ಹರಿತಲೇಖನಿ ದಿನಕ್ಕೊಂದು ಕತೆ: ಸಾಮ್ರಾಟ ದಿಲೀಪ

ಶ್ರೀರಾಮ ಪ್ರಭುವಿನ ಜನ್ಮವೂ ರಘುವಂಶದಲ್ಲಿಯೇ ಆಯಿತು. ಪ್ರಭು ಶ್ರೀರಾಮನ ಜನ್ಮದ ಮೊದಲು ರಘುವಂಶದಲ್ಲಿ ಸಾಮ್ರಾಟ್ ದಿಲೀಪನೆಂಬ ಒಬ್ಬ ಮಹಾನ್ ಚಕ್ರವರ್ತಿ ಇದ್ದರು. ಸಾಮ್ರಾಟ ದಿಲೀಪನು ಗೋವ್ರತ ಆಚರಣೆಯನ್ನು ಮಾಡುತ್ತಿದ್ದನು.

ಗೋವ್ರತದ ಅರ್ಥವೇನೆಂದರೆ, ಗೋವಿನ ಸೇವೆಯನ್ನು ಮಾಡುವುದು, ಅವುಗಳ ರಕ್ಷಣೆ ಮಾಡುವುದು. ತಮ್ಮ ಕುಲಗುರು ವಸಿಷ್ಠರ ಪೂಜ್ಯ ಗೋವು ನಂದಿನಿಯ ಸೇವೆಯನ್ನು ಮಾಡುತ್ತಿದ್ದನು. ಅವರು ನಂದಿನಿ ಹಸುವಿಗೆ ಎಳೆಯ ಹಸಿ ಹುಲ್ಲು ತಿನ್ನಿಸುತ್ತಿದ್ದನು, ಪ್ರೀತಿಯಿಂದ ಅದರ ಬೆನ್ನು ಮತ್ತು ಕುತ್ತಿಗೆಯನ್ನು ಸವರುತ್ತಿದ್ದನು, ಅದರ ಮೇಲೆ ಕುಳಿತುಕೊಳ್ಳುವ ಸೊಳ್ಳೆ- ನೊಣಗಳನ್ನು ಓಡಿಸುತ್ತಿದ್ದ.

ನಂದಿನಿಯೊಂದಿಗೆ ಯಾವಾಗಲೂ ನೆರಳಿನಂತೆ ಇರುತ್ತಿದ್ದ. ಅದು ಕುಳಿತರೆ ಕುಳಿತುಕೊಳ್ಳುತ್ತಿದ್ದ, ಮತ್ತು ನಡೆಯತೊಡಗಿದರೆ ನಡೆಯುತ್ತಿದ್ದ. ಒಂದು ದಿನ ಆ ನಂದಿನಿ ಹಸುವನ್ನು ಅರಣ್ಯದಲ್ಲಿ ಮೇಯಿಸಲು ಕರೆದುಕೊಂಡು ಹೋದನು. ಅರಣ್ಯದಲ್ಲಿ ಮೇಯಿಸುತ್ತಿರುವಾಗ, ಅಕಸ್ಮಿಕವಾಗಿ ಒಂದು ಬೃಹದಾಕಾರದ ಮಹಾಕ್ರೂರ ಸಿಂಹ ಸಾಮ್ರಾಟನ ಎದುರಿಗೆ ಬಂದು ನಿಂತಿತು. ಆ ಸಿಂಹವು ನಂದಿನಿ ಹಸುವನ್ನು ನೋಡಿತು ಮತ್ತು ಅದು ನಂದಿನಿಯನ್ನು ತಿನ್ನಲು ಅದರ ಮೇಲೆರೆಗುವುದರಲ್ಲಿತ್ತು.

