ತಾಳ್ಮೆ ಪರೀಕ್ಷೆಗೂ ಗೊರವನಹಳ್ಳಿ ರಸ್ತೆಗೆ ಬರಬೇಡಿ / ಜನ ಹಿತ ಮರೆತವರ ಮುಂದೆ ಎಷ್ಟೆಂದು ಕಿಂದರಿ ಬಾರಿಸೋದು..?

ದೊಡ್ಡಬಳ್ಳಾಪುರ: ರಾಜ್ಯದಲ್ಲಿನ ಪ್ರವಾಸಿ ಕ್ಷೇತ್ರಗಳ ಅಭಿವೃದ್ದಿಗೊಳಿಸಲು ಪ್ರವಾಸೋದ್ಯಮ ಇಲಾಖೆ ಮೂಲಕ ಸರಕಾರಗಳು ಕೊಟ್ಯಾಂತರ ರೂ ಅನುದಾನವನ್ನು ನೀಡಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ನಾನಾ ಕಸರತ್ತುಗಳನ್ನು ಮಾಡುತ್ತವೆ.ಆದರೆ  ದೊಡ್ಡಬಳ್ಳಾಪುರದಿಂದ ಹೊಸಹಳ್ಳಿ ಮೂಲಕ ಸಾಗುವ ಗೋರವನಹಳ್ಳಿ ಮುಖ್ಯರಸ್ತೆ. ಜನಪ್ರತಿನಿದಿಗಳು ಹಾಗೂ ಅಧಿಕಾರಿಗಳಕಡೆಗಣನೆ ಇಂದಾಗಿ ಪ್ರಮುಖ ಪ್ರವಾಸಿ ತಾಣಗಳಾದ ನಂದಿ ಬೆಟ್ಟ,ಎಸ್.ಎಸ್.ಘಾಟಿ, ಗೊರವನಹಳ್ಳಿ ಲಕ್ಷ್ಮೀದೇವಾಲಯ ಸಂಪರ್ಕಿಸುವ ರಸ್ತೆ ಅವ್ಯವಸ್ಥೆಯಿಂದಾಗಿ ಪ್ರವಾಸಿಗರನ್ನು ಸೆಳೆಯಲು ವಿಫಲವಾಗುತ್ತಿರುವ ಜೊತೆಗೆ ಈ ವ್ಯಾಪ್ತಿಯ ಗ್ರಾಮಗಳಿಗೆ ತೆರಳುವುದು ಸುಮಾರು ವರ್ಷಗಳಿಂದ ನರಕ ದರ್ಶನವಾಗುತ್ತಿದೆ.

ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಮಾರ್ಗವಾಗಿ ಗೊರವನಹಳ್ಳಿ ತೆರಳುವ 14.5ಕಿಮಿ ರಸ್ತೆ ಹದಗೆಟ್ಟು ಸುಮಾರು 30ಕ್ಕು ಹೆಚ್ಚು ವರ್ಷಗಳಾಗಿವೆ.

