ದೊಡ್ಡಬಳ್ಳಾಪುರ, (ಮೇ.16): ನಗರದ ಚಿಕ್ಕಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಮೇ.23ರಂದು ಶ್ರೀ ಧರ್ಮರಾಯಸ್ವಾಮಿ ಆದಿಶಕ್ತ್ಯಾತ್ಮಕ ದ್ರೌಪದಾದೇವಿ ಕರಗ ಮಹೋತ್ಸವ ನಡೆಯಲಿದೆ. ಇದರ ಅಂಗವಾಗಿ ದೇವಾಲಯದಲ್ಲಿ ಧ್ವಜಾರೋಹಣ, ಪೂಜಾದಿಗಳು ವಿದ್ಯುಕ್ತವಾಗಿ ಆರಂಭಗೊಂಡಿವೆ.
ದೇವಾಲಯದಲ್ಲಿ ಗಣಹೋಮ, ನವಗ್ರಹ ಹೋಮ, ವಾಸ್ತು ಹೋಮ, ಶಾಂತಿ ಹೋಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕರಗ ಮಹೋತ್ಸವಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿದ್ದು, ದೇವಾಲಯ ಸುಣ್ಣ ಬಣ್ಣದಿಂದ ಅಲಂಕಾರಗೊಂಡು ಅಣಿಯಾಗಿದೆ. ದೇವಾಲಯ ಸೇರಿದಂತೆ ನಗರದಲ್ಲೆಡೆ ವಿದ್ಯುತ್ ದೀಪಗಳ ಅಲಂಕಾರ ನಡೆದಿದೆ.
ಕರಗ ಮಹೋತ್ಸವದ ಅಂಗವಾಗಿ ನಿತ್ಯ ದೇವತಾ ಪೂಜಾದಿ ಕಾರ್ಯಗಳು ಹಾಗೂ ಕರಗ ಹೊರುವ ಪೂಜಾರಿಯವರಿಂದ ನಗರ ಪ್ರದಕ್ಷಿಣೆ ನಡೆಯುತ್ತಿವೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….