Site icon ಹರಿತಲೇಖನಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 38 ಸಾವಿರ ಕುಟುಂಬಗಳಿಗೆ ವಸತಿ ಭಾಗ್ಯ ಕಲ್ಪಿಸಲು ಧೃಡಸಂಕಲ್ಪ: ಸಚಿವ ಡಾ.ಕೆ.ಸುಧಾಕರ್

Channel Gowda
Hukukudi trust

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಡವರಿಗೆ ಸ್ವಾಭಿಮಾನದಿಂದ ಜೀವನ ನಡೆಸಲು ಮತ್ತು ತಮ್ಮದೆ ಆದ ಮನೆ ನಿರ್ಮಿಸಿಕೊಳ್ಳುವ ಕನಸನ್ನು ನನಸು ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಸುಮಾರು 834 ಎಕರೆ ಸರ್ಕಾರಿ ಜಮೀನು ಗುರುತಿಸಿ ನಿವೇಶನಗಳನ್ನಾಗಿ ಹಂಚಲು ಮೀಸಲಿಡಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Aravind, BLN Swamy, Lingapura

ಪುರ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮವನ್ನು  ಉದ್ಘಾಟನೆ  ಮಾಡಿ  ಮಾತನಾಡಿದ ಅವರು ಜಿಲ್ಲೆಯಲ್ಲಿ ಪ್ರತಿಯೊಬ್ಬ  ವಸತಿ ರಹಿತ ಬಡವರಿಗೆ  ಮನೆ ನಿರ್ಮಿಸಿಕೊಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಆರ್.ಲತಾ ಅವರು ಜಿಲ್ಲೆಯ ಎಲ್ಲಾ ತಹಶೀಲ್ದಾರ್ಗಳು ಮತ್ತು ರಾಜಸ್ವ ನಿರೀಕ್ಷಕರನ್ನು ಬೆನ್ನತ್ತಿ ಸರ್ಕಾರದ ಜಾಗವನ್ನು ಗುರುತಿಸಿ ಅದನ್ನು ನಿವೇಶನಗಳನ್ನಾಗಿ ವಿಂಗಡಿಸಲು ಕ್ರಮ ಕೈಗೊಂಡು ಸುಮಾರು 834 ಎಕರೆ ಜಮೀನು ಮಂಜೂರು ಮಾಡಲಾಗಿದೆ. ನಿವೇಶನ  ಹಂಚಿಕೆ ಕಾರ್ಯ ವಿವಿಧ ಹಂತಗಳಲ್ಲಿ  ಪ್ರಗತಿಯಲ್ಲಿದೆ. ಮುಂದಿನ  ಒಂದು  ವರ್ಷದ  ಒಳಗೆ  ಜಿಲ್ಲೆಯ 38 ಸಾವಿರ ಕುಟುಂಬಗಳಿಗೆ ವಸತಿ ಭಾಗ್ಯ ಯೋಜನೆಯನ್ನು ಪ್ರಥಮ ಆದ್ಯತೆ ಕಲ್ಪಿಸಲಾಗುತ್ತದೆ ಎಂದರು.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸ್ವಾತಂತ್ರ್ಯ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ 750 ಗ್ರಾಮ ಪಂಚಾಯಿತಿಗಳನ್ನು ಅಮೃತ ಗ್ರಾಮ ಪಂಚಾಯಿತಿಗಳನ್ನಾಗಿ ಆಯ್ಕೆ ಮಾಡಿದ್ದಾರೆ ಅದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪುರ ಗ್ರಾಮ ಪಂಚಾಯಿತಿ ಸಹಿತ 18 ಗ್ರಾಮ ಪಂಚಾಯಿತಿಗಳನ್ನು ಅಮೃತ ಗ್ರಾಮ ಪಂಚಾಯಿತಿಗಳನ್ನಾಗಿ ಗುರುತಿಸಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

Aravind, BLN Swamy, Lingapura

ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳ ನೀವೇಶನ, ಪಿಂಚಣಿ, ಸಾಗುವಳಿ, ಪಿಎಂ ಕಿಸಾನ್, ಭಾಗ್ಯಲಕ್ಷ್ಮೀ ಬಾಂಡ್ ಸೇರಿದಂತೆ ಮಂಜೂರಾತಿ ಪತ್ರಗಳು  ಸೇರಿದಂತೆ  ಒಟ್ಟು 2916 ಫನನುಭವಿಗಳಿಗೆ ವಿವಿಧ ರೀತಿಯ ಸೌಲಭ್ಯಗಳನ್ನು  ವಿತರಿಸಲಾಯಿತು. ಅದೇ ರೀತಿಯ ಸುಮಾರು 700 ಜನರಿಗೆ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ವಿಮೆ ಸೌಲಭ್ಯವನ್ನು ಸಹ ಕಲ್ಪಿಸಿ ಕಾರ್ಡ್ಗಳನ್ನು ವಿತರಿಸಿದ ಸಚಿವರು ಜಿಲ್ಲಾಡಳಿತದ  ಕ್ರಿಯಾಶೀಲ  ಕಾರ್ಯವೈಖರಿಯನ್ನು    ಶ್ಲಾಘನೆ  ಮಾಡಿದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ  ಸೌಲಭ್ಯಗಳನ್ನು  ವಿತರಣೆ ಮಾಡಿದ ವಿವರ: 700 ಫಲಾನುಭವಿಗಳಿಗೆ ಎ.ಬಿ.ಆರ್.ಕೆ ಕಾರ್ಡ್ ವಿತರಿಸಲಾಯಿತು. ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 

