Site icon Harithalekhani

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮತ್ತೆ ನಾಲ್ಕು ಮಂದಿ ಕರೊನಾ ಸೋಂಕಿತರ ಸಾವು / ಇಂದು ನಲವತ್ತು ಮಂದಿಗೆ ಸೋಂಕು ದೃಢ / ಇಪ್ಪತ್ತೊಂಬತ್ತು ಜನ ಗುಣಮುಖ

ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಸದ್ದಿಲ್ಲದೆ ಕರೊನಾ ಸೋಂಕು ತನ್ನ ಉಗ್ರ ಸ್ವರೂಪ ತಾಳಲಾರಂಭಿಸಿದ್ದು ಸಾವಿನ ಸಂಖ್ಯೆ ದಿನೇ ದಿನೆ ಏರಿಕೆಯಾಗುತ್ತಿದೆ.

ಅನಿಯಂತ್ರಿತ ಸಕ್ಕರೆ ಕಾಯಿಲೆ ಹಾಗೂ ಶ್ವಾಸಕೋಶದ ತೊಂದರೆಯಿಂದಾಗಿ ಇಂದು ನಾಲ್ಕು ಮಂದಿ ಕರೊನಾ ಸೋಂಕಿತರು ಸಾವನಪ್ಪುವ ಮೂಲಕ ತಾಲೂಕಿನಲ್ಲಿ ಕರೊನಾ ಸೋಂಕಿತರು ಸಾವನಪ್ಪಿರುವ ಸಂಖ್ಯೆ 30ಕ್ಕೇರಿದೆ.

ತಹಶಿಲ್ದಾರ್ ಟಿ.ಎಸ್.ಶಿವರಾಜ್ ಅವರು ಬಿಡುಗಡೆ ಮಾಡಿರುವ ತಾಲೂಕಿನ ಹೆಲ್ತ್ ಬುಲೆಟಿನ್ ಅನ್ವಯ, ಶುಕ್ರವಾರದ ಸಂಜೆಯ ವರಗೆ.20 ಮಂದಿ ಪುರುಷರು ಹಾಗೂ 20 ಮಂದಿ ಮಹಿಳೆಯರು ಸೇರಿ ಒಟ್ಟು ನಲವತ್ತು ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ.

ಆಸ್ಪತ್ರೆಯ ಮೂಲಗಳು ಹರಿತಲೇಖನಿ ನೀಡಿರುವ ಮಾಹಿತಿಯಂತೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ತೂಬಗೆರೆ ವ್ಯಾಪ್ತಿಯ 60 ವರ್ಷದ ಮಹಿಳೆ, ಆಕಾಶ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಕಲ್ಲುಪೇಟೆಯ 42 ವರ್ಷದ ಪುರುಷ, ತ್ಯಾಗರಾಜನಗರದ 36 ವರ್ಷದ ಪುರುಷ ಹಾಗೂ ದೇವರಾಜನಗರದ 70 ವರ್ಷದ ಪುರುಷ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ. ಅಲ್ಲದೆ 29 ಮಂದಿ ಸೋಂಕಿನಿಂದ ಗುಣಮುಖರಾಗಿ ಮರಳಿದವರು ಸೇರಿದ್ದಾರೆ.

ಹರಿತಲೇಖನಿಗೆ ದೊರಕಿರುವ ವರದಿಯಂತೆ,ಟ್ಯಾಂಕ್ ರಸ್ತೆಯಲ್ಲಿ 6, ತೂಬಗೆರೆ 4, ಸೋಮೇಶ್ವರ ಬಡಾವಣೆ 3, ಕೊನಘಟ್ಟ ಆಸ್ಪತ್ರೆಯ ಲ, ಪಾಲನಜೋಗಹಳ್ಳಿ , ದೇವರಾಜನಗರ, ಬ್ರಾಹ್ಮಣರ ಬೀದಿ, ರಾಜೀವ್ ಗಾಂಧಿ ಬಡಾವಣೆ, ಕರೇನಹಳ್ಳಿ, ಪೊಲೀಸ್ ಕ್ವಾಟ್ರಸ್ ಸಮೀಪದ ಮುಗೋಳಪ್ಪ ಬಿಲ್ಡಿಂಗ್ ನಲ್ಲಿ ತಲಾ 2 ಹಾಗೂ ಶಾಂತಿನಗರ, ಮಜರಾಹೊಸಹಳ್ಳಿ, ರಾಜೀವ್ ಗಾಂಧಿ ನಗರ, ಕೊಂಗಾಡಿಯಪ್ಪ ರಸ್ತೆ, ಎಲೆಪುರ, ಚೌಡೇಶ್ವರಿ ಬೀದಿ, ಬಾಶೆಟ್ಟಿಹಳ್ಳಿ, ವಿದ್ಯಾನಗರ, ಮಂಗಳ ಶಾಲೆ ಸಮೀಪ, ಕೊನಘಟ್ಟ, ಸೊಣ್ಣೆನಹಳ್ಳಿ ಮತ್ತು ರೈಲ್ವೇ ಸ್ಟೇಷನ್ ಬಳಿ ತಲಾ ಒಬ್ಬರಲ್ಲಿ ಸೊಂಕು ದೃಡಪಟ್ಟಿದೆ.

ಪ್ರಸ್ತುತ ತಾಲೂಕಿನಲ್ಲಿ 1063 ಮಂದಿಗೆ ಸೋಂಕು ತಗುಲಿದ್ದು,750 ಮಂದಿ ಗುಣಮುಖರಾಗಿದ್ದರೆ 30 ಮಂದಿ ಸಾವನಪ್ಪಿದ್ದಾರೆ.

ಸೋಂಕಿಗೆ ಒಳಗಾದ 55 ಮಂದಿಯನ್ನು ದೊಡ್ಡಬಳ್ಳಾಪುರ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಉಳಿದ 228 ಮಂದಿಯನ್ನು ದೇವನಹಳ್ಳಿ / ಹಜ್ ಭವನ/ಖಾಸಗಿ ಆಸ್ಪತ್ರೆ / ಹೊಂ ಹೈಸೋಲೇಷನ್ / ಇಸ್ತೂರಿನ ವಸತಿ ನಿಲಯ / ಬಚ್ಚಹಳ್ಳಿ ವಸತಿ ನಿಲಯ / ಬೆಂಗಳೂರಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಹಾಗೂ ಕೆಂಗೇರಿಯ ಮಹಾವೀರ್ ಜೈನ್ ವಿದ್ಯಾರ್ಥಿ ನಿಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

Exit mobile version