ಹರಿತಲೇಖನಿ ದಿನಕ್ಕೊಂದು ಕಥೆ: ಹುಷಾರು, ಪ್ರಾಮಾಣಿಕತೆಯ ಪರೀಕ್ಷೆ ಕಾಯ್ತಾ ಇರ್ತದೆ..!!

ಒಬ್ಬರು ಪ್ರಕಾಂಡ ವಿದ್ವಾಂಸರಿದ್ದರು. ಹತ್ತಾರು ಊರುಗಳಲ್ಲಿ ಅವರ ಪ್ರವಚನಗಳಿಗೆ ಭಾರಿ ಬೆಲೆ ಇತ್ತು. ಜನರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಿದ್ದರು. ಪುರಾಣಗಳ ಕಥೆಗಳನ್ನು ಸಮಕಾಲೀನ ನೆಲೆಗಳಿಗೆ ವಿಸ್ತರಿಸಿ ಜನರಿಗೆ ಒಳಿತು-ಕೆಡುಕಿನ ಬಗ್ಗೆ ಬೋಧನೆ ಮಾಡುವುದು ಅವರ ವಿಶೇಷ. ಸಾಲದ್ದಕ್ಕೆ ತಾವು ಕೂಡಾ ಉನ್ನತ ಮೌಲ್ಯಗಳನ್ನು ಪಾಲಿಸಿಕೊಂಡು ಬರುತ್ತಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು.

ಒಂದು ಸಾರಿ ಅವರಿಗೆ ಪಟ್ಟಣದ ಸಮೀಪದ ಒಂದು ಊರಿನಿಂದ ಪ್ರವಚನಕ್ಕೆ ಕರೆಬಂದಿತ್ತು. ಹೀಗೆ ಪ್ರವಚನಕ್ಕೆ ಕರೆಬಂದರೆ ದೊಡ್ಡ ಮೊತ್ತ ಕೇಳುವವರಲ್ಲ ಅವರು. ಹಾಗಾಗಿ ಬಸ್ಸಿನಲ್ಲೇ ಹೋಗಿಬಿಡುತ್ತಿದ್ದರು. ಹಾಗೆ ಬಸ್ಸು ಹತ್ತಿ ಸೀಟೊಂದನ್ನು ಹಿಡಿದು ಕುಳಿತರು. ಸ್ವಲ್ಪಹೊತ್ತಿನಲ್ಲಿ ಬಸ್ಸು ಹೊರಟಿತು. ಕಂಡಕ್ಟರ್ ಟಿಕೆಟ್ ಕೊಡಲು ಆರಂಭಿಸಿದ. ಆಚಾರ್ಯರು ಹಣ ನೀಡಿದರು. ಕಂಡಕ್ಟರ್ ಟಿಕೆಟ್ ಮತ್ತು ಬಾಕಿ ಹಣವನ್ನು ವಾಪಸ್ ನೀಡಿದ.

ಆಚಾರ್ಯರು ಎಣಿಸಿ ನೋಡಿದರೆ ಹತ್ತು ರೂಪಾಯಿ ಹೆಚ್ಚು ಬಂದಿತ್ತು. ಕಂಡಕ್ಟರ್ ಟಿಕೆಟ್ ಮಾಡಿಕೊಂಡು ವಾಪಸ್ ಬರುವಾಗ ಕೊಡಬೇಕು ಎಂದುಕೊಂಡರು ರಾಯರು.

ಆದರೆ, ಸ್ವಲ್ಪ ಹೊತ್ತು ಹಾಗೇ ಕುಳಿತಿದ್ದಾಗ ಮತ್ತೆ ಯೋಚನೆ ಮಾಡಿದರು: ನಾನು ಸಣ್ಣ ಹತ್ತು ರೂಪಾಯಿಯ ಬಗ್ಗೆ ಅನಗತ್ಯವಾಗಿ ಯೋಚನೆ ಮಾಡುತ್ತಿದ್ದೇನೆ ಅಲ್ವಾ? ಅಷ್ಟಕ್ಕೂ ಈ ಬಸ್ ಕಂಪನಿಗಳು ದೊಡ್ಡ ಲಾಭ ಮಾಡುತ್ತವೆ. ಕಂಡಕ್ಟರ್ ಗಳೇನು ದುಡ್ಡು ಹೊಡೆಯೋದು ಕಡಿಮೇನಾ’ ಎಂದೆಲ್ಲ ಯೋಚಿಸಿ, ದುಡ್ಡು ಹಿಂದಿರುಗಿಸದಿದ್ದರೆ ಏನಾಗ್ತದೆ ಎಂದು ಲೆಕ್ಕ ಹಾಕಿದರು.