ಕೋವಿಡ್-19 ಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಪಿ.ಸಿ.ವಿ ವ್ಯಾಕ್ಸಿನ್ ಲಾಂಚ್ ಮಾಡಲಾಯಿತು. 10 ಮಕ್ಕಳಿಗೆ ಉಚಿಕನ್ನಡಕ ವಿತರಿಸಲಾಯಿತು.

ಆರ್.ಕೆ.ವೈ ಐ.ಎಫ್.ಎಸ್: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ  4 ರೈತರಿಗೆ ಕಾರ್ಯಾದೇಶ ವಿತರಣೆ, 122 ಫಲಾನುಭವಿಗಳಿಗೆ  ಪಿಎಂ ಕಿಸಾನ್ ಮಂಜೂರಾತಿ ಆದೇಶ ವಿತರಣೆ. 10  ಫಲಾನುಭವಿಗಳಿಗೆ ಕೃಷಿ ಉಪಕರಣಗಳ ವಿತರಣೆ. 178  ಫಲಾಭವಿಗಳಿಗೆ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಯಡಿಯಲ್ಲಿ ವಿತರಣೆ, 212 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ, 1 ಅಪೌಷ್ಟಿಕ ಮಗುವಿಗೆ ಕಿಟ್ ವಿತರಣೆ, ರೇಷ್ಮೆ ಇಲಾಖೆಯಿಂದ ವಿವಿಧ ಯೋಜನೆಯಡಿಯಲ್ಲಿ 40  ಕರ್ಯಾದೇಶ ವಿತರಣೆ, 6 ಅಂತರ್ ಜಾತಿ ವಿವಾಹಿತ ದಂಪತಿಗಳಿಗೆ ಪ್ರೋತ್ಸಾಹ ಧನ ವಿತರಣೆ

ಸ್ಮಶಾನಕ್ಕೆ ರಸ್ತೆ ಕಾಮಗಾರಿಗೆ ಚಾಲನೆ, ವಸತಿ ನಿವೇಶನಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಚಾಲನೆ, 44 ಫಲಾನುಭವಿಗಳಿಗೆ  ಸಾಗುವಳಿ ಚೀಟಿ ವಿತರಣೆ. 122 ಫಲಾನುಭವಿಗಳಿಗೆ ಪೌವತಿ ಖಾತೆ, ಆರ್.ಟಿ.ಸಿ ಹಾಗೂ ಮ್ಯುಟೇಶನ್ ವಿತರಣೆ , ಪುರ ಗ್ರಾ.ಪಂ ಗೆ ಆಶ್ರಯ ವಸತಿ ಯೋಜನೆಯಡಿಯಲ್ಲಿ ನೀಡಿರುವ ಒಟ್ಟು ಜಮೀನು-81-29 ಎಕರೆ.

