ಮಣ್ಣಿನ ಆರೋಗ್ಯವನ್ನು ಮಕ್ಕಳಂತೆ ಜೋಪಾನವಾಗಿ ನೋಡಿಕೊಳ್ಳಬೇಕು

ದೊಡ್ಡಬಳ್ಳಾಪುರ: ಮಣ್ಣನ್ನು ಮಕ್ಕಳಂತೆ ಜೋಪಾನವಾಗಿ ನೋಡಿಕೊಳ್ಳದೆ ಇದ್ದರೆ ಅದು ಬೆಳೆಗಳ ಮೇಲಷ್ಟೇ ಪರಿಣಾಮ ಬೀರುವುದಿಲ್ಲ. ನಮ್ಮ ಆರೋಗ್ಯದ ಮೇಲೂ ಕೆಟ್ಟಪರಿಣಾಮ ಬೀರಲಿದೆ ಎಂದು ಸಾಯಿಲ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ವಾಸು ಹೇಳಿದರು.

ಅವರು ತಾಲ್ಲೂಕಿನ ನಾಗಸಂದ್ರ ಗ್ರಾಮದ ಮುದ್ದಪ್ಪ ಅವರ ತೋಟದಲ್ಲಿ ಯುವ ಸಂಚಲನ ವತಿಯಿಂದ ನಡೆದ ಕಳೆ ಹಾಗೂ ಬೆಳೆ ಕುರಿತದಾದ ಕಾರ್ಯಗಾರದಲ್ಲಿ ಮಾತನಾಡಿದರು.

ಮಣ್ಣಿನ ಆರೋಗ್ಯ ಸರಿಯಾಗಿ ಇಲ್ಲದೇ ಇರುವುದೇ ಮನುಷ್ಯನ ಆರೋಗ್ಯವು ಹಾಳಾಗಲು ಕಾರಣವಾಗಿದೆ. ಮಣ್ಣಿನ ಆರೋಗ್ಯ ಸರಿಹೋಗದೆ ಮನುಷ್ಯನ ಆರೋಗ್ಯ ಸರಿಯಾಗುವುದಿಲ್ಲ. ಯಾವುದೇ ರೀತಿಯ ಔಷಧಿ ನೀಡಿದರು ಸಹ ಅದು ತಾತ್ಕಾಲಿನ ಶಮನಷ್ಟೇ ವಿನಹ ಶಾಶ್ವತ ಪರಿಹಾರ ಆಗುವುದಿಲ್ಲ. ಹಸಿರು  ಕ್ರಾಂತಿ ದೇಶದ ಜನರ ಹಸಿವು ನೀಗಿಸಿದೆ ಎನ್ನಲಾಗುತ್ತದೆ. ಆದರೆ ಅದೇ ಸಂದರ್ಭದಲ್ಲಿ ಶತಮಾನಗಳ ಕಾಲದಿಂದ ಆರೋಗ್ಯಕರವಾಗಿದ್ದ ಮಣ್ಣಿಗೆ ಅಳತೆಯೇ ಇಲ್ಲದಂತೆ ರಾಸಾಯನಿಕ ಗೊಬ್ಬರಗಳನ್ನು ಸುರಿದು  ಫಲವತ್ತತೆಯನ್ನು ಹಾಳುಮಾಡಲಾಗಿದೆ. ಮತ್ತೆ ಮಣ್ಣಿನ ಆರೋಗ್ಯ ಸರಿ ಮಾಡಬೇಕಾದರೆ ದಶಕಗಳೇ ಬೇಕಾಗಲಿದೆ ಎಂದು ಹೇಳಿದರು.

