ದೊಡ್ಡಬಳ್ಳಾಪುರ, (ಮೇ.16); ನಗರದ ತಾಲೂಕು ಕಚೇರಿ ಮುಂಭಾಗ ಮಳೆ ನೀರು ನಿಂತಿದ್ದು, ಮಳೆ ಸುರಿದು ಮೂರು ದಿನವಾದರು ನೀರು ಖಾಲಿಯಾಗದೆ ಈ ವ್ಯಾಪ್ತಿಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಪವಿಭಾಗಾಧಿಕಾರಿ ಕಚೇರಿ, ತಹಶಿಲ್ದಾರ್ ಕಚೇರಿ ಸೇರಿದಂತೆ ತಾಲೂಕಿನ ಆಡಳಿತ ಯಂತ್ರ ಈ ತಾಲೂಕು ಕಚೇರಿಯಲ್ಲಿ ಅಡಗಿದೆ. ಆದರೆ ಈ ಕಚೇರಿಯ ಮುಂಭಾಗದಲ್ಲಿ ಈ ಅವಾಂತರವಾಗಿದ್ದರು, ಯಾರೊಬ್ಬರು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂಬ ಆಕ್ರೋಶ ಸ್ಥಳೀಯರದ್ದಾಗಿತ್ತು.
ಪ್ರತಿ ನಿತ್ಯ ಸಾವಿರಾರು ಮಂದಿ ಈ ಕಚೇರಿಗೆ ಭೇಟಿ ನೀಡುತ್ತಾರೆ. ಆ ಸಾರ್ವಜನಿಕರು ಕೊಚ್ಚೇ ನೀರಿನ ತುಳಿದುಕೊಂಡು, ತಾಲೂಕು ಕಚೇರಿಯೊಳಗೆ ಕೊಂಡೋಯ್ಯಬೇಕಾದ ನೀಡಬೇಕಾದ ಅನಿವಾರ್ಯತೆ ಎದುರಾಗಿತ್ತು.
ಇನ್ನು ನೆಲಮಂಗಲ ಜಿ.ರಾಮೇಗೌಡ ವೃತ್ತ ಸಂಪರ್ಕಿಸುವ ರಸ್ತೆ ಇದಾಗಿರುವ ಕಾರಣ, ನೂರಾರು ವಾಹನಗಳು ಕೂಡ ಈ ರಸ್ತೆಯಲ್ಲಿಯೇ ಸಂಚರಿಸುತ್ತವೆ. ಆದರೆ ರಸ್ತೆಯಲ್ಲಿ ನಿಂತಿರುವ ಕೊಚ್ಚೆ ನೀರು ಸಿಡಿದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ, ಕೊಚ್ಚೆ ನೀರು ತೆರುವು ಮಾಡುವಂತೆ ಆಗ್ರಹ ಕೇಳಿಬಂದಿತ್ತು.
ಈ ಕುರಿತಂತೆ ಹರಿತಲೇಖನಿ ವರದಿ ಕೂಡ ಪ್ರಕಟಿಸಿದ್ದು, ಇಂದು ಸಂಜೆ ವರದಿ ಪ್ರಕಟವಾದ ಕೆಲವೇ ನಿಮಿಷಗಳಲ್ಲಿ, ಈ ರಸ್ತೆಯಲ್ಲಿ ನಿಂತಿದ್ದ ಕೊಚ್ಚೆ ನೀರನ್ನು ತೆರವುಗೊಳಿಸಲು ನಗರಸಭೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….