ರಾಜನು ಸಿಂಹವನ್ನು ನೋಡಿ ಹೆದರಲಿಲ್ಲ, ತಕ್ಷಣ ರಾಜನು ಧನುಸ್ಸಿಗೆ ಹೆದೆಯೇರಿಸಿ ಸಿಂಹದ ಮೇಲೆ ಗುರಿಯಿಟ್ಟ. ಆ ಕ್ರೂರ ಸಿಂಹವನ್ನು ‘ನೀನು ಹೊರಟು ಹೋಗು! ನಾನು ನಂದಿನಿಯ ರಕ್ಷಕನಾಗಿದ್ದೇನೆ ಹಾಗೂ ನಿನಗೆ ನಂದಿನಿಯನ್ನು ತಿನ್ನಲು ಬಿಡುವುದಿಲ್ಲ’ ಎಂದು ಹೇಳಿದನು. ಆಗ ಸಿಂಹವು ರಾಜನಿಗೆ ‘ರಾಜನ್ ನಾನಂತೂ ಹಸಿದಿದ್ದೇನೆ ಮತ್ತು ಈ ಹಸು ನನ್ನ ಭೋಜನವಾಗಿದೆ. ಆದ್ದರಿಂದ ನಾನು ಇದನ್ನು ಖಂಡಿತವಾಗಿಯೂ ತಿನ್ನುತ್ತೇನೆ’ ಎಂದು ಹೇಳಿತು. ಆಗ ಸಾಮ್ರಾಟ ದಿಲೀಪನು ‘ವನರಾಜ, ಒಂದು ವೇಳೆ ನಾನು ನಿನಗೆ ಹಸುವನ್ನು ತಿನ್ನಲು ಕೊಟ್ಟರೆ, ರಘುವಂಶದ ಕೀರ್ತಿ ಕಳಂಕಿತಗೊಳ್ಳುತ್ತದೆ. ಗೋರಕ್ಷೆಯೇ ನನ್ನ ಜೀವನದ ಕಾರ್ಯವಾಗಿದೆ. ಇದೇ ನನ್ನ ಧರ್ಮವಾಗಿದೆ. ಅಪಕೀರ್ತಿ ಹೊಂದಿದ ಈ ದೇಹದೊಂದಿಗೆ ಹಿಂತಿರುಗುವುದಕ್ಕಿಂತ ನಾನು ನನ್ನ ದೇಹವನ್ನು ನಿನಗೆ ಸಮರ್ಪಿಸುತ್ತೇನೆ. ಇಂದು ನೀನು ನನ್ನನ್ನು ನಿನ್ನ ಭೋಜನವನ್ನಾಗಿ ಸ್ವೀಕರಿಸು. ನಾನು ನನ್ನ ಶರೀರವನ್ನು ನಿನ್ನ ಭೋಜನಕ್ಕೆ ಒಪ್ಪಿಸುತ್ತೇನೆ’ ಎಂದು ಹೇಳಿ ಸಾಮ್ರಾಟನು ಸಿಂಹದ ಎದುರಿಗೆ ಹೋಗಿ ನಿಂತುಕೊಂಡನು.