ಕಳೆ ಗಿಡಗಳ ಬಗ್ಗೆ ರೈತರಿಗೆ ತಪ್ಪು ಮಾಹಿತಿ ಹಾಗೂ ವಿನಾಕಾರಣ ಭಯಪಡುವಂತೆ ಮಾಡುವ ಮೂಲಕ ರಾಸಾಯನಿಕ ಕಂಪನಿಗಳು ಲಾಭ ಮಾಡುತ್ತಿವೆ. ಯಾವತ್ತು ಸಹ ಮುಖ್ಯ ಬೆಳೆಗೆ ಕಳೆಗಿಡಗಳು ತೊಂದರೆಯುಂಟು ಮಾಡುವುದಿಲ್ಲ.ಆದರೆ ಅವುಗಳನ್ನು ಸಾಂಪ್ರದಾಯಿಕ ವಿಧಾನಗಳ ಮೂಲಕ ನಿಯಂತ್ರಿಸುವ ಕ್ರಮಗಳನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕಿದೆ. ಹಿರಿಯ ತಲೆಮಾರಿನ ರೈತರು ಎಂದೂ ಸಹ ರಾಗಿ ಬೆಳೆಗೆ ಕಳೆ ಅಡ್ಡಿಯುಂಟು ಮಾಡಿದ್ದರಿಂದ ಬೆಳೆ ಹಾಳಾಯಿತು, ಇಳುವರಿ ಕುಂಟಿತವಾಯಿತು ಎನ್ನುವ ಮಾತುಗಳನ್ನು ಹೇಳುವುದು ತೀರ ಕಡಿಮೆ ಎಂದರು.  

ಬೆಳೆಗೆ ಅಗತ್ಯ ಇರುವ 16 ಪೋಷಕಾಂಶಗಳು ಮಣ್ಣಿನಲ್ಲಿ ಶೇಖರಣೆಯಾಗಲು, ವೃದ್ಧಿಸಲು ಕಳೆ ಗಿಡಗಳು ನಮ್ಮ ಕಣ್ಣಿಗೆ ಕಾಣದಂತೆ ಸಾಕಷ್ಟು ಉಪಯುಕ್ತ ಕೆಲಸಗಳನ್ನು ಮಾಡುತ್ತವೆ. ಕಳೆಗಿಡಗಳ ಕಾರ್ಯಚಟುವಟಿಕೆಗಳನ್ನೂ ರೈತರು ತಿಳಿದುಕೊಳ್ಳಬೇಕು. ಬರೀ ಮುಖ್ಯ ಬೆಳೆಯಕಡೆಗಷ್ಟೇ ನಮ್ಮ ಗಮನ ಇರುತ್ತದೆ. ಮಣ್ಣಿಗೆ ಆರೋಗ್ಯ, ಫಲವತ್ತತೆ, ಮಣ್ಣಿನ ಆಳಕ್ಕೆ ನೀರು ಇಳಿಯಲು ಬಹುಮುಖ್ಯವಾಗಿ ಕೆಲಸ ಮಾಡುವುದೇ ಕಳೆಗಿಡಗಳು ಎಂದರು.

ಮುಖ್ಯಬೆಳೆಗೆ ಬರುವ ಕೀಟ,ರೋಗಗಳ ನಿಯಂತ್ರಣದಲ್ಲೂ ಕಳೆಗಿಡಗಳ ಪಾತ್ರವು ಮಹತ್ವದ್ದಾಗಿದೆ. ಮುಖ್ಯಬೆಳೆಯ ಬೇರುಗಳು ಮಣ್ಣಿನ ಆಳಕ್ಕೆ ಇಳಿದು ಪೋಷಕಾಂಶಗಳನ್ನು ಪಡೆಯಲು ಕಳೆಗಿಡಗಳು ಸಹಕಾರಿಯಾಗಿವೆ. ಕಳೆ ನಾಶಕ ಔಷಧಿಯನ್ನು ಸಿಂಪರಣೆ ಮಾಡುವುದರಿಂದ ಮಣ್ಣಿನ ಆರೋಗ್ಯದೊಂದಿಗೆ ಮನುಷ್ಯರ ಆರೋಗ್ಯದ ಮೇಲೂ ಕೆಟ್ಟಪರಿಣಾಮ ಬೀರುತ್ತದೆ. ಮಣ್ಣಿನಲ್ಲಿನ ಸೂಕ್ಷ್ಮಾಣು ಜೀವಿಗಳು ಸಾಯುವುದಲ್ಲದೆ ಕೆರೆ, ಕುಂಟೆಗಳಲ್ಲಿನ ಜಲಚರಗಳ ಆಹಾರ ಸರಪಳಿಯು ನಾಶವಾಗಲಿದೆ. ನಿಸರ್ಗದತ್ತವಾದ ಆಹಾರ ಸರಪಣಿ ನಾಶವಾದರೆ ಕೊರೊನಾ ವೈರಸ್ಗಿಂತಲು ದೊಡ್ಡ ವೈರಸ್ ಬೆಳೆವಣಿಗೆ ಮತ್ತು ಹಾವಳಿಗೆ ನಾವಾಗಿಯೇ ದಾರಿಮಾಡಿಕೊಟ್ಟಂತಾಗಲಿದೆ ಎಂದು ಎಚ್ಚರಿಸಿದರು.  