ದೊಡ್ಡಬಳ್ಳಾಪುರದ ಸನಿಹದಲ್ಲಿರುವ ಶ್ರೀ ಘಾಟಿಸುಭ್ರಮಣ್ಯ ದೇವಾಲಯ, ನಂದಿಬೆಟ್ಟದ ಭೇಟಿಗೆ ಬರುವ ಪ್ರವಾಸಿಗರಿಗೆ ಪಕ್ಕದ ತಾಲೂಕಿನ ಕೊರಟಗೆರೆಗೆ ಸೇರಿರುವ ಶ್ರೀ ಕ್ಷೇತ್ರವಾದ ಗೋರವನಹಳ್ಳಿ ತೆರಳಲು ಅತಿ ಸನಿಹದ ರಸ್ತೆಯಾದ ಕಾರಣ ಹಲವಾರು ವರುಷಗಳ ಕಾಲ ಪ್ರವಾಸಿಗರು ರಸ್ತೆಯನ್ನು ಬಳಸುತಿದ್ದರು ಅಲ್ಲದೆ ಬೆಂಗಳೂರಿನಿಂದ ಗೊರವನಹಳ್ಳಿಗೆ ಈ ಮಾರ್ಗ ಅತಿ ಕಡಿಮೆ ಅಂತರವಾದ ಕಾರಣ ಪ್ರತಿ ಶುಕ್ರವಾರ,ಮಂಗಳವಾರ ಹಾಗೂ ಭಾನುವಾರಗಳಂದು ವಾಹನಗಳ ಸಂಚಾರ ಹೆಚ್ಚಾಗಿ ಈ ರಸ್ತೆಯ ವ್ಯಾಪ್ತಿಯ ಗ್ರಾಮಗಳಿಗೆ ಆರ್ಥಿಕವಾಗಿ ಅನುಕೂಲಕರವಾಗಿತ್ತು.ಆದರೆ,ಈ ರಸ್ತೆಯ ನಿರ್ವಹಣೆ ಕೊರತೆಯಿಂದ ಹಳ್ಳಕೊಳ್ಳಗಳಂತಹ ಗುಂಡಿಗಳಿಗೆ ಹೆದರುವ ಪ್ರವಾಸಿಗರು ದೊಡ್ಡಬಳ್ಳಾಪುರದಿಂದ ದಾಬಸ್‌ಪೇಟೆ ಮೂಲಕ ಸುತ್ತಿ ಬಳಸಿ ಗೋರವನಹಳ್ಳಿ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಶೋಚನೀಯ.

ಹೊಸಹಳ್ಳಿ ಗ್ರಾಮದ ನಂತರ ಪ್ರಾರಂಭವಾಗುವ ಗುಂಡಿ ಬಿದ್ದಿರುವ ರಸ್ತೆಯು ಕೊರಟಗೆರೆ ಗಡಿಯವರೆವಿಗೂ ಸುಮಾರು 14.5ಕಿಮಿ ದೂರದವರೆಗೆ ಸಂಚರಿಸಲು ಅಸಾಧ್ಯವಾದ ರಸ್ತೆಯದಾಗಿದೆ.ಈ ವ್ಯಾಪ್ತಿಯಲ್ಲಿನ ಜಕ್ಕೇನಹಳ್ಳಿ,ಕಲ್ಲುಕುಂಟೆ,ಕಾಮೇನಹಳ್ಳಿ,ಪಚ್ಚಾರಲಹಳ್ಳಿ, ಲಿಂಗವೀರನಹಳ್ಳಿ, ಮರಿಮಾಕನಹಳ್ಳಿ,ದೊಡ್ಡನರಸಯ್ಯನಪಾಳ್ಯ,ಗುಟ್ಟಹಳ್ಳಿ,ಚಿಕ್ಕನರಸಯ್ಯನಪಾಳ್ಯ,ವೀರದಿಪ್ಪಯ್ಯನಪಾಳ್ಯ, ಕಿಲ್ಲಾರಲಹಳ್ಳಿ, ದಡಿಗಟ್ಟಮಡಗು,ಗೌಡನಕುಂಟೆ,ತಾಂಡ ಗ್ರಾಮಗಳು ಸೇರಿದಂತೆ ಸುಮಾರು ಇಪ್ಪತ್ತಕ್ಕು ಹೆಚ್ಚು ಗ್ರಾಮಗಳಿಗೆ ಈ ರಸ್ತೆಯ ಮುಖ್ಯರಸ್ತೆಯಾಗಿರುವ ಕಾರಣ ಸುಮಾರು ನಾಲ್ಕು ಸಾವಿರಕ್ಕು ಹೆಚ್ಚು ಜನಸಂಖ್ಯೆ ಈ ರಸ್ತೆಯ ಅವ್ಯವಸ್ಥೆಯಿಂದ ಪರಿತಪ್ಪಿಸುತಿರುವುದು ಯಾವೊಬ್ಬ ಜನಪ್ರತಿನಿದಿಯ ಗಮನಕ್ಕೆ ಬಾರದಿರುವುದು ವಿಪರ್ಯಾಸ.