`ಹಾಗಾಗಿ, ಇದು ದೇವರೇ ಕೊಟ್ಟ ಹಣ ಅಂತ ಇಟ್ಕೊಳ್ತೇನೆ. ಇದನ್ನು ಯಾವುದಾದರೂ ಒಳ್ಳೆಯ ಕೆಲಸಕ್ಕೆ ಬಳಸಿದರೆ ಆಯಿತು ಅಷ್ಟೇ ಅಲ್ವಾ?’ ಎಂದು ಯೋಚಿಸುತ್ತಾ ಕೈಯಲ್ಲಿದ್ದ 10 ರೂ. ನೋಟನ್ನು ಜೇಬಿಗೆ ತುರುಕಿಕೊಡರು.

ಅಷ್ಟು ಹೊತ್ತಿಗೆ ಬಸ್ಸು ಅವರು ಇಳಿಯಬೇಕಾಗಿದ್ದ ಊರಿನ ಬಸ್ ನಿಲ್ದಾಣವನ್ನು ತಲುಪಿತು. ಕಂಡಕ್ಟರ್ ಯಾರ್ರೀ ಇಳಿಯೋರು ಅಂದ. ರಾಯರು ತಮ್ಮ ಧೋತರವನ್ನು ಸರಿ ಮಾಡಿಕೊಂಡು ಜುಬ್ಬಾವನ್ನೊಮ್ಮೆ ಸವರಿಕೊಂಡು ಇಳಿದರು. ಎರಡೇ ಹೆಜ್ಜೆ ಇಟ್ಟದ್ದು, ಅವರ ಮನಸ್ಸು ಒಮ್ಮೆಲೇ ಜಗ್ಗಿದಂತಾಯ್ತು. ಕೂಡಲೇ ಅವರು ಜುಬ್ಬಾದ ಜೇಬಿಗೆ ಕೈ ಹಾಕಿ ಹತ್ತು ರೂಪಾಯಿ ತೆಗೆದರು. ಅಷ್ಟು ಹೊತ್ತಿಗೆ ಬಸ್ ಮುಂದಿನ ಪಯಣಕ್ಕೆ ಹೊರಟಿತ್ತು. ಆದರೂ ಆಚಾರ್ಯರು ಕಂಡಕ್ಟ್ರೇ ಎಂದು ಕೂಗಿ ಕರೆದರು. “ನೋಡಿ ಸ್ವಾಮಿ ನೀನು ಹತ್ತು ರೂ. ಹೆಚ್ಚು ಕೊಟ್ಟಿದ್ದೀರಿ. ವಾಪಸ್ ತಗೊಳ್ಳಿ” ಅಂತ ಹೇಳುತ್ತಾ ಬಸ್ಸಿನ ಕಡೆಗೆ ಹೋದರು.

ಅವರತ್ತ ಬಂದವನೇ ಕಂಡಕ್ಟರ್ ಅವರ ಕಾಲಿಗೆ ಬಿದ್ದ. ಎದ್ದು ನಿಂತು ಕೇಳಿದ: ನೀವು ಪ್ರವಚನ ನೀಡುವ ವಿಶ್ವನಾಥ ಆಚಾರ್ಯರಲ್ಲವೇ?

ಆಚಾರ್ಯರು: ಹೌದಪ್ಪಾ ಎಂದರು.