ಕಾರ್ಯಾಗಾರದ ಆಯೋಜಕ ಯುವ ಸಂಚಲದ ಅಧ್ಯಕ್ಷ ಚಿದಾನಂದ್ ಮಾತನಾಡಿ, ಮಣ್ಣಿನ ಆರೋಗ್ಯದಲ್ಲಿ ಬಹು ಬೆಳೆ ಪದ್ದತಿಯ ಪಾತ್ರವು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಾಗಿ ಸೇರಿದಂತೆ ಮತ್ತಿತರೆ ಬೆಳೆಗಳ ಮಧ್ಯದಲ್ಲಿ ಅಕ್ಕಡಿ ಸಾಲುಗಳ ಮಹತ್ವ ಮತ್ತು ಅಕ್ಕಡಿ ಪದ್ದತಿಯನ್ನು ಮತ್ತೆ ರೈತರು ಅನುಸರಿಸುವಂತೆ ಮಾಡಲು ಪ್ರಯತ್ನಿಸಲಾಗುವುದು. ಬಯಲು ಸೀಮೆ ಜಿಲ್ಲೆಗಳಲ್ಲಿ ಮಳೆ ಆಶ್ರಯದಲ್ಲಿ ಮುಂಗಾರು ಬೆಳೆ ಬೆಳೆಯುವುದನ್ನು ಮಾತ್ರ ಇತ್ತೀಚಿನ ದಿನಗಳಲ್ಲಿ ಕಾಣುತಿದ್ದೇವೆ. ಆದರೆ ಹಿಂಗಾರು ಬೆಳೆಯ ಕಡೆಗೆ ಮಳೆ ಆಶ್ರಯದ ರೈತರು ಅಷ್ಟಾಗಿ ಆಸಕ್ತಿಯನ್ನೇ ತೋರುತ್ತಿಲ್ಲ. ಹಿಂಗಾರು ಬೆಳೆ ಬೆಳೆಯುವ ಬಗ್ಗೆಯು ರೈತರಲ್ಲಿ ಆಸಕ್ತಿ ಮೂಡಿಸಿ ಬೆಳೆ, ತಳಿಗಳ ಆಯ್ಕೆ ಕುರಿತಂತೆ ಜಾಗೃತಿ ಮೂಡಿಸಲಾಗುವುದು. ಕೆಲ ರೈತರು ಈಗಾಗಲೇ ಆಸಕ್ತಿ ತೋರಿ ಈ ವರ್ಷದ ಹಿಂಗಾರಿನಲ್ಲೆ ಬೆಳೆ ಬೆಳೆಯಲು ಮುಂದೆ ಬಂದಿದ್ದಾರೆ. ಮುಂಗಾರಿನಷ್ಟೇ ಇಳುವರಿಯನ್ನು ಹಿಂಗಾರಿನ ಬೆಳೆಗಳಲ್ಲು ಪಡೆಯಲು ಸಾಕಷ್ಟು ಅವಕಾಶಗಳು ಇವೆ. ನಮ್ಮ ಹಿರಿಯರು ಮುಂಗಾರು, ಹಿಂಗಾರು ಎರಡೂ ಬೆಳೆಗಳಿಗು ಸಮಾನವಾದ ಪ್ರಾಮುಖ್ಯತೆ ನೀಡುತ್ತಿದ್ದ ಉದಾಹರಣೆಗಳು ಇವೆ ಎಂದರು.      

ಕಾರ್ಯಾಗಾರದಲ್ಲಿ ಪ್ರಗತಿಪರ ರೈತರಾದ ಬಚ್ಚಹಳ್ಳಿ ಸತೀಶ್, ಗಂಗಮುತ್ತಯ್ಯ, ಶ್ರವಣೂರು ರೋಹಿತ್, ಲಕ್ಷ್ಮೀದೇವಪುರ ನರಸಿಂಹರಾವ್, ಮಾಗಡಿ ತಾಲ್ಲೂಕಿನ ದೊಡ್ಡರಂಗಯ್ಯನಪಾಳ ಗ್ರಾಮದ ಕೃಷ್ಣಮೂರ್ತಿ, ಗಂಗಾಧರ್, ಯುವ ಸಂಚಲನದ ಸತೀಶ್ಕುಮಾರ್, ದಿವಾಕರ್ನಾಗ್, ಏಟ್ರಿಯ ಸಂಸ್ಥೆಯ ಮಂಜುನಾಥ್ ಇದ್ದರು.

