Site icon ಹರಿತಲೇಖನಿ

ಬೆಳೆ ಹಾನಿ: ಬೆಂ.ಗ್ರಾ.ಜಿಲ್ಲೆ ರೈತರು ವಿಮಾ ಸಂಸ್ಥೆ ಸಂಪರ್ಕಿಸಿ

Channel Gowda
Hukukudi trust

ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ / ಚಂಡಮಾರುತ / ಚಂಡಮಾರುತ ಸಹಿತ ಮಳೆ / ಅಕಾಲಿಕ ಮಳೆಯಿಂದಾಗಿ ಬೆಳೆ ವಿಮೆಯಡಿ ನೊಂದಾಯಿಸಲಾದ ದ್ರಾಕ್ಷಿ, ಮಾವು ಮತ್ತು ಟೊಮ್ಯಾಟೋ ಬೆಳೆಗಳು ನಾಶವಾದರೆ, ಬೆಳೆ ವಿಮೆಗೆ ನೊಂದಾಯಿಸಿದ ರೈತರು ವಿಮಾ ಸಂಸ್ಥೆಯ ಪ್ರತಿನಿಧಿಗಳನ್ನು ಸಂಪರ್ಕಿಸಬಹುದಾಗಿದೆ.

Aravind, BLN Swamy, Lingapura

ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಯಾದ ಟೊಮ್ಯಾಟೋ ಬೆಳೆಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬಜಾಜ್ ಅಲಯಾನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿ ಆಯ್ಕೆಯಾಗಿದ್ದು, ವಿಮಾ ಸಂಸ್ಥೆಯ ಪ್ರತಿನಿಧಿಗಳಾದ ದೇವನಹಳ್ಳಿ ತಾಲ್ಲೂಕಿನಲ್ಲಿ ಕಾಂತಕುಮಾರ್ ಮೊ.ಸಂ.: 9341627547, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಮುನಿನಾರಾಯಣ ಮೊ.ಸಂ.: 9740185030, ಹೊಸಕೋಟೆ ತಾಲ್ಲೂಕಿನಲ್ಲಿ ಶ್ರೀನಿವಾಸಮೂರ್ತಿ ಮೊ.ಸಂ.: 9900450778 ಹಾಗೂ ನೆಲಮಂಗಲ ತಾಲ್ಲೂಕಿನಲ್ಲಿ ಕುಮಾರಸ್ವಾಮಿ.ಜಿ., ಮೊ.ಸಂ.: 8495072375 ರವರನ್ನು ಸಂಪರ್ಕಿಸಬಹುದಾಗಿದೆ.

ದ್ರಾಕ್ಷಿ ಮತ್ತು ಮಾವು ಬೆಳೆಗೆ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಅಗ್ರಿಕಲ್ಚರ್ ಇನ್ಯೂರೆನ್ಸ್ ಕಂಪನಿ ಆಯ್ಕೆಯಾಗಿದ್ದು, ವಿಮಾ ಸಂಸ್ಥೆಯ ಪ್ರತಿನಿಧಿಯಾದ ಪ್ರವೀಣ್ ಕುಮಾರ್ ಮೊ.ಸಂ.: 7847848883 ರವರನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರಾದ(ಜಿಪಂ) ಗುಣವಂತ.ಜೆ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Aravind, BLN Swamy, Lingapura

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……

Exit mobile version