ಆಚಾರ್ಯರೇ ನಾನು ನಿಮ್ಮ ಬಗ್ಗೆ ತುಂಬ ಕೇಳಿದ್ದೇನೆ. ನಿಮ್ಮ ಪ್ರವಚನಗಳನ್ನು ನೇರವಾಗಿ ಮತ್ತು ಯೂಟ್ಯೂಬ್‍ಗಳಲ್ಲಿ ನೋಡಿದ್ದೇನೆ. ನಿಮ್ಮ ಬಗ್ಗೆ ಗೌರವಾದರ ನಂಗೆ. ಇವತ್ತು  ಬಸ್ಸಿಗೆ ಹತ್ತಿದಾಗಲೇ ನೀವೇ ಅನಿಸಿತು. ಅದರ ನಡುವೆಯೇ ಒಂದು ಸಣ್ಣ ಬುದ್ಧಿ ತೋರಿಸಿದೆ. ನಿಮಗೆ ಹತ್ತು ರೂಪಾಯಿ ಜಾಸ್ತಿ ಕೊಡೋಣ. ಪ್ರಾಮಾಣಿಕತೆಯ ಬಗ್ಗೆ ತುಂಬ ಚೆನ್ನಾಗಿ ಹೇಳುತ್ತಾರಲ್ಲಾ.. ಏನು ಮಾಡುತ್ತಾರೆ ನೋಡೋಣ ಅಂತ ಅಂದುಕೊಂಡೆ. ಈಗ ನೀವು ಅದನ್ನು ಹಿಂದೆ ಕೊಟ್ಟಿದ್ದು ನೋಡಿ ನಿಮ್ಮ ಮೇಲಿನ ಅಭಿಮಾನ ಇನ್ನೂ ಹೆಚ್ಚಾಯಿತು. ನೀವು ಕೇವಲ ಮಾತಿನಲ್ಲಿ ಏನೋ ಹೇಳಿ, ಹೇಗೋ ಬದುಕುವವರಲ್ಲ ಎನ್ನುವುದು ನಂಗೆ ಸ್ಪಷ್ಟವಾಯಿತು. ನಿಮ್ಮನ್ನು ಪರೀಕ್ಷೆ ಮಾಡಿದ ಸಣ್ಣಬುದ್ಧಿಯನ್ನು ಕ್ಷಮಿಸಬೇಕು ಗುರುಗಳೇ: ಕಂಡಕ್ಟರ್ ಹೇಳಿದ.

ಆಚಾರ್ಯರಿಗೆ ನಿಂತಲ್ಲೇ ಬೆವರಲು ಆರಂಭವಾಯಿತು, ಕೈಕಾಲು ನಡುಗಿತು. ಎರಡೂ ಕೈಗಳನ್ನು ಎತ್ತಿ ದೇವರಿಗೆ ನಮಸ್ಕರಿಸಿದರು. ದೇವರೇ ನಾನು ಹತ್ತು ರೂಪಾಯಿ ಅಲ್ವಾ ಅಂತ ಎಷ್ಟು ಕ್ಷುಲ್ಲಕವಾಗಿ ಯೋಚಿಸಿದೆ. ಅದುವೇ ನನ್ನ ಗೌರವದ ಮಾನದಂಡವಾಗಿ ಹೋಯ್ತಲ್ಲ. ದೇವರೆ ನನಗೆ ಸರಿಯಾದ ಹೊತ್ತಿನಲ್ಲಿ ಜ್ಞಾನೋದಯ ಆಗುವಂತೆ ಮಾಡಿದೆಯಲ್ಲ ನಿನ್ನ ಮಹಿಮೆ ಅಪಾರ ತಂದೆ ಎಂದು ಹೇಳುತ್ತಾ ದೇವಸ್ಥಾನದತ್ತ ನಡೆದರು.

ಕಂಡಕ್ಟರ್ ಇಡೀ ಬಸ್ಸಿಗೆ ಕೇಳುವಂತೆ ಹೇಳುತ್ತಿದ್ದ, ಆ ಆಚಾರ್ಯರಿದ್ದಾರಲ್ಲಾ.. ಭಾರಿ ಪ್ರಾಮಾಣಿಕ ಮನುಷ್ಯ..

ಕೃಪೆ: ಕೃಷ್ಣ ಭಟ್ ಅಳದಂಗಡಿ ಅಂಕಣದಿಂದ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಬೆಂಗಳೂರಿನಲ್ಲಿ ಶಾಶ್ವತ ಹೆಜ್ಜೆಗುರುತು ಬಿಟ್ಟು ಹೋಗುವ ಆಸೆ ನನ್ನದು : ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರಿನಲ್ಲಿ ಶಾಶ್ವತ ಹೆಜ್ಜೆಗುರುತು ಬಿಟ್ಟು ಹೋಗುವ ಆಸೆ ನನ್ನದು : ಡಿಸಿಎಂ ಡಿ.ಕೆ.