ನಿರ್ವಹಣೆ ಕೊರತೆಯಿಂದ ರಸ್ತೆ ಹಾಳು

2006ರಲ್ಲಿ ನಬಾರ್ಡ್ ಯೋಜನೆಯಡಿಯಲ್ಲಿ ಡಾಂಬರೀಕರಣವಾದ ನಂತರ ಸೂಕ್ತವಾದ ನಿರ್ವಹಣೆ ಮಾಡುವಲ್ಲಿ ಬೇಜವಬ್ದಾರಿ ತೋರಿದ ಅಧಿಕಾರಿಗಳು ದೊಡ್ಡಬಳ್ಳಾಪುರ ರಸ್ತೆಗಳ ಮುಖಪುಟದಲ್ಲಿ ಈ ರಸ್ತೆಯನ್ನು ಸಂಪೂರ್ಣವಾಗಿ ಮರೆತಿರುವಂತೆ ರಸ್ತೆ ಸಂಪೂರ್ಣ ಗುಂಡಿಮಯವಾಗಿ ಹಾಳುಬಿದ್ದಿದೆ.

ರಸ್ತೆಯಲ್ಲಿರುವ ಮೋರಿಗಳು ಕುಸಿದು ವರ್ಷಗಳೇ ಕಳೆದಿದ್ದು ದಿನ ನಿತ್ಯ ಒಂದಲ್ಲಾ ಒಂದು ವಾಹನ ಅಪಘಾತಕ್ಕೀಡಾಗಿ ಪ್ರಯಾಣಿಕರ ಪ್ರಾಣಹರಣಕ್ಕೆ ಕಾರಣವಾಗುತ್ತಿದೆ ಆದರೂ ಅಧಿಕಾರಿಗಳು ಹಾಗೂ ಜನಪ್ರತಿನಿದಿಗಳಿಗೆ ಜಿಪಂ ಅನುಧಾನ ಈ ರಸ್ತೆಗೆ ಸಾಕಾಗುತ್ತಿಲ್ಲ ಎಂದು ನುಣಿಚಿಕೊಳ್ಳುತ್ತಾರೆಯೇ ಹೊರತು ಕಾಳಜಿವಹಿಸಿ ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಸೇರಿಸುವ ಮೂಲಕ ಉತ್ತಮ ರಸ್ತೆ ಕಾಮಗಾರಿ ನಡೆಸಬೇಕೆಂಬ ಕನಿಷ್ಟ ಪ್ರಜ್ಞೆಯು ಇಲ್ಲವಾಗಿದೆ.

ಇದೇ ಪಾಳು ಬಿದ್ದ ರಸ್ತೆಯಲ್ಲಿ ಸಾಗುವ ಘಟಾನುಘಟಿ ಜನ ಪ್ರತಿನಿಧಿಗಳು..!

ಇನ್ನು ಈ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಯಾವುದೇ ಅಧಿಕಾರವಿಲ್ಲದ ಸಾಮಾನ್ಯ ಜನ ಪ್ರತಿನಿಧಿಗಳು ಇದ್ದಾರೆನ್ನುವಂತೆಯೂ ಇಲ್ಲ.ಜಿಲ್ಲಾಪಂಚಾಯಿತಿ ಅಧ್ಯಕ್ಷೆಯಿಂದ ಹಿಡಿದು ತಾಪಂ ಉಪಾಧ್ಯಕ್ಷೆ, ಎಪಿಎಂಸಿ ಅಧ್ಯಕ್ಷ, ಮೂರ್ ನಾಕು ಜನ ತಾಪಂ, ಮಾಜಿ ಅಧ್ಯಕ್ಷರು,ಪ್ರಭಾವಿ ವಿರೋಧ ಪಕ್ಷದ ನಾಯಕರುಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರಾದರೂ ಅವರುಗಳಿಗೆ ಈ ರಸ್ತೆಗೆ ಸೂಕ್ತ ಕಾಯಕಲ್ಪ ದೊರಕಿಸಬೇಕೆಂಬ ಕಾಳಜಿಯೇ ಇಲ್ಲವಾಗಿದೆ ಎಂಬುದು ಈ ವ್ಯಾಪ್ತಿಯ ಜನರ ಕೊರಗು.

