ನಾ ಕಂಡ ದೇವಾಲಯಗಳು – ರವಿಶಂಕರ್ ಕೂಡಲಿ

ದೇವಾಲಯಗಳ ಸರಣಿ ಆರಂಭ ಮಾಡುವಾಗ,ಯಾವ ದೇವಸ್ಥಾನದ ಮೂಲಕ ಆರಂಭಿಸಬೇಕು ಎಂದು ಆಲೋಚಿಸಿದಾಗ,ತಕ್ಷಣ ಮನಸ್ಸಿಗೆ ಮೂಡಿ ಬಂದದ್ದು ಯಾವುದೇ ಕಾರ್ಯ ನಿರ್ವಿಘ್ನವಾಗಿ ಮುಂದುವರೆಯಲು ಶ್ರೀ ಗಣೇಶನ ಮಂದಿರ ಪರಿಚಯದಿಂದ ಆರಂಭಿಸಿದರೆ ಸೂಕ್ತವೆನಿಸಿತು..

ಪ್ರಥಮಂ ವಿನಾಯಕಂ .. ಸರಿ , ಆದರೆ ದೇಶದ ಉದ್ದಗಲಕ್ಕೂ ಪ್ರಸಿದ್ಧವಾದ ನೂರಾರು ವಿನಾಯಕ ಮಂದಿರಗಳಿವೆ.. ನಮ್ಮ ರಾಜ್ಯದಲ್ಲೇ ಬಹಳ ಇದೆ.. ಯಾವ ಮಂದಿರ ಆಯ್ದು ಕೊಳ್ಳಲಿ ಎಂದು ಅನಿಸಿದಾಗ ಮೊಟ್ಟಮೊದಲು ಮೂಡಿಬಂದಿದ್ದೇ

#ಗುಡ್ಡಟ್ಟು ಮಹಾಹಣಪತಿ ದೇವಾಲಯ..

ಎಷ್ಟೊಂದು ದೇವಸ್ಥಾನಗಳಿರುವಾಗ ಇದೇ ಯಾಕೆ ಮನಸಿಗೆ ಬಂತು..

 ಕಾರಣ ಸ್ಪಷ್ಟ..

ಬಹುತೇಕರಿಗೆ ಇದರ ಪರಿಚಯವಿಲ್ಲ..

#ಗುಡ್ಡಟ್ಟು ಗಣಪತಿ ದೇವಾಲಯಯ ಇರುವುದು ಉಡುಪಿ ಜಿಲ್ಲೆಯ ಕುಂದಾಪುರದ ಬಳಿ.

ದೇಶದಾದ್ಯಂತ ಇರುವ ಗಣಪತಿ ದೇವಾಲಯದಲ್ಲಿ ಎಲ್ಲೂ ಕಾಣದ ವಿಶೇಷ ಸೇವೆಯೊಂದು , ಈ ದೇವಸ್ಥಾನದಲ್ಲಿ ನಡೆಯುತ್ತದೆ..

ಈ ದೇವಾಲಯದಲ್ಲಿರುವ ಗಣಪತಿಗೆ ಪ್ರತಿನಿತ್ಯ ಒಂದು ಸಾವಿರ ಕೊಡಗಳ ನೀರಿನ ಅಭಿಷೇಕ..!! 

ಹೌದು .. ಒಂದು ಸಾವಿರ ಕೊಡದಿಂದ ಜಲಾಭಿಷೇಕ..

ಹಾಗಂತ ನೀರನ್ನು ಮೋಟಾರ್ ಬಳಸಿ ಪಂಪ್ ಮಾಡಿ ಎತ್ತುವುದಿಲ್ಲ. ಹಗ್ಗ ಹಾಕಿ ನೀರು ಸೇದುವುದೂ ಇಲ್ಲ..

ಬಾವಿಯೊಳಗೆ ಇಳಿದು ಒಬ್ಬರು ನೀರು ತುಂಬಿಕೊಂಡು ಮತ್ತೊಬ್ಬರಿಗೆ ಹಸ್ತಾಂತರಿಸುತ್ತಾರೆ.. ಹಾಗೇ ಹಸ್ತಾಂತರ ಗೊಳ್ಳುತ್ತಾ ನೀರು , ಗಣಪತಿ ಮೂರ್ತಿಗೆ ಅಭಿಷೇಕ ಮಾಡಲಾಗುತ್ತದೆ

ಗ್ರಾಮದ ಆಸಕ್ತ ಜನರು , ಮತ್ತು ಹರಕೆ ಮಾಡಿಕೊಂಡಿರುವ ಭಕ್ತಾದಿಗಳು ಸೇರಿ ಒಂದು ಸಾವಿರ ಕೊಡ ನೀರಿನಿಂದ ವಿನಾಯಕ ದೇವರಿಗೆ ಅಭಿಷೇಕ ಮಾಡಲಾಗುತ್ತದೆ.. 