ರಾಜಕೀಯ

ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ: ಸಿಎಂ  ಸಿದ್ದರಾಮಯ್ಯ

ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಗ್ಯಾರಂಟಿ ಸಮಿತಿಗಳಿಂದ ಶಾಸಕರ ಘನತೆಗೆ ಕುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ನುಡಿದರು. ಗ್ಯಾರಂಟಿ ಸಮಿತಿಯಿಂದ ಶಾಸಕರ ಘನತೆಗೆ ದಕ್ಕೆಯಾಗಿದೆ ಎಂಬ ಕುರಿತು ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದರು. ಅಧಿವೇಶನ ಮುಗಿಯುತ್ತಿದ್ದಂತೆ

[ccc_my_favorite_select_button post_id="104074"]
ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ಕೇಂದ್ರಕ್ಕೆ ಮಹತ್ವದ ವಿವಿಧ ಬೇಡಿಕೆಗಳನ್ನಿಟ್ಟ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ

ನವದೆಹಲಿ: ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಮೈಸೂರು ಮತ್ತು ಧಾರವಾಡ ವಿವಿಗಳು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಕೇಂದ್ರ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡ (HD Deve Gowda) ಅವರು ಮನವಿ

[ccc_my_favorite_select_button post_id="103998"]
ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಬೆಂಗಳೂರು; ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರನ್ನು ಭೇಟಿಯಾದರು. ಈ ವೇಳೆ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ

[ccc_my_favorite_select_button post_id="104024"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ತನ್ನದಾಗಿಸಿಕೊಂಡಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಕೀವಿಸ್ ಪಡೆ 50 ಓವರ್‌ಗಳಲ್ಲಿ 7

[ccc_my_favorite_select_button post_id="103912"]
ಅತ್ತೆ-ಸೊಸೆ ಜಗಳ: ತಾಯಿ, ಮಗ ಆತ್ಮಹತ್ಯೆ

ಅತ್ತೆ-ಸೊಸೆ ಜಗಳ: ತಾಯಿ, ಮಗ ಆತ್ಮಹತ್ಯೆ

ಹಾಸನ: ಕೌಟುಂಬಿಕ ಕಲಹ ಹಿನ್ನೆಲೆ ಕೆರೆಗೆ ಹಾರಿ ತಾಯಿ-ಮಗ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ನಡೆದಿದೆ. ಜಯಂತಿ (60 ವರ್ಷ), ಭರತ್ (35 ವರ್ಷ) ಆತ್ಮಹತ್ಯೆಗೆ ಶರಣಾದ ತಾಯಿ-ಮಗ ಎಂದು ಗುರುತಿಸಲಾಗಿದೆ. ಭರತ್ ಕಳೆದ

[ccc_my_favorite_select_button post_id="104008"]
Doddaballapura: KSRTC ಬಸ್ ಅಪಘಾತ ಪ್ರಕರಣ.. ಹೊಸಹಳ್ಳಿ ಠಾಣೆ ಇನ್ಸ್ಪೆಕ್ಟರ್ ಪ್ರಶಂಸನೀಯ ಕಾರ್ಯ..!

Doddaballapura: KSRTC ಬಸ್ ಅಪಘಾತ ಪ್ರಕರಣ.. ಹೊಸಹಳ್ಳಿ ಠಾಣೆ ಇನ್ಸ್ಪೆಕ್ಟರ್ ಪ್ರಶಂಸನೀಯ ಕಾರ್ಯ..!

ದೊಡ್ಡಬಳ್ಳಾಪುರ (Doddaballapura): ನಿನ್ನೆ ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸಾವನಪ್ಪಿರುವ ಘಟನೆ ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ವಾಬಸಂದ್ರ ಬಳಿ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಹೊಸಹಳ್ಳಿ

[ccc_my_favorite_select_button post_id="104077"]

ಆರೋಗ್ಯ

ಸಿನಿಮಾ

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ತುಮಕೂರು: ಬೆಂಗಳೂರು ನಡೆದ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಗೈರಾದ ಖ್ಯಾತ ನಟ, ನಟಿಯರ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಚಿತ್ರರಂಗದವರ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎಂದು

[ccc_my_favorite_select_button post_id="103709"]
error: Content is protected !!