ನೋಟು ರದ್ದತಿ ಅಡ್ಡಿಯಾಯ್ತೇ..ಕಾಮಗಾರಿಗೆ..!

ಕಳೆದ ಮೈತ್ರಿ ಸರ್ಕಾರದ ಸಮಯದಲ್ಲಿ ಈ ರಸ್ತೆ ಕಾಮಗಾರಿಗೆಂದು ಬಿಡುಗಡೆಯಾಗಿದ್ದ, ಸುಮಾರು ಎರಡು ಕೋಟಿಗೂ ಹೆಚ್ಚು ಅನುದಾನವನ್ನು ಬಿಜೆಪಿ ಸರ್ಕಾರ ತಡೆ ಹಿಡಿದಿದೆ ಎಂಬ ಆರೋಪ ಶಾಸಕರಾದಿಯಾಗಿ ಸ್ಥಳೀಯ ಜನ ಪ್ರತಿನಿಧಿಗಳದ್ದಾದರೆ.ಮತ್ತೆ ಸರ್ಕಾರ ತಡೆ ಹಿಡಿದರೆ ಜನಪರ ಹೊತ್ತಿರುವ ನಿಮಗೆ ಅನುದಾನವನ್ನು ಬಿಡುಗಡೆ ಮಾಡಿಸುವ ಜವಬ್ದಾರಿಯಿಲ್ಲವೆ ಎಂಬ ಪ್ರಶ್ನೆ ಸ್ಥಳೀಯರದ್ದು. 

ತೇಪೆ ಕಾರ್ಯಕ್ಕೆ ಲಕ್ಷಾಂತರ ಹಣ..?

ಚುನಾವಣೆ ಸಂದರ್ಭದಲ್ಲಿ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ಈ ರಸ್ತೆಯ ಮೇಲೆ ಕೆಲವರಿಗೆ ಎಲ್ಲಿಲ್ಲದ ಪ್ರೀತಿ ಬಂದುಬಿಡುತ್ತದೆ.ಸುಮಾರು 14.5ಕಿಮಿ ರಸ್ತೆಗೆ ಶಾಶ್ವತ ಕಾಮಗಾರಿ ನಡೆಸದೆ ಜಿಪಂ,ತಾಪಂ ಅನುಧಾನದಲ್ಲಿ ಅದೇಷ್ಟು ಸಲ  ಗುಂಡಿಗಳಿಗೆ ಮಣ್ಣು ತುಂಬಿ ಲಕ್ಷಾಂತರ ಹಣ ವೆಚ್ಚಮಾಡಿದ್ದಾರೋ.ಇದರ ಗುತ್ತಿಗೆ ಪಡೆದ ಆ ಗುತ್ತಿಗೆದಾರರನ ಅದೃಷ್ಟ ಹೇಳತೀರದು.

