಅನುಗುಣವಾಗಿ ಈ ನಿರ್ಣಯದಲ್ಲಿಯೂ ಭಿನ್ನ ನೋಟಗಳಿರುವುದೂ ಅಷ್ಟೇ ಸತ್ಯ

ಯುಧಿಷ್ಟಿರನ ಧರ್ಮಪ್ರಜ್ಞೆ ಇರಬಹುದು, ದುರ್ಯೋಧನನ ಅಧರ್ಮಪ್ರಜ್ಞೆ ಇರಬಹುದು ಯಾವುದು ಒಂದು ಮಿತಿಯಲ್ಲಿದ್ದರೆ ಅದು ಸಹ್ಯವಾದೀತು ಅತಿಯಾದರೆ ಅಧರ್ಮದಂತೆ ಧರ್ಮವೂ ಅಸಹ್ಯವೇ ಆದೀತೆನ್ನುವುದಕ್ಕೂ ಮಹಾಭಾರತವೇ ಸಾಕ್ಷಿ. ಎಷ್ಟೋ ಕಡೆಯಲ್ಲಿ ಯುಧಿಷ್ಟಿರನಿಗೆ ಅನ್ಯಾಯವಾಗಲು ಆತನ ಅತಿಯಾದ ಧರ್ಮವೇ ಕಾರಣವಾಗುತ್ತದೆ.

ಯಾವುದು ಸಮಾಜಕ್ಕೆ ಅಹಿತವಾಗಿರುವುದೋ ರಾಜ್ಯಕ್ಕೇ ಮುಳುವಾಗುವುದೋ ಅಂತಹ ವಿಚಾರಗಳನ್ನು ನಿರ್ಣಯಿಸುವಾಗ ತನ್ನ ಸ್ವಾರ್ಥವನ್ನು ಬದಿಗಿಟ್ಟು ವ್ಯವಹರಿಸುವುದೇ ಧರ್ಮ. 

ದ್ಯೂತದ ಸಮಯದಲ್ಲಿ ತನ್ನೊಡನೆ ತನ್ನ ತಮ್ಮಂದಿರನ್ನೂ, ಹೆಂಡತಿಯನ್ನೂ ಹಾಗೇ ಸರ್ವ ಸಂಪತ್ತನ್ನೂ ಕಳಕೊಂಡಿದ್ದಾದರೆ ಅದು ಧರ್ಮ ಎಂಬ ಅತಿಯಾದ ಭಾವನೆಯಿಂದಲೇ. ಅದೇರೀತಿ ತಮ್ಮಂದಿರು ಹೆಂಡತಿ ಎಲ್ಲರೂ ಅತಿಯಾದ ವಿನೀತ ಭಾವದಿಂದಲೇ ಯುಧಿಷ್ಟಿರನನ್ನು ಪ್ರಶ್ನಾತೀತ ನಾಯಕನೆಂದು ಒಪ್ಪಿದ್ದರಿಂದಲೇ ಪಾಂಡವರಿಗೆ ಅನ್ಯಾಯವಾದದ್ದು.

ಅಷ್ಟು ದೊಡ್ಡ ವಂಶದ ರಾಜನಾಗಿದ್ದೂ ಹೆಜ್ಜೆ ಹೆಜ್ಜೆಗೂ ಶಕುನಿಯ ಮೋಸವನ್ನು ಅರಿಯದೆ ಬರಿದೆ ಧರ್ಮ ಧರ್ಮವೆಂಬ ಮಂತ್ರದಿಂದ ನಗೆಪಾಟಲಾಗುವಂತೆ ವರ್ತಿಸುವ ಯುಧಿಷ್ಟಿರನ ರಾಜನೀತಿ ನಿಜವಾಗಿಯೂ ಶೋಚನೀಯವೇ. 

ಅತಿಯಾದರೆ ಅಮೃತವೂ ವಿಷವೇ ಎಂದು ಇದರಿಂದ ತಿಳಿಯುತ್ತದೆ. ಹಾಗೆಯೇ ದುರ್ಯೋಧನನಾಗಲಿ, ದುಷ್ಯಾಸನನಾಗಲಿ, ಕರ್ಣನಾಗಲಿ ಅಷ್ಟೊಂದು ಹದ್ದು ಮೀರಿ ವರ್ತಿಸುತ್ತಿರಲೂ ಯುಧಿಷ್ಟಿರನ ಅತಿಯಾದ ಧರ್ಮಪ್ರಜ್ಞೆಯೇ ಕಾರಣ. 