ಇನ್ನೂ ಆಶ್ಚರ್ಯ ವಿಷಯವೆಂದರೆ , ಮಾರನೇ ದಿನ ಬೆಳಿಗ್ಗೆ ನಿನ್ನೆ ಅಭಿಷೇಕ ಮಾಡಿದ್ದ ಅಷ್ಟೂ ನೀರನ್ನು ಹೊರತೆಗೆದು , ಅಂದಿನ ನೈವೇದ್ಯ ಮತ್ತು ಪ್ರಸಾದ ತಯಾರಿಸಲು ಬಳಕೆಯಾಗುತ್ತದೆ. 

ಹಾಗೂ ವಿನಾಯಕನ ಮೂರ್ತಿಯನ್ನು ಶುಭ್ರವಾದ ಬಟ್ಟೆಯಿಂದ ಚೂರೂ ನೀರು ಇಲ್ಲದಂತೆ ಒರೆಸಿ , ನಂತರವಷ್ಟೇ ಅಂದಿನ ದಿನದ ಅಭಿಷೇಕ ಮಾಡಲಾಗುತ್ತದೆ..

ಹಾಗಂತ , ನೀವು ಇದ್ದಕ್ಕಿದ್ದಂತೆ ದೇವಸ್ಥಾನಕ್ಕೆ ಹೋಗಿ ನೀರು ಸೇದುವ ಸೇವೆ ಮಾಡಲಾಗುವುದಿಲ್ಲ..

ಈಗ ನೀವು ಹೆಸರು ಬರೆಸಿದರೆ , ಕನಿಷ್ಠ ಆರು ವರ್ಷ ಕಾಯಬೇಕಾಗುತ್ತದೆ.. ಅಂದರೆ , ಮುಂದಿನ ಆರು ವರ್ಷಗಳ ವರೆಗೆ ಸೇವೆಗೆ ಭಕ್ತರು ಹೆಸರು ನೋಂದಾಯಿಸಿದ್ದಾರಂತೆ..!!

ಇದೆಲ್ಲಾ ಸರಿ.. ಆದರೆ ಈ ಪ್ರತೀತಿ ಏಕೆ?? ಸಾವಿರ ಕೊಡ ಪ್ರತಿನಿತ್ಯ ಏಕೆ..??

ಅದಕ್ಕೊಂದು ಹಿನ್ನೆಲೆ ಇದೆ..

ಬಹಳ ಹಿಂದೆ ತ್ರಿಪುರಾಸುರನೆಂಬ ರಾಕ್ಷಸ ಜನರಿಗೆ ಹಿಂಸೆ ಮಾಡುತ್ತಿದ್ದನಂತೆ.. ಅದು ಪರಮೇಶ್ವರನಿಗೆ ತಿಳಿದು , ತ್ರಿಪುರಾಸುರ ರಾಕ್ಷಸನನ್ನು  ಕೊಲ್ಲಲು ಯುದ್ದಕ್ಕೆ ಹೊರಡುವ ಮುನ್ನ , ಪರಮೇಶ್ವರ ಆದಿಯಲ್ಲಿ ಗಣಪನನ್ನು ಪೂಜಿಸದೇ ಯುದ್ದ ಆರಂಭಿಸಿದ್ದಕ್ಕಾಗಿ ರಾಕ್ಷಸನಿಂದ ಸೋಲುಂಟಾಗುತ್ತದೆಯಂತೆ..