ಸಾಮ್ರಾಟನು ಮುಂದುವರಿದು ಆ ಸಿಂಹಕ್ಕೆ ‘ಸಿಂಹರಾಜಾ, ನನಗೆ ನಿನ್ನ ಮೇಲೆ ಕರುಣೆ ಬರುತ್ತಿದೆ, ಕ್ಷುದ್ರ ಗೋವಿಗಾಗಿ ಈ ಸಾಮ್ರಾಟನು ತನ್ನ ದೇಹವನ್ನು ನೀಡುತ್ತಿದ್ದಾನೆ. ಅವನು ಎಷ್ಟು ಮೂರ್ಖನಿದ್ದಾನೆ ಎಂದು. ನೀನು ವಿಚಾರ ಮಾಡುತ್ತಿರಬಹುದ ನನ್ನ ಶರೀರ ಹಾಗೂ ಜೀವನದ ಮೇಲೆ ನಿನಗೆ ದಯೆ ಬರುತ್ತಿರಬಹುದು. ಆದರೆ ಒಂದು ವೇಳೆ ನನ್ನ ಕಣ್ಣೆದುರಿಗೆ ನಂದಿನಿಯ ಹತ್ಯೆಯಾದರೆ, ನನ್ನ ರಘುವಂಶದ ಕೀರ್ತಿ ಕಳಂಕಿತಗೊಳ್ಳುವುದು. ನನ್ನ ಮೇಲೆ ದಯೆ ಮಾಡಲು ಇಚ್ಛಿಸಿದ್ದರೆ, ನನ್ನ ಶರೀರವನ್ನು ತಿಂದು ನಂದಿನಿಯನ್ನು ಮುಕ್ತಗೊಳಿಸು. ಇದರಿಂದ ನನ್ನ ಜಯಗಳಿಸಿದ ಶರೀರವು ಚಿರಂತನವಾಗುವುದು’ ಎಂದು ಹೇಳಿದನು.

ರಘುವಂಶದ ಶ್ರೇಷ್ಠ ಸಾಮ್ರಾಟ ದಿಲೀಪನು, ಹಸುವಿನ ರಕ್ಷಣೆಗಾಗಿ ಯೌವನದಿಂದ ತುಂಬಿದ್ದ ತನ್ನ ಶರೀರದ ಆಹುತಿಯನ್ನು ನೀಡಲು ಮುಂದಾಗಿದ್ದನು. ಸಿಂಹವು ಸಾಮ್ರಾಟನ ಈ ಮಾತುಗಳನ್ನು ಕೇಳಿ ಅರಣ್ಯಕ್ಕೆ ಮರಳಿ ಹೊರಟು ಹೋಯಿತು.

ಕೃಪೆ: ಹಿಂದೂ ಜಾಗೃತಿ ಸಮಿತಿ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಕಾಂಗ್ರೆಸ್ಸಿನವರಿಗೆ ಹಿಂದೂಗಳು ಕಾಣುತ್ತಿಲ್ಲ; ಇದು ದೇಶದ ದುರ್ದೈವ – ಬಿವೈ ವಿಜಯೇಂದ್ರ

ಕಾಂಗ್ರೆಸ್ಸಿನವರಿಗೆ ಹಿಂದೂಗಳು ಕಾಣುತ್ತಿಲ್ಲ; ಇದು ದೇಶದ ದುರ್ದೈವ – ಬಿವೈ ವಿಜಯೇಂದ್ರ

ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿದ್ದರಾಮಯ್ಯನವರು, ಪ್ರಿಯಾಂಕ್ ಖರ್ಗೆ ಅವರು ಹೊಣೆಯರಿತು ಮಾತನಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra)

[ccc_my_favorite_select_button post_id="105724"]
ಉಗ್ರರ ದಾಳಿ: ನಾವು ಹೆದರುವುದಿಲ್ಲ, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತೇವೆ; ನಿಖಿಲ್ ಕುಮಾರಸ್ವಾಮಿ

ಉಗ್ರರ ದಾಳಿ: ನಾವು ಹೆದರುವುದಿಲ್ಲ, ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳುತ್ತೇವೆ; ನಿಖಿಲ್ ಕುಮಾರಸ್ವಾಮಿ

ಪೈಶಾಚಿಕ ಭಯೋತ್ಪಾದಕ ದಾಳಿಯು ಕಣಿವೆ ರಾಜ್ಯದಲ್ಲಿ ಇನ್ನೂ ಅಡಗಿರುವ ಕ್ರೂರತ್ವದ ನೆರಳಿನ ಮತ್ತು ದ್ವೇಷದ ಹೇಯ ದುಃಸ್ವಪ್ನವಾಗಿದೆ: Nikhil Kumaraswamy

