ಬೆಂ.ಗ್ರಾ.ಜಿಲ್ಲೆ: ಕೋವಿಡ್ ಸೋಂಕು ಜಿಲ್ಲೆಯಲ್ಲಿ ತೀವ್ರವಾಗುತ್ತಿದ್ದು, ಇಂದು 418 ಮಂದಿಗೆ ಸೋಂಕು ದೃಢಪಟ್ಟಿದ್ದರೆ, ಚಿಕಿತ್ಸೆ ಫಲಕಾರಿಯಾಗದೆ ಮೂವರು ಸಾವನಪ್ಪಿದ್ದಾರೆ.
ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಜ.14ರ ಬುಲೆಟಿನ್ ಅನ್ವಯ ಇಂದು ಹೊಸದಾಗಿ 418 ಕರೊನಾ ಪ್ರಕರಣಗಳು ವರದಿಯಾಗಿದೆ. ಅಲ್ಲದೆ ಕೋವಿಡ್ ಸೋಂಕಿನಿಂದ 45 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಮೂರನೇ ಅಲೆಯ ಆತಂಕದ ನಡುವೆ ಮೂವರು ಸಾವನಪ್ಪಿದ್ದಾರೆ.
ವರದಿಯನ್ವಯ ಹೊಸಕೋಟೆ ತಾಲೂಕಿನ 35 ಪುರುಷರು, 24 ಮಹಿಳೆಯರು ಸೇರಿ 159.
ದೇವನಹಳ್ಳಿ ತಾಲೂಕಿನ 48 ಪುರುಷರು, 38 ಮಹಿಳೆಯರು ಸೇರಿ 86.
ದೊಡ್ಡಬಳ್ಳಾಪುರ ತಾಲೂಕಿನ 118 ಪುರುಷರು, 68 ಮಹಿಳೆಯರು ಸೇರಿ 186. ಹಾಗೂ ನೆಲಮಂಗಲ ತಾಲೂಕಿನ 52 ಪುರುಷರು, 35 ಮಹಿಳೆಯರು ಸೇರಿ 87 ಮತ್ತು ಒಟ್ಟು 418 ಜನರಿಗೆ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1601ಕ್ಕೆ ಏರಿಕೆಯಾಗಿದೆ. ಅಲ್ಲದೆ 1839 ಮಂದಿಯನ್ನು ಕಡ್ಡಾಯ ಗೃಹ ಬಂಧನದಲ್ಲಿ ಇಡಲಾಗಿದೆ.
ಇಂದಿನ ವರದಿಯ ಪ್ರಕಾರ 4898 ಮಂದಿಯ ಫಲಿತಾಂಶ ಬಾಕಿ ಉಳಿದಿದೆ.
ಮೃತರ ವರದಿ: ನೆಲಮಂಗಲ ತಾಲೂಕಿನ 65 ವರ್ಷದ ವೃದ್ಧೆ, ದೇವನಹಳ್ಳಿ ತಾಲೂಕಿನ 85 ವರ್ಷದ ವೃದ್ಧ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ 54 ವರ್ಷದ ಪುರುಷ ಸಾವನಪ್ಪಿದ್ದಾರೆ ಎನ್ನಲಾಗಿದೆ
(ಆತಂಕ ಬೇಡಾ, ಮುಂಜಾಗ್ರತೆ ಇರಲಿ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….