ತನಗೆ ಸೋಲಾಗಲು ಗಣಪತಿ ಕಾರಣನೆಂದು , ಕೋಪಗೊಂಡ ಶಿವನು , ತ್ರಿಶೂಲವನ್ನು ಗಣಪತಿಯ ಮೇಲೆ ಎಸೆಯುತ್ತಾನೆ.. ಆಗ ತ್ರಿಶೂಲದಿಂದ ತಪ್ಪಿಸಿಕೊಳ್ಳಲು ಯತ್ನಿಸುವಾಗ ಗಣಪತಿಯು ಜೇನು ತುಂಬಿದ ಕೊಳದಲ್ಲಿ ಬೀಳುತ್ತಾನೆ.. ಮತ್ತು ಅಲ್ಲಿ ಸಾಕಷ್ಟು ಜೇನುತಿಂದ ಖುಷಿಯಲ್ಲಿ , ಶಿವನಿಗೆ ಜಯವಾಗಲೆಂದು ಹಾರೈಸುತ್ತಾನೆ..

ಶಿವ  ತ್ರಿಪುರಾಸುರನನ್ನು ಸಂಹರಿಸಿ , ಕೈಲಾಸಕ್ಕೆ ಮರಳುತ್ತಾನೆ..

ಆದರೆ ಜೇನು ಹೆಚ್ಚಾಗಿ ತಿಂದ ಕಾರಣ ಗಣಪತಿಯ ಮೈಯಲ್ಲಿ ಅಸಾಧ್ಯವಾದ ಪಿತ್ತವಾಗಿ ನರಳವುದನ್ನು ಕಂಡ ಶಿವಪಾರ್ವತಿಯರು , ದೇಹದ ಉರಿಶಮನಕ್ಕೆ ಸಲಹೆ ಕೊಟ್ಟಾಗ , ಅದರಂತೆ ಗಣಪತಿಯು ಈ ದೇವಸ್ಥಾದಲ್ಲಿ ಬಂದು ನೆಲೆಸುತ್ತಾನೆ..

ಹತ್ತಿರದಲ್ಲೇ ಹರಿಯುವ ನರಸಿಂಹ ತೀರ್ಥದ ನೀರು ವಾರಾಹಿ ನದಿಯಿಂದ ಸೇರುತ್ತದೆ..

ಅದೇ ನೀರಿನಲ್ಲಿ ಪ್ರತಿನಿತ್ಯ ಗಣಪತಿಗೆ ಸಾವಿರ ಕೊಡ ನೀರು ಬಾವಿಯಿಂದ ತುಂಬಿಕೊಂಡು ಅಭಿಷೇಕ ನಿರಂತರವಾಗಿ ಜರಗುತ್ತಿದ್ದರೆ ಮಾತ್ರ ಗಣಪತಿ ಸ್ವಾಮಿಯ ಮೈಉರಿ ಶಮನವಾಗುತ್ತದೆಯಂತೆ ಎಂದು ಅಲ್ಲಿನ ಅರ್ಚಕರು ಸ್ಥಳ ಮಹಿಮೆಯನ್ನು ತಿಳಿಸಿದರು.

ಇಲ್ಲಿರುವ ಗಣಪತಿ ಬಲಮುರಿ ಗಣಪತಿ ಯಾಗಿದ್ದು ನಂಬಿ ಬರುವ , ಸೇವೆಗೈಯುವ ಭಕ್ತರ  ಕೋರಿಕೆಗಳನ್ನು ಈಡೇರಿಸುತ್ರಾನೆ..

ಮೊದಲ ಬಾರಿಗೆ ಭೇಟಿ ಕೊಡುವ ಭಕ್ತರು ಬೆಳಿಗ್ಗೆ 11-30 ಸಮಯದಲ್ಲಿ ಅಲ್ಲಿ ಇದ್ದರೇ ,ನೀರು ತುಂಬುವ ಸೇವೆಯನ್ನು ವೀಕ್ಷಿಸಬಹುದು..

ನಂತರ ಮದ್ಯಾನಃ 1-30 ಗೆ ಪ್ರತಿನಿತ್ಯ ಭಕ್ತಾದಿಗಳಿಗೆ ಪ್ರಸಾದವಿರುತ್ತದೆ. ಪ್ರತಿಯೊಬ್ಬರೂ ಒಮ್ಮೆಯಾದರೂ ಜೀವನದಲ್ಲಿ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟು , ಅಪರೂಪದ ಸೇವೆಯಲ್ಲಿ ಭಾಗಿಯಾಗಬೇಕು..