ಇತ್ತೀಚೆಗೆ ಸ್ಥಳೀಯರ ಆಕ್ರೋಶ ಹೆಚ್ಚಾದ ಹಿನ್ನಲೆ ಕೆಲ ಅನುಧಾನದಲ್ಲಿ ದಡಿಗಟ್ಟಮಡಗು – ಗೌಡನಕುಂಟೆ ವರೆಗೆ ಡಾಂಬಾರ್ ಕಾಮಗಾರಿ ನಡೆಸಿದ್ದರೆ ಲಿಂಗಧೀರನಹಳ್ಳಿ – ಪಚ್ಚಾರನಹಳ್ಳಿಯವರೆಗೆ ಕೆಲವೇ ಕಿಲೋ ಮೀಟರ್ ರಸ್ತೆ ಕಾಮಗಾರಿ ನಡೆಸಿದ್ದು ಅದೂ ಸಹ ಕಳಪೆ ಕಾಮಗಾರಿಯಿಂದ ಹಾಳಾಗಿದೆ ಎಂಬುದು ಸ್ಥಳೀಯರ ಆಕ್ರೋಶವಾಗಿದೆ.

ಒಟ್ಟಾರೆ ಜವಬ್ದಾರಿ ಮರೆತು ಮತ ಚಲಾಯಿಸಿದರೆ ಏನಾಗುತ್ತದೆ ಎಂಬುದಕ್ಕೆ ಸ್ಥಳೀಯ ಜನತೆ ಬಹು ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಲೇ ಬರುತ್ತಿರುವುದು ಸಾಕ್ಷಿಯಾಗಿದೆ.

ಕನಿಷ್ಠ ಸ್ಥಳೀಯ ಗ್ರಾಮಗಳಿಗಲ್ಲದೆ ನಂದಿ ಬೆಟ್ಟ,ಎಸ್.ಎಸ್.ಘಾಟಿ,ಗೊರವನಹಳ್ಳಿ ಲಕ್ಷ್ಮೀದೇವಾಲಯ ಸಂಪರ್ಕ ಕಲ್ಪಿಸುವ ಮೂಲಕ ಪ್ರವಾಸೋಧ್ಯಮಕ್ಕೂ ಒತ್ತು ಸಿಗುವುದು ಎಂದು….? ಎಷ್ಟು ಸರಿ  ಕಿಂದರಿ ಬಾರಿಸುತ್ತಲೇ ಇರುವುದು ತಿಳಿಯದಾಗಿದೆ.

ರಾಜಕೀಯ

ಮೋದಿ ಅವಧಿಯಲ್ಲಿ ರೇಲ್ವೆ ವಲಯ ಭಾರೀ ಅಭಿವೃದ್ಧಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಮೋದಿ ಅವಧಿಯಲ್ಲಿ ರೇಲ್ವೆ ವಲಯ ಭಾರೀ ಅಭಿವೃದ್ಧಿ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ನವದೆಹಲಿ: ಭಾರತೀಯ ರೈಲ್ವೆ ಕ್ಷೇತ್ರದ ಅಭಿವೃದ್ಧಿಗಾಗಿ ರೇಲ್ವೆ ತಿದ್ದುಪಡಿ ಮಸೂದೆ 2024 ಅನ್ನು ಬೆಂಬಲಿಸಿದ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ (HD Deve Gowda) ಅವರು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ

[ccc_my_favorite_select_button post_id="103952"]
ಬಹುಭಾಷಾ ಕಲಾವಿದೆ ಶಬಾನಾ ಆಜ್ಮಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ.. 10 ಲಕ್ಷ ರೂ ಚೆಕ್ ನೀಡಿದ ಸಿಎಂ

ಬಹುಭಾಷಾ ಕಲಾವಿದೆ ಶಬಾನಾ ಆಜ್ಮಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ.. 10 ಲಕ್ಷ

ಬೆಂಗಳೂರು; 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಕೊಡಮಾಡುವ ಜೀವಮಾನ ಸಾಧನೆ ಪ್ರಶಸ್ತಿಯನ್ನು ಭಾರತೀಯ ಚಿತ್ರರಂಗದ ಮೇರು ನಟಿ, ಬಹುಭಾಷಾ ಕಲಾವಿದೆ ಶಬಾನಾ ಆಜ್ಮಿ (shabana azmi) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರು ಕಾವೇರಿ