ಮಂಚೇನಹಳ್ಳಿ ಪಂಚಾಯ್ತಿ ಮಂಚೇನಹಳ್ಳಿ ಸ ನಂ 88 ರಲ್ಲಿ 10-00 ಎಕರೆ, ಮಂಚೇನಹಳ್ಳಿ ಸ ನಂ 88 ರಲ್ಲಿ 01-20 ಎಕರೆ, ಮಿಣತಿನಗುರ್ಕಿ ಪಂಚಾಯ್ತಿ ಮೀಣತಿನಗುರ್ಕಿ ಸ.ನಂ 229 ರಲ್ಲಿ 6-00 ಎಕರೆ, ಶ್ಯಾಂಪುರ ಪಂಚಾಯ್ತಿ. ಶ್ಯಾಂಪುರ ಸ ನಂ 162 ರಲ್ಲಿ 7-00 ಎಕರೆ, ಗುಯ್ಯಲಹಳ್ಳಿ ಸ ನಂ 119 ರಲ್ಲಿ 1-00 ಎಕರೆ,  ಗುಯ್ಯಲಹಳ್ಳಿ ಸ ನಂ 111 ರಲ್ಲಿ 6-00 ಎಕರೆ, ಗೌಡಗೆರೆ ಪಂಚಾಯ್ತಿ ಗಿಡಗಾನಹಳ್ಳಿ ಸ ನಂ 26 ರಲ್ಲಿ 1-20 ಎಕರೆ,  ಚಿನ್ನನಾಗೇನಹಳ್ಳಿ ಸ ನಂ 71 ರಲ್ಲಿ 0-34 ಎಕರೆ, ವರವಣಿ ಸ ನಂ 230 ರಲ್ಲಿ 19-00 ಎಕರೆ, ಹಳೆಹಳ್ಳಿ ಪಂಚಾಯ್ತಿ ಹಳೇಹಳ್ಳಿ ಸ ನಂ 204/2 ರಲ್ಲಿ 03-00 ಎಕರೆ,  ಚೀಲೇನಹಳ್ಳಿ ಸ ನಂ 14 ರಲ್ಲಿ 02-35 ಎಕರೆ, ನೇರ್ಲಹಳ್ಳಿ ಸ ನಂ 20 ರಲ್ಲಿ 05-00 ಎಕರೆ, ಪುರ ಸ ನಂ 162 ರಲ್ಲಿ 08-20 ಎಕರೆ, ಬೀರಮಂಗಲ ಸ ನಂ 19 ರಲ್ಲಿ 01-00 ಎಕರೆ, ಪುರ ಪಂಚಾಯ್ತಿ  ಅರಸಾಲಬಂಡೆ ಸ ನಂ 63 ರಲ್ಲಿ 01+00 ಎಕರೆ, ಜರಬಂಡಹಳ್ಳಿ ಸ ನಂ 52 ರಲ್ಲಿ 06-00 ಎಕರೆ.ಸಾಮಾಜಿಕ ಭದ್ರತೆ ಯೋಜನೆಯಡಿಯಲ್ಲಿ ಮಂಜೂರು ಮಾಡಿದ ಒಟ್ಟು ಮಸಾಶನಗಳ ಸಂಖ್ಯೆ – 122, ಅಂತ್ಯ ಸಂಸ್ಕಾರ ಯೋಜನೆಯ ಫಲಾನುಭವಿಗಳ ಸಂಖ್ಯೆ- 62, ರಾಷ್ಟ್ರೀಯ ಕುಟುಂಬ ಯೋಜನೆಯಡಿಯಲ್ಲಿ ಮಂಜೂರು ಮಾಡಿದ ಸಂಖ್ಯೆ-15, ವಿವಿಧ ಇಲಾಖೆಗಳಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ” ಕಾರ್ಯಕ್ರಮದಡಿ ಸೌಲಭ್ಯ ಪಡೆಯುವ ಒಟ್ಟು ಫಲಾನುಭವಿಗಳ ಸಂಖ್ಯೆ-2916.

ಇನ್ನೂ ಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಲವಾರು ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸೇರಿದಂತೆ ಹಲವಾರು ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಇಲಾಖೆಗಳು ಮಾಹಿತಿ ಕೇಂದ್ರಗಳನ್ನು ಮತ್ತು ಮಳಿಗೆಗಳನ್ನು ತೆರೆದು  ಸರ್ಕಾರಿ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಿದರು.

ಜಿಲ್ಲಾಧಿಕಾರಿ  ಆರ್.ಲತಾ ಕಾರ್ಯಕ್ರಮದ ಪ್ರಸ್ತಾವಿಕ ಭಾಷಣ ಮಾಡಿ ಸರ್ಕಾರದ  ಯೋಜನೆಗಳ  ಬಗ್ಗೆ ಅರಿವು ಮೂಡಿಸಿದರು.   ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರಮವನ್ನು  ಸದುಪಯೋಗ  ಪಡಿಸಿಕೊಳ್ಳಲು  ಸಾರ್ವಜನಿಕರಲ್ಲಿ  ಮನವಿ  ಮಾಡಿದರು.  

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಅರಣ್ಯಾಧಿಕಾರಿ ಅರಸಲನ್, ಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ವಿರುಪಾಕ್ಷಗೌಡ, ಉಪಾಧ್ಯಕ್ಷರಾದ ಮಾಲಾಶ್ರೀ,  ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯರಾದ ಟಿ.ಎನ್. ಜಗನ್ನಾಥ್, ಕೆ.ಎಂ.ಎಫ್ ನಿರ್ದೇಶಕರಾದ ಸುಬ್ಬಾರೆಡ್ಡಿ, ಗೌರಿಬಿದನೂರು ತಾಲ್ಲೂಕಿನ ತಹಶೀಲ್ದಾರ್ ಶ್ರೀನಿವಾಸ, ಕಂದಾಯ ಇಲಾಖೆ ಅಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರುಗಳು, ಜನ ಪ್ರತಿನಿಧಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ……

Exit mobile version