ದೇವಾಲಯದ ವಿಳಾಸ

Sri Vinayaka Temple Guddattu,Shiriyara-Guddattu Road, Guddattu Kundapura, Yedadi Matyadi, Karnataka 576222

0820 259 5432

https://maps.app.goo.gl/NWvXxf1wdNTGbHB19

ಮಾಹಿತಿ : ರವಿಶಂಕರ್ ಕೂಡಲಿ

ನಾಳೆ , #ಎರಡನೇ ದೇವಾಲಯ ಪರಿಚಯ ಬರಲಿದೆ..

ರಾಜಕೀಯ

MP ಟಿಕೆಟ್ ಕಳೆದುಕೊಂಡು ಒಂದು ವರ್ಷ; ಪ್ರತಾಪ್ ಸಿಂಹ ಬೇಸರ

MP ಟಿಕೆಟ್ ಕಳೆದುಕೊಂಡು ಒಂದು ವರ್ಷ; ಪ್ರತಾಪ್ ಸಿಂಹ ಬೇಸರ

ಬೆಂಗಳೂರು: ಸಂಸದನಾಗಿ ಸಕ್ರಿಯವಾಗಿ ಕ್ಷೇತ್ರದ ಅಭಿವೃದ್ಧಿ ಮಾಡಿದರು, ಸ್ವಪಕ್ಷೀಯರ ರಾಜಕೀಯ ಕುತಂತ್ರದಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರತಾಪ್ ಸಿಂಹ (Pratap simha) ಅವರಿಗೆಟಿಕೆಟ್ ಕೈತಪಿತು. ಇದರಿಂದ ಕೆರಳಿದ ಪ್ರತಾಪ್ ಸಿಂಹ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ

[ccc_my_favorite_select_button post_id="104096"]
ಸಚಿವ ಎಂ.ಬಿ.ಪಾಟೀಲ ಭೇಟಿ ಮಾಡಿದ ಕಾನ್ಸುಲ್ ಜನರಲ್ ಇವೋಟ್ ಡಿ ವಿಟ್ಸರ್ವ್ಸ್: ರಾಜ್ಯದಲ್ಲಿ ಹೂಡಿಕೆಗೆ ನೆದರ್ಲೆಂಡ್ಸ್‌ ಆಸಕ್ತಿ

ಸಚಿವ ಎಂ.ಬಿ.ಪಾಟೀಲ ಭೇಟಿ ಮಾಡಿದ ಕಾನ್ಸುಲ್ ಜನರಲ್ ಇವೋಟ್ ಡಿ ವಿಟ್ಸರ್ವ್ಸ್: ರಾಜ್ಯದಲ್ಲಿ

ಬೆಂಗಳೂರು: ರಾಜ್ಯದ ವಿವಿಧ ಕೈಗಾರಿಕಾ ಮತ್ತು ಆರ್ & ಡಿ ವಲಯಗಳಲ್ಲಿ ತಮ್ಮ ದೇಶದ ನಾನಾ ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತಿ ಹೊಂದಿವೆ ಎಂದು ನೆದರ್ಲೆಂಡ್ಸ್‌ ಕಾನ್ಸುಲ್ ಜನರಲ್ ಇವೋಟ್ ಡಿ ವಿಟ್ಸರ್ವ್ಸ್ (Ivot

[ccc_my_favorite_select_button post_id="104093"]
ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಸಿಎಂ ಸಿದ್ದರಾಮಯ್ಯರ ಭೇಟಿಯಾದ ತಮಿಳುನಾಡು ಅರಣ್ಯ ಸಚಿವ.. ಮಹತ್ವದ ಚರ್ಚೆ

ಬೆಂಗಳೂರು; ತಮಿಳುನಾಡಿನ ಅರಣ್ಯ ಸಚಿವರಾದ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯರಾದ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಅವರನ್ನು ಭೇಟಿಯಾದರು. ಈ ವೇಳೆ ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ

[ccc_my_favorite_select_button post_id="104024"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

Champions Trophy; ಭಾರತದ ಮುಡಿಯೇರಿದ ಚಾಂಪಿಯನ್ಸ್ ಟ್ರೋಫಿ

ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಭಾರತ ಚಾಂಪಿಯನ್ಸ್ ಟ್ರೋಫಿಯನ್ನು (Champions Trophy) ತನ್ನದಾಗಿಸಿಕೊಂಡಿದೆ. ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಕೀವಿಸ್ ಪಡೆ 50 ಓವರ್‌ಗಳಲ್ಲಿ 7

[ccc_my_favorite_select_button post_id="103912"]
Doddaballapura: ನೇಣು ಬಿಗಿದುಕೊಂಡು ಅಪ್ರಾಪ್ತ ಬಾಲಕ ಆತ್ಮಹತ್ಯೆ..!