[ccc_my_favorite_select_button post_id="105717"]
ಜಾತಿ-ಧರ್ಮದ ಬಣ್ಣ ಹಚ್ಚದೆ, ಉಗ್ರರನ್ನು ಮಟ್ಟ ಹಾಕಿ; ನಿರ್ಮಲಾನಂದನಾಥ ಸ್ವಾಮೀಜಿ

ಜಾತಿ-ಧರ್ಮದ ಬಣ್ಣ ಹಚ್ಚದೆ, ಉಗ್ರರನ್ನು ಮಟ್ಟ ಹಾಕಿ; ನಿರ್ಮಲಾನಂದನಾಥ ಸ್ವಾಮೀಜಿ

ಆದಿಚುಂಚನಗಿರಿ ಮಠದ ಪೀಠಾಧಿಕಾರಿ ನಿರ್ಮಲಾನಂದನಾಥ ಸ್ವಾಮೀಜಿ (Nirmalanandanath Swamiji), 'ಉಗ್ರರಿಗೆ ಜಾತಿ ಮತ್ತು ಧರ್ಮದ ಬಣ್ಣ ಹಚ್ಚದೇ ಉಗ್ರರನ್ನು ಮಟ್ಟ ಹಾಕಿ'.

[ccc_my_favorite_select_button post_id="105711"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಆರ್‌ಸಿಬಿ ತವರಲ್ಲಿಂದು ಪಂಜಾಬ್ ಸವಾಲು..!: ಮಳೆ ಆತಂಕ

ಆರ್‌ಸಿಬಿ ತವರಲ್ಲಿಂದು ಪಂಜಾಬ್ ಸವಾಲು..!: ಮಳೆ ಆತಂಕ

ಬೆಂಗಳೂರು (Harithalekhani): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಅತಿಥೇಯ ರಾಯಲ್ ಚಾಲೆಂಜರ್ ಬೆಂಗಳೂರು (RCB) ತಂಡವು ಪಂಜಾಬ್ ಕಿಂಗ್ ತಂಡವನ್ನು ಎದುರಿಸಲಿದೆ. ತಾನು ಆಡಿದ ಒಟ್ಟು 6 ಪಂದ್ಯಗಳ ಪೈಕಿ ಆರ್‌ಸಿಬಿ

[ccc_my_favorite_select_button post_id="105462"]
ಕ್ವಾರಿ ವಿರುದ್ಧ ಗ್ರಾಮಸ್ಥರ ಧರಣಿ ವೇಳೆ ಮಾಲೀಕನಿಂದ ಶೂಟೌಟ್

ಕ್ವಾರಿ ವಿರುದ್ಧ ಗ್ರಾಮಸ್ಥರ ಧರಣಿ ವೇಳೆ ಮಾಲೀಕನಿಂದ ಶೂಟೌಟ್

ಚಿಕ್ಕಬಳ್ಳಾಪುರ: ಕಲ್ಲು ಕ್ವಾರಿ ಮತ್ತು ಸರ್ಕಾರಿ ಜಾಗದಲ್ಲಿ ರಸ್ತೆ ನಿರ್ಮಾಣಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಕಲ್ಲು ತೂರಾಟ ನಡೆಸಿದ್ದರಿಂದ ಕುಪಿತನಾದ ಕಲ್ಲು ಕ್ವಾರಿ ಮಾಲೀಕ ಸಕಲೇಶಕುಮಾ‌ರ್ ಎಂಬುವರು ಗುಂಡು ಹಾರಿಸಿದ್ದು, ಚಿಕನ್ ರವಿ ಎಂಬುವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ,

[ccc_my_favorite_select_button post_id="105705"]
ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ಸಂಭವಿಸಿದ ಸರಣಿ ಅಪಘಾತಗಳು ಆತಂಕಕ್ಕೆ ಕಾರಣವಾಗಿದೆ. harithalekhani

[ccc_my_favorite_select_button post_id="105576"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!