ಮೇಷ: ನಿಧಾನಗತಿಯ ವ್ಯವಹಾರ. ಆರೋಗ್ಯದಲ್ಲಿ ವ್ಯತ್ಯಾಸ, ಕೆಲಸದಲ್ಲಿ ಮಾನಸಿಕ ಹಿಂಸೆ, ಹಿರಿಯರ ಸಲಹೆ ಪಡೆಯಿರಿ, ಸುಬ್ರಹ್ಮಣ್ಯ ಕವಚ ಪಠಿಸಿ.
ವೃಷಭ: ದಾಂಪತ್ಯದಲ್ಲಿ ವ್ಯತ್ಯಾಸ, ವ್ಯಾಪಾರಿಗಳಿಗೆ ತೊಂದರೆ, ಅಸಮಾಧಾನದ ದಿನ, ಶನಿ-ಚಂದ್ರರ ಪ್ರಾರ್ಥನೆ ಮಾಡಿ.
ಮಿಥುನ: ಆರೋಗ್ಯದ ಕಡೆ ಗಮನವಿರಲಿ. ಸಾಲ ಮಾಡಬೇಡಿ, ಶತ್ರುಗಳ ಬಾಧೆ ಕೊಂಚ ಕಾಡಲಿದೆ. ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ.
ಕಟಕ: ಮನಸ್ಸಿಗೆ ಬೇಸರ, ವ್ಯಾಪಾರಿಗಳಿಗೆ ಕೊಂಚ ತೊಡಕು, ಅಜೀರ್ಣ ಸಮಸ್ಯೆ, ಹಣ ಕೂಡಿಡುವುದರಲ್ಲಿ ಈ ರಾಶಿಯವರು ನಿಪುಣರು.
ಸಿಂಹ: ಆಕಸ್ಮಿಕ ಅದೃಷ್ಟ, ಧನಲಾಭ, ಕಾರ್ಯಸಿದ್ದಿ, ಹಳೆಬಾಕಿ ವಸೂಲಿ. ಆರೋಗ್ಯದಲ್ಲಿ ಉತ್ತಮ.
ಕನ್ಯಾ: ಆತಂಕ ಬೇಡ, ಅಂಜಿಕೆ ಇರಲಿದೆ, ಭಯದ ವಾತಾವರಣ ಮೂಡಲಿದೆ, ಮಿಶ್ರಫಲ, ನವಗ್ರಹ ಸ್ತೋತ್ರ ಪಠಿಸಿ.
ತುಲಾ: ಹಣದ ವಿಚಾರವಾಗಿ ಜಾಗ್ರತೆ ಬೇಕು, ಅನುಕೂಲವೂ ಇದೆ. ಮಿಶ್ರಫಲ, ಪಿತೃ ದೇವತೆಗಳ ಪ್ರಾರ್ಥನೆ ಮಾಡಿ.
ವೃಶ್ಚಿಕ: ಗುರುಗ್ರಹ ಅನುಗ್ರಹದಿಂದ ಕಾರ್ಯ ಸಿದ್ಧಿ, ಭಾಗ್ಯೋದಯವಾಗಲಿದೆ. ಈಶ್ವರನಿಗೆ ಬಿಲ್ವಪತ್ರೆ ಸಮರ್ಪಿಸಿ.
ಧನಸ್ಸು: ಸ್ತ್ರೀಯರು ಸಂಕೋಚ ಘಟನೆಗಳಿಗೆ ಸಾಕ್ಷಿಯಾಗುತ್ತೀರಿ, ಪ್ರಯಾಣದಲ್ಲಿ ಎಚ್ಚರಿಕೆ ಬೇಕು, ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ್ಯ ಬೆಳೆಸಿಕೊಳ್ಳಿ.
ಮಕರ: ದೇವಾಲಯಗಳ ಯಾತ್ರೆ ಹೆಚ್ಚಾಗಲಿದೆ. ಅಂದುಕೊಂಡ ಕೆಲಸಗಳು ನಿಗದಿತ ಸಮಯದಲ್ಲಿ ಮುಕ್ತಾಯವಾಗಲಿವೆ.
ಕುಂಭ: ಪಕ್ಕದ ಮನೆಯವರ ಕಷ್ಟಕ್ಕೆ ನೆರವಾಗುವಿರಿ. ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ. ಕೃಷಿಕರಿಗೆ ತೊಡಕು, ಪ್ರಯಾಣದಲ್ಲಿ ತೊಡಕು, ಸಂಗಾತಿಯಿಂದ ಸಹಕಾರ, ದುಂ ದುರ್ಗಾಯೈ ನಮ: ಪಠಿಸಿ.
ಮೀನ: ವೃತ್ತಿಯಲ್ಲಿ ಆಮೆಗತಿಯ ವೇಗ ಬೇಡ. ಗುರಿ ನಿಗದಿ ಮಾಡಿಕೊಂಡು ಮುಂದೆ ಸಾಗಿ. ಸ್ತ್ರೀಯರಿಗೆ ಶುಭಫಲ, ಪ್ರಶಾಂತತೆ ಇರಲಿದೆ. ಸಹೋದರರಿಂದ ಸಹಕಾರ, ಮಕ್ಕಳಿಂದ ಕಿರಿಕಿರಿ, ಮಹಾಲಕ್ಷ್ಮೀ ಅಮ್ಮನವರಿಗೆ ಕ್ಷೀರಾಭಿಷೇಕ ಮಾಡಿಸಿ.
ತಿಥಿ: ದ್ವಿತೀಯ
ನಕ್ಷತ್ರ: ಉತ್ತರಾಷಾಡ
ರಾಹುಕಾಲ: 03:20 ರಿಂದ 04:46
ಗುಳಿಕಕಾಲ: 12:28 ರಿಂದ 01:54
ಯಮಗಂಡಕಾಲ: 09:36 ರಿಂದ 11:02
ಹೆಚ್ಚಿನ ಮಾಹಿತಿಗೆ: ವಿದ್ವಾನ್ ಎಸ್. ನವೀನ್ M.A., ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್ (ರಿ ), ದೊಡ್ಡಬಳ್ಳಾಪುರ ತಾಲ್ಲೂಕು. ಮತ್ತು ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ ಪುರಸ್ಕೃತರು. ಮೊ:9620445122
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….