ಇತ್ತ ಯುಧಿಷ್ಟಿರನ ಪೂರ್ಣ ಅಂಕೆಯಲ್ಲಿರದೆ ರಾಜ್ಯದ ಹಿತದೃಷ್ಟಿಯಿಂದ ಸ್ವಲ್ಪಮಾತ್ರವಾದರೂ ಭೀಮಾದಿಗಳು ಸ್ವಂತಿಕೆಯಿಂದ ವರ್ತಿಸಿದ್ದರೆ, ಶಕುನಿಯನ್ನು ಮೊದಲೆ ಮುಗಿಸಿದ್ದರೆ, ಪಾಂಡು ರಾಜ ಕಾಡಿಗೆ ಹೋದರೂ ಮಾದ್ರಿಯ ಸಂಗ ಮಾಡದೆ ಇದ್ದಿದ್ದರೆ ಚಿತ್ರಣ ಭಿನ್ನವಾಗಿರುತ್ತಿತ್ತು. ಹಾಗೆಂದು ನಾವು ಹೇಳಿದಂತೆ ರೆ.. ರೆ.. ಗಳು ಸೇರಿಸಲಾಗದು. ಆದರೂ ನಾವು ಈ ರೆ…ರೆ…ಗಳಿಂದ ಪಾಠ ಕಲಿಯಬಹುದು.

ಎದುರಾಳಿಯು ದುರ್ಬಲನಾದಾಗ, ಮೊದಲೇ ದುಷ್ಟರಾದಂಥ ದುರ್ಯೋಧನಾದಿಗಳು ಅದರ ದುರುಪಯೋಗವನ್ನು ಪಡಕೊಳ್ಳದಿರುವರೇ..? ಯಾವುದೇ ಸಂದರ್ಭದಲ್ಲಿ ಯಾರು ತನ್ನ ದೌರ್ಬಲ್ಯವನ್ನು ಇತರರಿಗೆ ಬಿಟ್ಟುಕೊಡುವನೋ ಆವಾಗ ಆತನ ಅಧಃಪತನ ಪ್ರಾರಂಭವಾದಂತೆ. ಯುಧಿಷ್ಟಿರನಿಗೆ ಧರ್ಮದ ದೌರ್ಬಲ್ಯ, ದುರ್ಯೋಧನನಿಗೆ ಅಹಂಕಾರದ ದೌರ್ಬಲ್ಯ, ಶಕುನಿಗೆ ದ್ವೇಷದ ದೌರ್ಬಲ್ಯ, ದೃತರಾಷ್ಟ್ರನಿಗೆ ಪುತ್ರ ವಾತ್ಸಲ್ಯದ ದೌರ್ಬಲ್ಯ. ಆಯಾ ವ್ಯಕ್ತಿಯ ದೌರ್ಬಲ್ಯ ಇನ್ನೊಬ್ಬನಿಗೆ ಪ್ರಾಬಲ್ಯವನ್ನು ಸೃಷ್ಟಿಸಿ ಕೊಡುತ್ತದೆ.

ರಾಮಾಯಣವಾಗಲಿ ಮಹಾಭಾರತವಾಗಲಿ ತನ್ನ ತನ್ನ ದೌರ್ಬಲ್ಯವನ್ನು ಬಿಟ್ಟು ಕೊಟ್ಟಿದ್ದರಿಂದಲೇ ಭಿನ್ನವಾಗಿ ಹುಟ್ಟಿಕೊಂಡಿದೆ. ಅಂದು ದಶರಥ ಕೂಡ ಕೈಕೇಯಿಗೆ ‘ಸೂರ್ಯ ವಂಶದವರು ವಚನ ಭ್ರಷ್ಟರಾಗಲಾರರು’ ಎಂಬ ದೌರ್ಬಲ್ಯಕ್ಕೆ ಒಳಗಾಗಿ ದೇಶದ, ಪ್ರಜೆಗಳ ಮಾತ್ರವಲ್ಲ ತನ್ನ ಸಂಸಾರದ ಅಧೋಗತಿಗೆ ಕಾರಣನಾದನು. 

ಒಂದು ವೇಳೆ ಕೈಕೇಯಿ ರಾಮನನ್ನು ಕಾಡಿಗೆ ಅಟ್ಟಬೇಕು ಅನ್ನುವ ಬದಲು ರಾಮನನ್ನು ಕೊಲ್ಲಬೇಕು ಎಂದಿದ್ದರೆ ವಚನ ಪಾಲನೆ ಎನ್ನುವುದು ಎಷ್ಟೊಂದು ಅಪಹಾಸ್ಯಕ್ಕೆ ಒಳಗಾಗುತ್ತಿತ್ತು. ಏನೇ ಇರಲಿ ಈ ಮಹಾಭಾರತ, ರಾಮಾಯಣದಂಥ ಗ್ರಂಥಗಳಲ್ಲಿ ಅನುಭವಗಳ ಪಾಠಗಳು ಅನಂತವಾಗಿವೆಯೆಂದೇ ಹೇಳಬಹುದು.