Doddaballapura: ನೇಣು ಬಿಗಿದುಕೊಂಡು ಅಪ್ರಾಪ್ತ ಬಾಲಕ ಆತ್ಮಹತ್ಯೆ..!

ದೊಡ್ಡಬಳ್ಳಾಪುರ: ಸುಮಾರು 15 ವರ್ಷದ ಅಪ್ರಾಪ್ತ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತಾಲೂಕಿನ ಪಿಂಡಕೂರುತಿಮ್ಮನಹಳ್ಳಿ ಹೊರವಲಯದಲ್ಲಿ ಸಂಭವಿಸಿದೆ. ಮೃತನನು ಪಿಂಡಕೂರುತಿಮ್ಮನಹಳ್ಳಿ ನಿವಾಸಿಗಳಾದ ಮಂಜಮ್ಮ, ಸುಬ್ಬರಾಯಪ್ಪ ದಂಪತಿಗಳ ಪುತ್ರ 15 ವರ್ಷ ರವಿಕುಮಾರ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು

[ccc_my_favorite_select_button post_id="104085"]

ಅತ್ತೆ-ಸೊಸೆ ಜಗಳ: ತಾಯಿ, ಮಗ ಆತ್ಮಹತ್ಯೆ

[ccc_my_favorite_select_button post_id="104008"]

ರೌಡಿಶೀಟರ್ ಬರ್ಬರ ಹತ್ಯೆ; ಐವರ ಬಂಧನ

[ccc_my_favorite_select_button post_id="103919"]

Suicide: ಬಸ್ ನಲ್ಲೇ ನೇಣಿಗೆ ಶರಣಾದ ಸಾರಿಗೆ

[ccc_my_favorite_select_button post_id="103856"]

ಮದುವೆ ಹಿಂದಿನ ದಿನ ವರ ಪರಾರಿ: FIR

[ccc_my_favorite_select_button post_id="103742"]
Doddaballapura: ಅಪಘಾತ.. ಶಿಕ್ಷಕನಿಗೆ ಗಂಭೀರ ಪೆಟ್ಟು..!

Doddaballapura: ಅಪಘಾತ.. ಶಿಕ್ಷಕನಿಗೆ ಗಂಭೀರ ಪೆಟ್ಟು..!

ದೊಡ್ಡಬಳ್ಳಾಪುರ (Doddaballapura): ಕಾರಿನಲ್ಲಿದ್ದವರು ಏಕಾಏಕಿ ಬಾಗಿಲು ತೆರೆದ ಪರಿಣಾಮ ಆಟೋದಲ್ಲಿ ತೆರಳುತ್ತಿದ್ದ ಶಿಕ್ಷಕನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಡಿಕ್ರಾಸ್ ರಸ್ತೆಯಲ್ಲಿ ಸಂಭವಿಸಿದೆ. ಗಾಯಗೊಂಡವರನ್ನು ತಾಲೂಕಿನ ಆರೂಢಿಯ ಶ್ರೀ ಅರವಿಂದ ಪ್ರೌಢಶಾಲೆಯ ಶಿಕ್ಷಕ ಸಿದ್ದಲಿಂಗಯ್ಯ ಎಂದು

[ccc_my_favorite_select_button post_id="104081"]

ಆರೋಗ್ಯ

ಸಿನಿಮಾ

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ಸಿನಿಮಾದವರ ನೆಟ್ಟು, ಬೋಲ್ಟು ಟೈಟ್ ಮಾಡುವ ಕಾರ್ಯ ಆರಂಭ..?

ತುಮಕೂರು: ಬೆಂಗಳೂರು ನಡೆದ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್ ಕಾರ್ಯಕ್ರಮಕ್ಕೆ ಗೈರಾದ ಖ್ಯಾತ ನಟ, ನಟಿಯರ ಕುರಿತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ (DK Shivakumar) ಚಿತ್ರರಂಗದವರ ನಟ್ಟು ಬೋಲ್ಟು ಟೈಟು ಮಾಡುತ್ತೇನೆ ಎಂದು

[ccc_my_favorite_select_button post_id="103709"]
error: Content is protected !!