[ccc_my_favorite_select_button post_id="103935"]
ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದರೂ ಇನ್ಸೂರೆನ್ಸ್ ಕಂಪನಿ ವಿಮೆ ಪಾವತಿಸಬೇಕು: ಹೈಕೋರ್ಟ್

ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದರೂ ಇನ್ಸೂರೆನ್ಸ್ ಕಂಪನಿ ವಿಮೆ ಪಾವತಿಸಬೇಕು: ಹೈಕೋರ್ಟ್

ಚೆನ್ನೈ (High court judgment): ಅಪಘಾತದ ಸಂದರ್ಭದಲ್ಲಿ ಚಾಲಕ ನಿಯಮಗಳನ್ನು ಗಾಳಿಗೆ ತೂರಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದರೂ ಸಂತ್ರಸ್ತರಿಗೆ ವಿಮೆ ಪರಿಹಾರ ಪಾವತಿಸುವ ಹೊಣೆ ವಿಮಾ ಸಂಸ್ಥೆಯ ಮೇಲಿರುತ್ತದೆ. ಚಾಲಕ ಕುಡಿದ ಮತ್ತಿನಲ್ಲಿ

[ccc_my_favorite_select_button post_id="103668"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ತನ್ನದಾಗಿಸಿಕೊಂಡಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಕೀವಿಸ್ ಪಡೆ 50 ಓವರ್‌ಗಳಲ್ಲಿ 7

[ccc_my_favorite_select_button post_id="103912"]
ರೌಡಿಶೀಟರ್ ಬರ್ಬರ ಹತ್ಯೆ; ಐವರ ಬಂಧನ

ರೌಡಿಶೀಟರ್ ಬರ್ಬರ ಹತ್ಯೆ; ಐವರ ಬಂಧನ

ಬೆಂಗಳೂರು: ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ನಡೆದಿದ್ದ ರೌಡಿಶೀಟರ್‌ನ ಬರ್ಬರ ಹತ್ಯೆ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ (Arrest). ಮುನಿರಾಜು (24 ವರ್ಷ), ರಾಜೇಶ್ (21 ವರ್ಷ), ಯತೀಶ್ ಗೌಡ (26 ವರ್ಷ), ವಿನಯ್ ಕುರ್ಮಾ (25 ವರ್ಷ) ಹಾಗೂ

[ccc_my_favorite_select_button post_id="103919"]
ಕಾರು‌ ಬಸ್ ನಡುವೆ ಭೀಕರ ಅಪಘಾತ; ಕಾರಿಗೆ ಬೆಂಕಿ‌.. ತಾಯಿ ಮಗನ ಸಜೀವ ದಹನ

ಕಾರು‌ ಬಸ್ ನಡುವೆ ಭೀಕರ ಅಪಘಾತ; ಕಾರಿಗೆ ಬೆಂಕಿ‌.. ತಾಯಿ ಮಗನ ಸಜೀವ

ಚಿಕ್ಕಬಳ್ಳಾಪುರ: ಕಾರು ಹಾಗೂ ಖಾಸಗಿ ಬಸ್ ನಡುವೆ ಭೀಕರ ಅಪಘಾತ (Accident) ಸಂಭವಿಸಿದ ಪರಿಣಾಮ, ಕಾರಿಗೆ ಬೆಂಕಿ ಹೊತ್ತಿಕೊಂಡು ಧಗ ಧಗ ಹೊತ್ತಿ ಉರಿದು ತಾಯಿ-ಮಗ ಸಜೀವ ದಹನವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ

[ccc_my_favorite_select_button post_id="103908"]

ಆರೋಗ್ಯ

ಸಿನಿಮಾ

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ತುಮಕೂರು: ಬೆಂಗಳೂರು ನಡೆದ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಗೈರಾದ ಖ್ಯಾತ ನಟ, ನಟಿಯರ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಚಿತ್ರರಂಗದವರ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎಂದು

[ccc_my_favorite_select_button post_id="103709"]
error: Content is protected !!