ಅವರವರ ಭಾವಕ್ಕೆ ಅವರವರ ತಿಳಿವಿನಲಿ ತೆರೆದುಕೊಳ್ಳುವದೇ ಇದರ ಮಹಿಮೆ.

ಕೃಪೆ: ಸಾಮಾಜಿಕ ಜಾಲತಾಣ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಮೋದಿ ಬೆಲೆ ಏರಿಕೆ ವಿರುದ್ಧ ರಾಜ್ಯ ಬಿಜೆಪಿ ಪ್ರತಿಭಟನೆ; ಸಂತೋಷ್ ಲಾಡ್ ತಿರುಗೇಟು

ಮೋದಿ ಬೆಲೆ ಏರಿಕೆ ವಿರುದ್ಧ ರಾಜ್ಯ ಬಿಜೆಪಿ ಪ್ರತಿಭಟನೆ; ಸಂತೋಷ್ ಲಾಡ್ ತಿರುಗೇಟು

ಧಾರವಾಡ: ರಾಜ್ಯ ಸರಕಾರದ ವಿರುದ್ಧ ಸರಣಿ ಆರೋಪಗಳನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ರಾಜ್ಯ ಬಿಜೆಪಿ (BJP) ಇದೀಗ ಸರಣಿ ಹೋರಾಟಕ್ಕೆ ಮುಂದಾಗಿದ್ದು, ಇದರ ಭಾಗವಾಗಿ ಇಂದಿನಿಂದ ಮೈಸೂರಿನಲ್ಲಿ ‘ಜನಾಕ್ರೋಶ ಯಾತ್ರೆ’ಗೆ ಚಾಲನೆ

[ccc_my_favorite_select_button post_id="105043"]
ದೊಡ್ಡಬಳ್ಳಾಪುರಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ: ಎಸಿ, ತಹಶಿಲ್ದಾರ್‌ಗೆ ತರಾಟೆ| Video

ದೊಡ್ಡಬಳ್ಳಾಪುರಕ್ಕೆ ಉಪಲೋಕಾಯುಕ್ತ ಬಿ.ವೀರಪ್ಪ ದಿಢೀರ್ ಭೇಟಿ: ಎಸಿ, ತಹಶಿಲ್ದಾರ್‌ಗೆ ತರಾಟೆ| Video

ದೊಡ್ಡಬಳ್ಳಾಪುರ (Doddaballapura): ಉಪಲೋಕಾಯುಕ್ತ ಬಿ.ವೀರಪ್ಪ ಅವರು ಇಂದು ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಈ ವೇಳೆ ರಾಗಿ ಖರೀದಿ ಕೇಂದ್ರದ ಬಳಿ ಇದ್ದ

[ccc_my_favorite_select_button post_id="105045"]
ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ಪಂಬನ್ ಸೇತುವೆ ಲೋಕಾರ್ಪಣೆ| Video ನೋಡಿ

ರಾಮೇಶ್ವರಂ: ತಮಿಳುನಾಡಿನ ಪಂಬನ್ ಮತ್ತು ಹಿಂದೂ ಮಹಾಸಾಗರದಲ್ಲಿನ ದ್ವೀಪದ ರಾಮೇಶ್ವರಂ ನಗರವನ್ನು ಸಂಪರ್ಕಿಸುವ ಪಂಬನ್ ವರ್ಟಿಕಲ್ ಲಿಫ್ಟ್ (ಮೇಲ್ಮುಖ ತೆರೆದುಕೊಳ್ಳುವ) ಪಂಬನ್ ಸೇತುವೆಯನ್ನು (Pamban pridge) ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮಧ್ಯಾಹ್ನ 12.30ರಲ್ಲಿ

[ccc_my_favorite_select_button post_id="105011"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
Doddaballapura: ದೇವಾಲಯದ ಬಳಿ ಇಸ್ಪೀಟ್ ಜೂಜಾಟ.. ಪೊಲೀಸರ ದಾಳಿ

Doddaballapura: ದೇವಾಲಯದ ಬಳಿ ಇಸ್ಪೀಟ್ ಜೂಜಾಟ.. ಪೊಲೀಸರ ದಾಳಿ

ದೊಡ್ಡಬಳ್ಳಾಪುರ (Doddaballapura): ದೇವಾಲಯದ ಮುಂಭಾಗ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿರುವ ದೊಡ್ಡಬೆಳವಂಗಲ ಪೊಲೀಸರು 8 ಆರೋಪಿಗಳನ್ನು ಬಂಧಿಸಿದ್ದಾರೆ.

[ccc_my_favorite_select_button post_id="105020"]
ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಕಾರು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು 15 ಬಾರಿ ನಿರಂತರವಾಗಿ ಉರುಳಿ ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. Video

[ccc_my_favorite_select_button post_id="104851"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!