ಬೆಂಗಳೂರಿನಲ್ಲಿ ಬದಲಾವಣೆ ತರಬೇಕು, ನನ್ನ ಕೆಲಸಗಳ ಮೂಲಕ ನನ್ನ ಹೆಸರು ಶಾಶ್ವತವಾಗಿ ಉಳಿಯಬೇಕು, ಶಾಶ್ವತ ಹೆಜ್ಜೆ ಗುರುತು ಬಿಟ್ಟು ಹೋಗುವ ಆಸೆ ನನಗೆ ಇದೆ: D.K. Shivakumar

[ccc_my_favorite_select_button post_id="117318"]
ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ 2,84,881 ಹುದ್ದೆಗಳು ಖಾಲಿ: ನಿರುದ್ಯೋಗಿಗಳ ಅಳಲು ಕೇಳುವವರು ಯಾರು..?

ರಾಜ್ಯದಲ್ಲಿ ಸರ್ಕಾರದಲ್ಲಿ ವಿವಿಧ ಇಲಾಖೆಗಳೂ ಸೇರಿದಂತೆ ರಾಜ್ಯದಲ್ಲಿ ಬರೋಬ್ಬರಿ 2,84,881 ಹುದ್ದೆಗಳು ಖಾಲಿಯಿರುವ (Bacant Posts) ಮಾಹಿತಿ ಬಯಲಾಗಿದೆ.

[ccc_my_favorite_select_button post_id="117270"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ  ತೀರ್ಮಾನ: ಡಿಸಿಎಂ ಡಿ.ಕೆ.ಶಿವಕುಮಾರ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ಅನುಮತಿ; ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ: ಡಿಸಿಎಂ

"ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳಿಗೆ ಅನುಮತಿ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar) ತಿಳಿಸಿದರು.

[ccc_my_favorite_select_button post_id="117214"]
ದೊಡ್ಡಬಳ್ಳಾಪುರ: ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ..!

ದೊಡ್ಡಬಳ್ಳಾಪುರ: ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ..!

ಮಹಿಳೆಯೊಂದಿಗೆ ಬಂದ ಯುವಕರ ಗುಂಪೊಂದು, ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ತಂದೆ ಮತ್ತು ಮಗನ ಮೇಲೆ ಮಾರಣಾಂತಿಕ ಹಲ್ಲೆ (Assault) ನಡೆಸಿ ಪರಾರಿಯಾಗಿರುವ ಘಟನೆ ತಾಲೂಕಿನ ಪುಟ್ಟಯ್ಯನ ಅಗ್ರಹಾರ ಗ್ರಾಮದಲ್ಲಿ ನಡೆದಿದೆ.

[ccc_my_favorite_select_button post_id="117333"]
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ.. 3 ಮಂದಿ ದುರ್ಮರಣ

ಕಾರು ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಭವಿಸಿದ ಭೀಕರ ರಸ್ತೆ ಅಫಘಾತದಲ್ಲಿ (Accident) ಮೂವರು ಸಾವನಪ್ಪಿರುವ ಘಟನೆ *** ಹೊರವಲಯದ *** ಗೇಟ್ ಬಳಿ ಸಂಭವಿಸಿದೆ.

[ccc_my_favorite_select_button post_id="117239"]

ಆರೋಗ್ಯ

ಸಿನಿಮಾ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video ನೋಡಿ

‘ದಿ ಡೆವಿಲ್’ ರಿಲೀಸ್; ದೊಡ್ಡಬಳ್ಳಾಪುರದಲ್ಲಿ ಮುಗಿಲು ಮುಟ್ಟಿದ ದರ್ಶನ್ ಅಭಿಮಾನಿಗಳ ಸಂಭ್ರಮ.!| Video

ಅಭಿಮಾನಿಗಳ ದಾಸ, ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ 'ದಿ ಡೆವಿಲ್' ಇಂದು (ಡಿ.11) ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ.

[ccc_my_favorite_select_button post_id="117242"]